ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಫೆ.2ರಂದು ನಡೆಯುವ ಚುನಾವಣೆಗೆ 25 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಸಾಮಾನ್ಯ 13, ಮಹಿಳಾ ಮೀಸಲು 2, ಹಿಂದುಳಿದ ವರ್ಗ ಎ 1, ಹಿಂದುಳಿದ ವರ್ಗ ಬಿ 1, ಪರಿಶಿಷ್ಟ ಜಾತಿ ಮೀಸಲು, ಪರಿಶಿಷ್ಟ ಪಂಗಡ ತಲಾ ಒಂದು ಸ್ಥಾನ ಇದೆ.ನಾಮಪತ್ರ ಸಲ್ಲಿಸುವ ಅವಧಿ
ಮುಕ್ತಾಯಗೊಂಡಾಗ ಸಾಮಾನ್ಯ ಕ್ಷೇತ್ರದ 13 ಸ್ಥಾನಗಳಿಗೆ 20 ನಾಮಪತ್ರ ಸಲ್ಲಿಕೆಯಾಗಿದೆ. ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಕ್ಕೆ ಎರಡು ನಾಮಪತ್ರ, ಪರಿಶಿಷ್ಟ ಪಂಗಡ ಒಂದು ಸ್ಥಾನಕ್ಕೆ ಎರಡು ನಾಮಪತ್ರ,
ಹಿಂದುಳಿ ವರ್ಗ ಬಿ ಕ್ಷೇತ್ರದ ಒಂದು ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಹಿಂದುಳಿದ ವರ್ಗ ಎ ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಜ.26ರಂದು ನಾಮಪತ್ರದ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯುಲು ಜ.27 ಕೊನೆಯ ದಿನವಾಗಿದೆ.
ನಾಮ ಪತ್ರ ಸಲ್ಲಿಸಿದವರು:
ಸಾಮಾನ್ಯ ಮೀಸಲು ಸ್ಥಾನಕ್ಕೆ ನಿತ್ಯಾನಂದ ಮುಂಡೋಡಿ, ಪಿ.ಸಿ. ಜಯರಾಮ, ತೀರ್ಥರಾಮ ಎ.ವಿ, ಸದಾನಂದ ಮಾವಜಿ, ಸೋಮಶೇಖರ ಕೆ.ಆರ್, ಜ್ಞಾನೇಶ್ ಎನ್.ಎ, ದೊಡ್ಡಣ್ಣ ಗೌಡ ಬಿ, ಸದಾನಂದ ಕೆ.ಸಿ., ಹೇಮಚಂದ್ರ ಐ.ಕೆ, ಲಕ್ಷ್ಮೀ ನಾರಾಯಣ ನಡ್ಕ, ಚಂದ್ರ ಕೋಲ್ಚಾರ್, ಸದಾನಂದ ಕೆ.ಸಿ, ದಾಮೋದರ ಎನ್.ಎಸ್,ಶ್ರೀಕಾಂತ್ ಎಂ, ಶ್ರೀಹರಿ ಕೆ.ಬಿ.ಕುಕ್ಕುಡೇಲು, ಮೋಹನ್ರಾಮ್, ದಿನೇಶ್ ಮಡಪ್ಪಾಡಿ, ನಾರಾಯಣ ಗೌಡ ಕೆ.ಸಿ, ಶೈಲೇಶ್ ಅಂಬೆಕಲ್ಲು, ರಜತ್ ಡಿ ನಾಮಪತ್ರ ಸಲ್ಲಿಸಿದರು. ಮಹಿಳಾ ಮೀಸಲು ಕ್ಷೇತ್ರದಿಂದ ನಳಿನಿ.ಎಸ್.ಎಸ್, ಪ್ರೇಮ ಕೆ.ಎಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಪಿ.ಎಸ್.ಗಂಗಾಧರ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಜಯಲಲಿತ ಕೆ.ಎಸ್ ಹಾಗೂ ಭೋಜಪ್ಪ ನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ.