ಗೂನಡ್ಕ: ಕಾಶ್ಮೀರದ ಪೆಹಲ್ಗಾಮಿನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪೇರಡ್ಕ ಗೂನಡ್ಕ ಮಸೀದಿಯ ವಠಾರದಲ್ಲಿ ಜುಮಾ ನಮಾಝಿನ ಬಳಿಕ ಪ್ರತಿಭಟನಾ ಸಭೆಯು ನಡೆಯಿತು. ಜಮಾಅತ್ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡ ಅತ್ಯಂತ ಹೇಯ ಕೃತ್ಯವಾಗಿದೆ.ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರವು ಅತಿಶೀಘ್ರವಾಗಿ
ಉಗ್ರಗಾಮಿಗಳನ್ನು ಮಟ್ಟ ಹಾಕಿ ತಕ್ಕ ಶಿಕ್ಷೆ ನೀಡಬೇಕು ಎಂದರು. ಪೇರಡ್ಕ ಗೂನಡ್ಕ ಜುಮಾ ಮಸೀದಿಯ ಖತೀಬರಾದ ಅಹ್ಮದ್ ನಈಂ ಫೈಝಿ ಅಲ್ ಮಅಬರಿ ಮಾತನಾಡಿ ಈ ದಾಳಿಯನ್ನು ಖಂಡಿಸುತ್ತೇವೆ. ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಯಾವುದೇ ಹಂತದ ಕ್ರಮವನ್ನೂ ನಾವು ಬೆಂಬಲಿಸುತ್ತೇವೆ. ಜಮಾತ್ ಉಪಾಧ್ಯಕ್ಷರಾದ ಟಿ ಬಿ ಹನೀಫ್, ಕಾರ್ಯದರ್ಶಿ ಪಿ ಕೆ ಉಮ್ಮರ್ ಗೂನಡ್ಕ, ಖಜಾಂಜಿ ಮೊಹಮ್ಮದ್ ಕುಂಞಿ ತೆಕ್ಕಿಲ್, ಪೇರಡ್ಕ,ಸಮಿತಿ ಸದಸ್ಯರುಗಳಾದ ಉಸ್ಮಾನ್, ಇಬ್ರಾಹಿಂ ಸೆಟ್ಟಿಯಡ್ಕ, ಪಾಂಡಿ ಉಸ್ಮಾನ್, ಡಿ ಎ ಮೊಯಿದು, ಹಾರಿಸ್ ಆಝರಿ, ಎಂ, ಆರ್ ಡಿ ಎ, ಪದಾಧಿಕಾರಿಗಳು ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು,ಗೂನಡ್ಕ ತೆಕ್ಕಿಲ್ ಶಾಲೆಯ ಹೆಚ್ ಎಂ ಸಂಪತ್, ರಹೀಮ್ ಬೀಜದಕಟ್ಟೆ ಮತ್ತಿತರರು ಇದ್ದರು.