ಸುಳ್ಯ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಸಮಿತಿ ವತಿಯಿಂದ ಕಾಶ್ಮೀರದ ಪಹಾಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಘಟನೆಯಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೆವಿಜಿ ಕ್ಯಾಂಪಸ್ ಬಳಿ ನಡೆದ ಸಭೆಯಲ್ಲಿ.ಹಿರಿಯ ಕಾರ್ಯಕರ್ತರಾದ ಲೋಹಿತ್ ಬಿಳಿಯಾರು ಮಾತನಾಡಿದರು. ತಾಲೂಕು ಸಂಚಾಲಕ ನಂದನ್ ಪವಿತ್ರಮಜಲು ಕಾರ್ಯಕ್ರಮ ನಿರೂಪಿಸಿದರು.
ಭರತ್ ಅಡೂರ್ ವಂದಿಸಿದರು.ಸಭೆಯಲ್ಲಿ ನಗರ ಕಾರ್ಯದರ್ಶಿ ಪ್ರೀತೆಶ್ , ಹಾಸ್ಟೆಲ್ ಪ್ರಮುಖ್ ಸುಹಾಸ್, ಸದಸ್ಯರಾದ ಕೀರ್ತನ್,ಬಸವರಾಜ್, ಹೃತ್ವಿಕ್,ಹರ್ಷ,ವಿಕಾಸ್,ತಮ್ಮಯ್ಯ ಅವರು ಉಪಸ್ಥಿತರಿದ್ದರು.