ಪಂಜ: ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ 6 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಂಜ ಇದರ ನಿವೃತ್ತ ಸಿಬ್ಬಂದಿ ಆನಂದ ಗೌಡ ಜಳಕದಹೊಳೆ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ,
ಡಾ. ದೇವಿಪ್ರಸಾದ್ ಕಾನತ್ತೂರು ವಿಜೇತರಿಗೆ ಬಹುಮಾನ ವಿತರಿಸಿದರು. ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ನ
ಅಧ್ಯಕ್ಷ ಹಿತೇಶ್ ಪಂಜದಬೈಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗಂಗಾಧರ ಗೌಡ ಮರಕ್ಕಡ ಜಿತೇಂದ್ರ ಗೌಡ ಪಂಬೆತ್ತಾಡಿ, ರಾಧಾಕೃಷ್ಣ ಗೌಡ ಪೈಕ, ಪವನ್ ಪಲ್ಲತ್ತಡ್ಕ, ಜನಾರ್ಧನ ನಾಗತೀರ್ಥ, ಕ್ಲಬ್ನ ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ ಕಾರ್ಯದರ್ಶಿ, ಖಜಾಂಜಿ ನವೀನ್ ನಾಗತೀರ್ಥ ಖಜಾಂಜಿ, ಕ್ರೀಡಾ ಕಾರ್ಯದರ್ಶಿ ಸತೀಶ್ ಕೆರೆಯಡ್ಕ ಉಪಸ್ಥಿತರಿದ್ದರು. ಪ್ರಥಮ ಸ್ಥಾನವನ್ನು ಹನುಮಾನ್ ಹಂಟರ್ಸ್, ದ್ವಿತೀಯ ಸ್ಥಾನವನ್ನು ಯು.ಕೆ. ಪಲ್ಲೋಡಿ , ತೃತೀಯ ಸ್ಥಾನವನ್ನು ಅಟಲ್-ಜೀ ಕ್ರಿಕೆಟರ್ಸ್ ಕೂತ್ಕುಂಜ ಮತ್ತು ಚತುರ್ಥ ಸ್ಥಾನವನ್ನು ಎಫ್ ಸಿ ಬಳ್ಪ ತಂಡ ಪಡೆದುಕೊಂಡಿತು. ವೈಯಕ್ತಿಕ ಬಹುಮಾನವನ್ನು ಬೆಸ್ಟ್ ಫೀಲ್ಡರ್ ಮಿಥುನ್ ಹೇಮಳ, ಬೆಸ್ಟ್ ಬ್ಯಾಟ್ಸ್ಮನ್ ಹೈದರ್ ಬೆಳ್ಳಾರೆ, ಬೆಸ್ಟ್ ಬೌಲರ್ ಸವದ್ ಪಂಜಿಕಲ್ಲು, ಎಮರ್ಜಿಂಗ್ ಪ್ಲೇಯರ್ ಆಫ್ ದ ಟೂರ್ನಮೆಂಟ್ ಹಿತೇಶ್ ನಿಂತಿಕಲ್ಲು, ಗೇಮ್ ಚೇಂಜರ್ ಆಫ್ ದಿ ಟೂರ್ನಮೆಂಟ್ ಸತೀಶ್ ಕೆರೆಯಡ್ಕ, ಮ್ಯಾನ್ ಆಫ್ ಮ್ಯಾಚ್ ಫೈನಲ್ ಸವಾದ್ ಪಂಜಿಕಲ್ಲು, ಬೆಸ್ಟ್ ಕೀಪರ್ ಲಿತಿನ್ ಕಂದಡ್ಕ, ಲೆಜೆಂಡ್ ಪ್ಲೇಯರ್ ಯತೀಂದ್ರ ಸುಳ್ಯ, ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಕಾರ್ತಿಕ್ ಹರಿಹರ ಪಡೆದರು. ಪ್ರದೀಪ್ ಎಣ್ಮೂರು ನಿರೂಪಿಸಿದರು, ಜನಾರ್ಧನ ನಾಗತೀರ್ಥ ಸ್ವಾಗತಿಸಿದರು ಶಶಿದಾಸ್ ನಾಗತೀರ್ಥ ವಂದಿಸಿದರು.