ಪೇರಡ್ಕ:ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕವಾಗಿರಬೇಕು ಎಂದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಹೇಳಿದರು. ಅವರು ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರೋಪ ಸಮಾರಂಭದಲ್ಲಿ ದುವಾಃಶೀರ್ವಾಚನ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಹಿದ್ದೀನ್ ಜುಮಾ ಮಸೀದಿಯ

ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ ನಈಮ್ ಫೈಝಿ ಅಲ್ ಮುಅಬರಿ ಪ್ರಸ್ತಾವನೆ ಗೈದರು. ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಶಮೀರ್ ದಾರಿಮಿ ಕೊಲ್ಲಂ ಮಾತನಾಡಿದರು.
ಎಂ.ಆರ್.ಡಿ .ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಅಬ್ದುಲ್ಲಾ ಕುಂಞಿ ಸಂಕೇಶ್, ಎಸ್ .ಕೆ. ಎಸ್ .ಎಸ್ .ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಹಮೀದ್ ಮುಸ್ಲಿಯಾರ್, ಹಾರೀಸ್ ಅಝ್ಹರಿ ಗಟ್ಟಮನೆ, ನೌಶಾದ್ ಅಝ್ಹರಿ, ಕಾರ್ಯದರ್ಶಿ ಪಿ.ಕೆ ಉಮ್ಮರ್, ಉಪಾಧ್ಯಕ್ಷ ಟಿ.ಬಿ ಹನೀಫ್ ಕೋಶಾಧಿಕಾರಿ ಮಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಗೌರವಾಧ್ಯಕ್ಷ ಆರಿಫ್ ಟಿ.ಇ,ತೆಕ್ಕಿಲ್, ಕೆ.ಎಂ ಇಸ್ಮಾಯಿಲ್ ಮೊದಲಾದವರಿದ್ದರು. ಉರೂಸ್ ಕಾರ್ಯಕ್ರಮದ ಪ್ರತೀ ದಿನ ಬಂದ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂರು ದಿನದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.