The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಸುಳ್ಯದ ಕಸ ವಿಲೇವಾರಿಗೆ ಅಳವಡಿಸಿದ ಬರ್ನಿಂಗ್ ಮೆಷಿನ್ ಕೊನೆಗೂ ಚಾಲೂ: ಪ್ರತಿ ದಿನ 500 ಕೆಜಿ ಕಸ ಬರ್ನಿಂಗ್..!

by ದಿ ಸುಳ್ಯ ಮಿರರ್ ಸುದ್ದಿಜಾಲ August 23, 2022
by ದಿ ಸುಳ್ಯ ಮಿರರ್ ಸುದ್ದಿಜಾಲ August 23, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಸುಳ್ಯ ನಗರದಲ್ಲಿ ಸಂಗ್ರಹಿಸಲಾಗುವ ಕಸವನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಲೇವಾರಿ ಮಾಡಲು ಕಲ್ಚರ್ಪೆಯಲ್ಲಿ ಅಳವಡಿಸಲಾದ ಬರ್ನಿಂಗ್ ಮೆಷಿನ್ ಕೊನೆಗೂ ಚಾಲೂ ಆಗಿದೆ. ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹಿಸಲಾಗುವ ಒಣ ಕಸ ಸೇರಿ ಸುಮಾರು 500 ಕೆಜಿಯಷ್ಟು ತ್ಯಾಜ್ಯವನ್ನು ಪ್ರತಿ ದಿನ ಉರಿಸಲಾಗುತಿದೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗು ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಮಾಹಿತಿ ನೀಡಿದ್ದಾರೆ. ಬರ್ನಿಂಗ್ ಮೆಷಿನ್ ಅಳವಡಿಕೆ ಆಗಿ ಸರಿ ಸುಮಾರು ಒಂದು ವರ್ಷದ ಬಳಿಕ ಮೆಷಿನ್ ಚಾಲೂ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಆಗಿದೆ. ಇದೀಗ 3 ತಿಂಗಳ ಮಟ್ಟಿಗೆ ಪ್ರಾಯೋಗಿಕ ನೆಲೆಯಲ್ಲಿ ಚಾಲನೆ‌ ಮಾಡಲಾಗುತ್ತಿದ್ದು ಒಂದೂವರೆ ತಿಂಗಳಿನಿಂದ ಕಸದ ಬರ್ನಿಂಗ್ ನಡೆಯುತಿದೆ. ಆಗಸ್ಟ್ ತಿಂಗಳಲ್ಲಿ ಇದೂವರೆಗೆ 6 ಸಾವಿರ ಕೆಜಿ ಕಸ ಉರಿಸಲಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವೊಲ್ಟೇಜ್ ವೇರಿಯೇಷನ್ ಆಗುವ ಕಾರಣ ಯಂತ್ರಗಳು ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದೀಗ ಜನರೇಟರ್ ಬಳಸಿ ಮೆಷಿನ್ ಚಾಲೂ ಮಾಡಿ ಬರ್ನಿಂಗ್ ಪ್ರಕ್ರಿಯೆ ನಡೆಯುತಿದೆ. ಹೊಸ ವಿದ್ಯುತ್ ಟಿಸಿ ಅಳವಡಿಕೆ ಸೇರಿ ಕೆಲವೊಂದು ಕೆಲಸಗಳು ನಡೆಸಿ ಪೂರ್ಣವಾಗಿ ವಿದ್ಯುತ್ ಬಳಸಿ ಮೆಷಿನ್ ರನ್ ಮಾಡುವ ಬಗ್ಗೆ ಮತ್ತು ಕಸ ಉರಿದು ಉಂಟಾಗುವ ಗ್ಯಾಸ್ ಬಳಸಿ ಜನರೇಟರ್ ಚಾಲನೆ ಮಾಡಿ ಮೆಷಿನ್ ಚಾಲೂ ಮಾಡುವ ಸಂಶೋಧನೆಗಳು ನಡೆಯುತಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಸ ಬರ್ನ್ ಮಾಡುವ ಮಟ್ಟಕ್ಕೆ ಮೆಷಿನ್ ಸಜ್ಜು ಆಗುವ ನಿರೀಕ್ಷೆ ಇದೆ ಎಂದು ನಗರ ಪಂಚಾಯತ್ ಅಧ್ಯಕ್ಷರು ಹಾಗು ಮುಖ್ಯಾಧಿಕಾರಿಗಳು ಹೇಳುತ್ತಾರೆ.
ಏನಿದು ಯೋಜನೆ:
ನಗರ ಪಂಚಾಯತ್‌ನ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವುದು ಬರ್ನಿಂಗ್ ಮೆಷಿನ್ ಅಳವಡಿಕೆಯ ಉದ್ದೇಶ. ನಗರ ಪಂಚಾಯತ್‌ನ ಕಸ ವಿಲೇವಾರಿ ಘಟಕ ಕಲ್ಚರ್ಪೆಯಲ್ಲಿ ಅಳವಡಿಸಲಾಗಿರುವ ಬರ್ನಿಂಗ್ ಮೆಷಿನ್ ‘ಗ್ಯಾಸಿಫಿಕೇಶನ್ ತಂತ್ರಜ್ಞಾನ’ದ ಮೂಲಕ ಕಸವನ್ನು ಉರಿಸಲಾಗುತ್ತದೆ. ಪರಿಸರ ಸ್ನೇಹಿಯಾದ ಈ ಯಂತ್ರದಲ್ಲಿ‌ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್‌
ಉತ್ಪಾದನೆ ಆಗುತ್ತಿದ್ದು ಇದನ್ನು ಮರು ಬಳಕೆ ಮಾಡಬಹುದು. ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಕಸ ಮತ್ತು ಈಗಾಗಲೇ ಕಲ್ಚರ್ಪೆ ಹಾಗು ನಗರ ಪಂಚಾಯತ್ ಮುಂಭಾಗದಲ್ಲಿ ಶೇಖರಿಸಲಾಗಿರುವ ಕಸವನ್ನು ಯಂತ್ರದ ಮೂಲಕ ಉರಿಸಲಾಗುವುದು. ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಬರ್ನಿಂಗ್ ಯಂತ್ರದಲ್ಲಿ ಒಂದು

ಗಂಟೆಯಲ್ಲಿ 150 ಕೆಜಿ ತ್ಯಾಜ್ಯವನ್ನು ಉರಿಸಬಹುದು. ದಿನ ನಿತ್ಯ ಸುಳ್ಯ ನಗರದಲ್ಲಿ ಒಂದು ಟನ್ ಗಿಂತಲೂ ಹೆಚ್ಚು ಕಸ ಸಂಗ್ರಹ ಆಗುತ್ತದೆ. ಸುಮಾರು ಎಂಟು ಗಂಟೆಗಳಲ್ಲಿ ಇಷ್ಟು ಕಸ ಉರಿಸಲು ಸಾಧ್ಯ. ಉರಿದಾಗ ಗ್ಯಾಸ್ ದೊರೆಯುತ್ತದೆ. ಗ್ಯಾಸನ್ನು ಸಂಗ್ರಹಿಸಿ ಬಳಕೆ ಮಾಡಬಹುದು.ಎನ್ನುತ್ತಾರೆ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ. ಸುಮಾರು 2500 ಟನ್ ಗೂ ಮಿಕ್ಕಿ ಕಸ ಈಗಾಲೇ ಕಲ್ಚರ್ಪೆಯಲ್ಲಿ ರಾಶಿ ಬಿದ್ದಿದೆ. ಅದನ್ನು ಮೆಷಿನ್ ಮೂಲಕ ಬರ್ನ್ ಮಾಡಿ ವಿಲೇವಾರಿ ಮಾಡಲಾಗುವುದು. ನೂರಾರು ಟನ್ ಕಸ ನಗರ ಪಂಚಾಯತ್ ಬಳಿಯಲ್ಲಿ ಹಾಗು ಮುಂಭಾಗದ ಕಟ್ಟಡದಲ್ಲಿಯೂ ಇದೆ.

ಕಸದ ಸಮಸ್ಯೆ ಏನು:
ಸುಳ್ಯ ನಗರವನ್ನು ಕಳೆದ ಕೆಲವು ದಶಕಗಳಿಂದ ಕಾಡುವ ದೊಡ್ಡ ಸಮಸ್ಯೆ ಕಸ ವಿಲೇವಾರಿ. ಕಸ ಸಂಗ್ರಹಕ್ಕೆ ಮತ್ತು ವಿಲೆವಾರಿಗೆಂದು ಲಕ್ಷಾಂತರ ರೂಗಳನ್ನು ವ್ಯಯಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕದ ಸ್ಥಳಕ್ಕೆ ದೊಡ್ಡ ಹೋರಾಟವೇ ನಡೆಸಬೇಕಾಯಿತು. ಕಲ್ಚರ್ಪೆಯಲ್ಲಿ ತ್ಯಾಜ್ಯ ಘಟಕಕ್ಕೆ ಸ್ಥಳ ದೊರೆತರೂ ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಕಸ ತುಂಬಿ ತುಳುಕಿತ್ತು.ಬೇರೆ ಹಲವು ಕಡೆಗಳಲ್ಲಿ ಜಾಗ ಹುಡುಕಿದರೂ ವಿರೋಧಗಳು ಮತ್ತು ತಾಂತ್ರಿಕ ಅಡಚಣೆಗಳಿಂದ ಸೂಕ್ತ ಜಾಗ ಸಿಕ್ಕಿರಲಿಲ್ಲ.ಕಲ್ಚರ್ಪೆಯಲ್ಲಿ ಕಸ ಹಾಕಲು ಆಗದ ಕಾರಣ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಳೆದ ಕೆಲವು ವರ್ಷಗಳಿಂದ ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿಯೇ ತುಂಬಿಡಲಾಗುತ್ತಿತ್ತು.ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಬೇಡಿಕೆ ಇತ್ತು. ನಗರ ಪಂಚಾಯತ್‌ನ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ‌ ಬಳಿಕ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬರ್ನಿಂಗ್ ಮೆಷಿನ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಆರಂಭಿಸಿದರೆ, ಸುಳ್ಯದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

200 ಟನ್ ಕಸ ಸಾಗಾಟ:
ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ತುಂಬಿಡಲಾದ ಕಸ ಸಾಗಾಟದ ಟೆಂಡರ್ ಅನ್ವಯ 200 ಟನ್ ಕಸ ಸಾಗಾಟ ಮಾಡಲಾಗಿದೆ. ಕೆಜಿಗೆ 3.90 ರೂ.ನಂತೆ ಕಸ ಸಾಗಾಟ ನಡೆಸಿದೆ. ಉಳಿದ ಕಸದ ಸಾಗಾಟಕ್ಕೆ ಟೆಂಡರ್ ಮುಂದುವರಿಸುವ ಕುರಿತು ನ.ಪಂ.ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.

‘ಅತ್ಯಾಧುನಿಕ ಮತ್ತು ಹೊಸ ತಂತ್ರಜ್ಞಾನ ಉಪಯೋಗಿಸಿ ಬರ್ನಿಂಗ್ ಮೆಷಿನ್ ಅಳವಡಿಕೆ ಕಾರ್ಯ ಮಾಡಲಾಗಿದ್ದು ಕಳೆದ ಒಂದೂವರೆ ತಿಂಗಳಿನಿಂದ ಕಸ ಉರಿಸುವಿಕೆ ಯಶಸ್ವಿಯಾಗಿ ನಡೆಯುತಿದೆ.ಹೊಸ ತಂತ್ರಜ್ಞಾನ ಆದ ಕಾರಣ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಿದ್ದು ಅದನ್ನು ಸರಿಪಡಿಸಿ ಕಸ ಉರಿಸಲಾಗುತಿದೆ. ಬರ್ನಿಂಗ್ ಮೆಷಿನ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆದ ಮೇಲೆ ಸುಳ್ಯದ ಕಸ ವಿಲೇವಾರಿ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಾಣಲಿದೆ.ಈ ಪರಿಸರ ಸ್ನೇಹಿ ಯೋಜನೆಯಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಇಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಬಳಕೆ ಮಾಡಿ ಆದಾಯ ಪಡೆಯುವ ಅಥವಾ ಈ ಗ್ಯಾಸ್‌ನಿಂದ ಜನರೇಟರ್ ಚಾಲು ಮಾಡಿ ಮೆಷಿನ್ ರನ್ ಮಾಡುವ ಅವಕಾಶವೂ ಇದೆ
-ವಿನಯಕುಮಾರ್ ಕಂದಡ್ಕ
ಅಧ್ಯಕ್ಷರು. ನಗರ ಪಂಚಾಯತ್ ಸುಳ್ಯ.

“ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹ ಆಗುವ ಒಣ ಕಸ ಸೇರಿ ಸುಮಾರು 500 ಕೆಜಿ ಕಸ ಬರ್ನ್ ಮಾಡಲಾಗುತಿದೆ. ಮುಂದೆ ವಿದ್ಯುತ್ ಸರಬರಾಜು ಸಂಪರ್ಕ ಸರಿಯಾದ ಮೇಲೆ ದಿನಕ್ಕೆ ಒಂದೂವರೆ ಟನ್ ಕಸ ಉರಿಸಲು ಸಾಧ್ಯ ಆಗಬಹುದು ಎಂಬ ನಿರೀಕ್ಷೆ ಇದೆ
-ಸುಧಾಕರ ಎಂ.ಎಚ್.
ಮುಖ್ಯಾಧಿಕಾರಿ
ನ.ಪಂ.ಸುಳ್ಯ

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಕೊಳೆರೋಗ,ನುಸಿ ಪೀಡೆ,ಹಳದಿ ರೋಗ… ಕೈಗೆ ಬಂದದ್ದು ಬಾಯಿಗಿಲ್ಲ..ಹೈರಾಣಾಗಿದ್ದಾನೆ ಮಲೆನಾಡಿನ ರೈತ..!
next post
ಮತ್ಸ್ಯಗಳಿಗೆ ಇಲ್ಲಿ ಭಕ್ತಿಭಾವದ ಸಮರ್ಪಣೆ: ನಾಲ್ಕೂವರೆ ತಿಂಗಳ ನಿರಂತರ ಆಚರಣೆ:ಪಯಸ್ವಿನಿಯ ಮೀನುಗಳಿಗೆ ಅಕ್ಕಿ ಅರ್ಪಿಸುವ ಕಾರ್ಯ ಆರಂಭ

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಮೊಬೈಲ್ ಗ್ಯಾರೇಜ್‌ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ.. ಆಕರ್ಷಕ ಛತ್ರಿ ಉಚಿತವಾಗಿ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

ಎನ್ಎಸ್‌ಯುಐ ವತಿಯಿಂದ ಕೆ.ಎಸ್.ರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರಿದು ಹೋದ ಆಸನದ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ರೋಟರಿ ಪೂರ್ವಾಧ್ಯಕ್ಷರಿಗೆ ಗೌರವಾರ್ಪಣೆ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ.

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ