ಸುಳ್ಯ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಚಾರಿ ಆರೋಗ್ಯ ಕ್ಲಿನಿಕ್ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ತಾಲೂಕು ಪಂಚಾಯತ್ ಮುಂಭಾಗದಲ್ಲಿ ನಡೆಯಿತು. ಸಂಚಾರಿ ವಾಹನದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭ ಹಾರೈಸಿದರು. ಈ ವಾಹನವು ಸುಳ್ಯ , ಪುತ್ತೂರು , ಕಡಬ ತಾಲೂಕು ಕೇಂದ್ರಗಳಲ್ಲಿ ಸಂಚರಿಸಲಿದೆ. ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ನಿರ್ಮಾಣ ಕಾರ್ಮಿಕರು ಮತ್ತು ಅವಲಂಬಿತರಿಗೆ ಕೈಗೆಟುಕುವ ರೀತಿಯಲ್ಲಿ
ಆರೋಗ್ಯ ಸೌಲಭ್ಯ ದೊರೆಯಲಿದೆ.ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಕೆ.ಪಿ ಜಾನಿ , ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗಡೆ,
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ,ಎಕ್ಸಿಕ್ಯುಟಿವ್ ರಮೇಶ್ , ಗುತ್ತಿಗೆ ಸಂಸ್ಥೆ ಸಿಬ್ಬಂದಿ ನಿಖಿಲ್, ನ.ಪಂ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ , ಸೂಡ ಅಧ್ಯಕ್ಷ ಮುಸ್ತಫ ಕೆ ಎಂ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ,ತಹಶೀಲ್ದಾರ್ ಮಂಜುಳಾ ಎಂ , ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ , ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್ , ತೀರ್ಥರಾಮ ಜಾಲ್ಸೂರು , ಪರಮೇಶ್ವರ ಕೆಂಬಾರೆ ,ಕೃಷಿ ನಿರ್ದೇಶಕ ಗುರುಪ್ರಸಾದ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ವೈಶಿಷ್ಟ್ಯ ತೆ.
ಭಾಗಶಃ ಎಲ್ಲಾ ವೈದ್ಯಕೀಯ ಉಪಕರಣಗಳು ವಾಹನದೊಳಗೆ ಅಳವಡಿಸಲು ಸಾಧ್ಯವಾಗುವಂತ ವಿಶಾಲವಾದ ವಾನವಾಗಿದ್ದು ಕಾರ್ಮಿಕರಿಗೆ ಎಲ್ಲಾ ರೀತಿಯ ಆಧುನಿಕ ವೈದ್ಯಕೀಯ ಪರೀಕ್ಷೆಗಳನ್ನು ನಿಖರವಾಗಿ ನೀಡುವಂತಹ ವರದಿಗಳನ್ನು ವಾಹನದಲ್ಲಿ ವೈದ್ಯಕೀಯ ಉಪಕರಣಗಳು ಇರಲಿದೆ. ಪ್ರತಿ ವಾಹನದಲ್ಲಿ ಎಂಬಿಬಿಎಸ್ ಪದವಿ ಹೊಂದಿದ ವೈದ್ಯರ ತಂಡ ಇರಲಿದೆ ಹಾಗೂ ಕಟ್ಟಡ ಕಾರ್ಮಿಕರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಕಂಡುಬಂದ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಆಂಬ್ಯೂಲೆನ್ಸ್ ಸೇವೆಯನ್ನು ಒದಗಿಸಲಿದ್ದು ಈ ವಾಹನದಲ್ಲಿ ಚಿಕಿತ್ಸೆ ಪಡೆಯುವ ಕಾರ್ಮಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಡಿಸಿ ಕಾರ್ಡ್ ನೀಡುವ ಕ್ರಮವನ್ನು ಜರುಗಿಸಲಾಗುತ್ತದೆ. ಈ ವಾನದಲ್ಲಿ ಆಸ್ಪತ್ರೆ ಮಾದರಿಯಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿದ್ದು ತಾಯಿಯ ಆರೋಗ್ಯ , ಗರ್ಭಾವಸ್ಥೆ , ರಕ್ತದೊತ್ತಡ, ರಕ್ತಹೀನತೆ , ನವ ಜನನ ಮತ್ತು ಶಿಶು ಆರೋಗ್ಯ , ಮಗು ಮತ್ತು ಹದಿಹರೆಯದವರ ಆರೋಗ್ಯ, ನಿರ್ಜಲೀಕರಣ, ಪುಪ್ಪಸ ಜ್ವರ , ಸಮಾಲೋಚನೆ , ತೀವ್ರ ಅಪೌಷ್ಟಿಕತೆ, ಅಂಗವೈಕಲ್ಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಗರ್ಭನಿರೋಧಕ ಸೇವೆಗಳು , ಮೂಲಭೂತ ಒಪಿಡಿ, ಕಣ್ಣಿಣ ಆರೈಕೆ ಸೇರಿದಂತೆ ಹತ್ತು ಹಲವು ಚಿಕಿತ್ಸೆಗಳು ಲಭ್ಯವಾಗಲಿದೆ.
ಸುಳ್ಯದಲ್ಲಿ ಉದ್ಘಾಟನೆಗೊಂಡ ವಾಹನವು ಸುಳ್ಯ , ಪುತ್ತೂರು ಕಡಬ ತಾಲೂಕಿನಲ್ಲಿ ಸಂಚರಿಸಲಿದ್ದು ಪ್ರತಿ ತಾಲೂಕಿನಲ್ಲಿ ಎರಡು ದಿನಗಳು ಸಂಚರಿಸಲಿದೆ. ಹಾಗೂ ಸುಳ್ಯ ತಾಲೂಕಿನಲ್ಲಿ 5000 , ಕಡಬ ತಾಲೂಕಿನಲ್ಲಿ 5000 ಹಾಗೂ ಪುತ್ತೂರು ತಾಲೂಕಿನಲ್ಲಿ 10000 ನೋಂದಾಯಿತ ಕಾರ್ಮಿಕರಿದ್ದು ಇದರ ಸದುಪಯೋಗಗಳನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಲಭ್ಯವಾಗಲಿದೆ. ಅಲ್ಲದೇ ಈ ವಾಹನದಲ್ಲಿ ಓರ್ವ ವೈಧ್ಯ , ಲ್ಯಾಬ್ ಟೆಕ್ನನಿಷಿಯನ್ , ಎಎನ್ಎಂ , ಜಿಎನ್ಎಂ ಹಾಗೂ ಓರ್ವ ಚಾಲಕ ಇರಲಿದ್ದಾರೆ ಎಂದು ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.