ಮಂಡೆಕೋಲು:ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಅ.22ರಿಂದ ಆರಂಭಗೊಂಡಿದ್ದು ಅ.26ರವರೆಗೆ ನಡೆಯಲಿದೆ.ಎ.24 ರಂದು ಪೂರ್ವಾಹ್ನ ದೇವರ ದರ್ಶನ ಬಲಿ ಉತ್ಸವ ನಡೆದು ರಾಜಾಂಗಣ ಪ್ರಸಾದ (ಬಟ್ಟಲು ಕಾಣಿಕೆ) ವಿತರಣೆ, ಮಂತ್ರಾಕ್ಷತೆ ನಡೆಯಿತು.ಸಂಜೆ ಆಹ್ವಾನಿತ
ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಎ.23ರಂದು ಭಜನೆ, ಗಣಪತಿ ಹವನ, ಹರಕೆಯ ತುಲಾಭಾರ ನಡೆಯಿತು. ಅಪರಾಹ್ನ ಶ್ರೀ ಉಳ್ಳಾಕುಲು ಮೂಲ ಸ್ಥಾನ ಕಳೇರಿಯಿಂದ ಭಂಡಾರ ತರಲಾಗಿ ರಾತ್ರಿ ಭೂತ ಬಲಿ ಉತ್ಸವ, ಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ, ನೃತ್ಯ ಬಲಿ ಉತ್ಸವಗಳು ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಎ.25ರಂದು ಬೆಳಗ್ಗೆ 7 ಗಂಟೆ ಯಿಂದ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆ ಯುಲಿದೆ.ಬೆಳಗ್ಗೆ 8.30ರಿಂದ ಶ್ರೀ ಉಳ್ಳಾಕುಲು ದೈವದ ಆಡ್ಡಣ ಪೆಟ್ಟು ಉತ್ಸವ ನಡೆದು ಸಿರಿಮುಡಿ ಪ್ರಸಾದ ವಿತರಣೆ ನಡೆಯುವುದು. ಬಳಿಕ ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ, ಸಂಜೆ ಉಳ್ಳಾಕುಲು ಭಂಡಾರ ಕಳೇರಿಗೆ – ಹಿಂತಿರುಗುವುದು. ಸಂಜೆ ವಿಷ್ಣುಮೂರ್ತಿ ದೈವಸ್ಥಾನ ಕಣೆ – ಮರಡ್ಕದಿಂದ ದೈವದ ಭಂಡಾರ ತರುವುದು. ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯುವುದು. ಎ.26ರಂದು ಪೂರ್ವಾಹ್ನ ವಿಷ್ಣುಮೂರ್ತಿ ದೈವದ ನಡಾವಳಿಯ ಬಳಿಕ ಪ್ರಸಾದ . ವಿತರಣೆಯಾಗಲಿದೆ ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ” ಭಂಡಾರ ಕಣೆಮರಡ್ಕಕ್ಕೆ ಹಿಂತಿರುಗುವ ಮೂಲಕ ಈ ವಾರ್ಷಿಕ ಜಾತ್ರಾ ಕಾರ್ಯಗಳು ಸಂಪನ್ನಗೊಳ್ಳಲಿದೆ.