The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಕೊಳೆರೋಗ,ನುಸಿ ಪೀಡೆ,ಹಳದಿ ರೋಗ… ಕೈಗೆ ಬಂದದ್ದು ಬಾಯಿಗಿಲ್ಲ..ಹೈರಾಣಾಗಿದ್ದಾನೆ ಮಲೆನಾಡಿನ ರೈತ..!

by ದಿ ಸುಳ್ಯ ಮಿರರ್ ಸುದ್ದಿಜಾಲ August 22, 2022
by ದಿ ಸುಳ್ಯ ಮಿರರ್ ಸುದ್ದಿಜಾಲ August 22, 2022
Share this article

*ಗೋಪಾಲ್ ಪೆರಾಜೆ.
ಮಲೆನಾಡಿನ ಅಡಿಕೆ ಬೆಳೆಗಾರರ ನಿಟ್ಟಿಸಿರು ಸಂಕಟ.ರೋಧನ ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಹಳದಿ ರೋಗಕ್ಕೆ ಬಲಿಯಾದ ಸಾವಿರಾರು ಎಕರೆ ಅಡಿಕೆ ತೋಟಗಳು, ಮತ್ತೊಂದೆಡೆ ಕಳೆದ ಮೂರು ವರ್ಷಗಳಿಂದ ಜಡಿಮಳೆಗೆ ವ್ಯಾಪಕವಾದ ಕೊಳೆರೋಗ. ತಮ್ಮ ಆದಾಯದ ತಳಮೂಲವನ್ನೇ ಕಳೆದುಕೊಂಡ ರೈತರು ಮುಂದೇನು ಎಂಬುದಾಗಿ ತಲೆಗೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ. “ಈ ಸಲ ಮಳೆಗಾಲ ನಮ್ಮಪ್ಪ ಒಲೆ ಬುಡಂದ ಏಳ ಸಾಲ ಕೊಟ್ಟವರೆಲ್ಲ ಬನ್ನಿ ನಮ್ಮಂಗಳದ ಮಣ್ಣ ತಿನ್ನಿ’
ಅರೆಬಾಸೆ ಕವಿ ಒಬ್ಬರ ಪದ್ಯದ ಸಾಲುಗಳಿವು.
ಆರಂಭದಲ್ಲಿ ಕೊಡಗಿನ ಸಂಪಾಜೆ ಭಾಗದಲ್ಲಿ ಕಾಣಿಸಿಕೊಂಡ ಈ ಹಳದಿ ರೋಗ ಬಹುಬೇಗನೆ ದ.ಕ.ಜಲ್ಲೆ, ಕೊಡಗು ಸೇರಿದಂತೆ ಇತರ ಜಿಲ್ಲೆಗಳಲ್ಲೂ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ತನ್ನ ಕ್ರೂರ ಕದಂಬ ಬಾಹುಗಳನ್ನು ಚಾಚಿ ನಿಂತಿದೆ.
ಮಲೇಶಿಯಾ ಅಥವಾ ಫಿಲಿಫೈನ್ಸ್ ಮೂಲದ ಈ ಅಡಿಕೆಯನ್ನು ಶ್ರೀಲಂಕಾ, ಮಲಯ,ಬಾಂಗ್ಲಾದೇಶ, ಚೀನಾ, ಆಫ್ರಿಕಾದ ಕೆಳಭಾಗಗಳಲ್ಲಿ ಬೆಳೆಯಲಾಗುತ್ತಿದೆ. 1500 ವರ್ಷಕ್ಕೂ ಹಿಂದಿನಿಂದಲೂ ಅಡಿಕೆಯನ್ನು ಭಾರತದಲ್ಲಿ ಬಳಸುತ್ತಿರುವುದು ಚರಿತ್ರೆಯಲ್ಲಿ ಕಂಡುಬರುವ ಸಂಗತಿ. ಅದು ಜಗಿದು ಉಗಿದು ತಿನ್ನುವುದರ ಜೊತೆಗೆ ಅನೇಕ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳಿಗೆ ನಮ್ಮಲ್ಲಿ ಅಗತ್ಯ. ತಾಂಬೂಲದೊಂದಿಗೆ ನೀಡುವ ಗೌರವಕ್ಕೆ ನಮ್ಮ ಸಮಾಜದಲ್ಲಿ ದೊಡ್ಡ ಮನ್ನಣೆ. ಬಹು ಹಿಂದೆಯೇ ಭಾರತ ಪ್ರವೇಶಿಸಿದ ಅಡಿಕೆ ಬೆಳೆ ಒಂದು ಶತಮಾನದಿಂದ ಈಚೆಗೆ ಅತಿ ಮುಖ್ಯ ವಾಣಿಜ್ಯ ಬೆಳೆಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಿತು. ಒಂದು ಕಾಲದಲ್ಲಿ ಮಲೆನಾಡಿನ ಭಾಗಗಳಲ್ಲಿ ವ್ಯಾಪಕವಾಗಿದ್ದ ಗದ್ದೆ ಬಯಲುಗಳನ್ನು ಆಪೋಶನ ಮಾಡುತ್ತಲೇ ಈ ಅಡಿಕೆ ತೋಟಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ಬಂದವು. ಈಗಂತೂ ಗುಡ್ಡ ಪ್ರದೇಶ ಬಯಲು ಜಾಗಗಳನ್ನೆಲ್ಲ ಆಕ್ರಮಿಸುತ್ತಾ ಆರ್ಥಿಕ ಜೀವನಾಡಿನಂತಿದೆ ಅಡಿಕೆ. ಯಾಕೋ..ಈ ನಾಡಿ ಮಿಡಿತ ನಿಧಾನವಾಗುತ್ತಿದೆ. ಕಳೆದೊಂದು ಶತಮಾನದಿಂದ ಬೆಳೆದವರ ಮನೆಯ

ಸಂಪತ್ತು ವೈಭವದ ಭಾಗವಾಗಿದ್ದ ಈ ಅಡಿಕೆ ತನ್ನ ರಾಜ ಪೀಠದಿಂದ ಈಗ ಜಾರತೊಡಗಿದೆ. ಸದ್ಯ ಹಳದಿರೋಗದಿಂದ ಬಚಾವ್ ಆಗುವ ಲಕ್ಷಣಗಳಂತೂ ಇಲ್ಲ. ಈ ಮಧ್ಯೆ ಹವಾಮಾನ ವೈಪರೀತ್ಯಕ್ಕೆ ಬಲಿಯಾದ ಅಡಿಕೆ ಪ್ರದೇಶಗಳು ಅಡಿಕೆಯ ಮಿಡಿ ಉದುರುವಿಕೆ ಮತ್ತು ಕೊಳರೋಗದ ಬಾದೆಗೆ ಸಿಲುಕಿವೆ. ಇನ್ನು ‘ಮುಂಡುಸಿರಿ’
‘ಎಲೆ ಚುಕ್ಕಿ’ ಮತ್ತಿನ್ನೇನೋ… ಮಾತ್ರವಲ್ಲ ಕಳೆದ ಮೂರು ನಾಲ್ಕು ವರ್ಷದಿಂದ ಅಳಿದುಳಿದ ಹಳದಿ ರೋಗದ ತೋಟಗಳಲ್ಲಿ ತೀವ್ರ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಮಳೆಗೆ ಮದ್ದು ಸಿಂಪಡಿಸಲು ಆಗದೆ, ವಾತಾವರಣ ತಿಳಿಯಾಗಿ ಮದ್ದು ಬಿಡೋಣ ಎನ್ನುವಾಗ ಮರ ಹತ್ತುವ ಕಾರ್ಮಿಕರ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಡಿಕೆಯ ದರವೇನೋ ವೃದ್ಧಿಸಿದೆ. ಆದರೆ ನಷ್ಟಗಳ ದಾರಿ ಮತ್ತಷ್ಟು ದೊಡ್ಡದಾಗಿದೆ. ಅಷ್ಟಿಷ್ಟಾದರೂ ಇರುವ ಅಡಿಕೆಯನ್ನು ರೋಗದಿಂದ ಬಚಾವಾಗಿಸುವ ನೆಲೆಯಲ್ಲಿ ‘ಬೋರ್ಡೋ ದ್ರಾವಣ ರೈತರ ಬ್ರಹ್ಮಾಸ್ತ್ರ. ಆದರೆ ಅದನ್ನು ಪ್ರಯೋಗಿಸಲಾಗದೆ ಈಗ ಬಹಳ ಮಂದಿ ರೈತರು ಕೈಚೆಲ್ಲಿದ್ದಾರೆ.
ಈ ಬೋರ್ಡೋ ದ್ರಾವಣವನ್ನು ಫ್ರಾನ್ಸ್ ದೇಶದ ಪ್ರೊಫೆಸರ್ ಅಲೆಕ್ಸಿಸ್ 1885ರಲ್ಲಿ ಕಂಡುಹಿಡಿದ. ದ್ರಾಕ್ಷಿಗಾಗಿ ಅದನ್ನು ಕಂಡು ಹಿಡಿಯಲಾಗಿತ್ತು. ಫ್ರಾನ್ಸಿನ ಬೋರ್ಡೋ ಎಂಬ ಪ್ರಾಂತ್ಯದ ಬೋರ್ಡೋ ವಿ.ವಿ.ಯಲ್ಲಿ ಇದನ್ನು ಸಂಶೋಧಿಸಿದ ಕಾರಣ ಇದಕ್ಕೆ ಬೋರ್ಡೋ ಎಂಬ ಹೆಸರು ಬಂತು. ಕೆನಡಾ ದೇಶದ ವಿಜ್ಞಾನಿ ಲೆನ್ಸಿ ಕೊಲ್ಮನ್ 1913 ರಿಂದ 1934ರ ತನಕ ಮೈಸೂರು ರಾಜ್ಯದ ಕೃಷಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಇದನ್ನು ಕರ್ನಾಟಕಕ್ಕೆ ಪರಿಚಯಿಸಿ ರೈತರಿಗೆ ಮಹದೂಪಕಾರ ಮಾಡಿದ. ಅಡಿಕೆ ಬೆಳೆಗಾರರು ಈ ಇಬ್ಬರು ವಿಜ್ಞಾನಿಗಳಿಗೆ ಬದುಕಿರುವವರೆಗೆ ಚಿರಋಣಿಯಾಗಿರಬೇಕು.

ಅಡಿಕೆ ಬೆಳೆಯ ಇನ್ನೊಂದು ಮಗ್ಗುಲನ್ನು ನೋಡುವುದು ಅಗತ್ಯ.
ಸಾಂಪ್ರದಾಯಿಕ ಅಡಿಕೆ ಕೃಷಿಯಲ್ಲಿ ನೈಸರ್ಗಿಕ ಕೃಷಿ, ಜೈವಿಕ ಗೊಬ್ಬರಗಳೇ ಅಡಿಕೆ ಬೆಳೆಗೆ ಪ್ರಧಾನವಾಗಿದ್ದವು. ಆದರೆ ದುರಾಸೆಗೆ ಬಿದ್ದ ರೈತರು ಅಡಿಕೆಯ ಮತ್ತಷ್ಟು ಇಳುವರಿಗಾಗಿ ಗಿಡದ ಬುಡಕ್ಕೆ ಮಾರಕ ರಾಸಾಯನಿಕ ಗೊಬ್ಬರಗಳ ಸುರಿದರು ಮತ್ತು ತುದಿಗೂ ದ್ರವ್ಯಗಳ ಸಿಂಪಡಿಸಿದರು. ಇದರಿಂದಾಗಿ ಒಂದೆಡೆ ಮಣ್ಣು ತನ್ನ ಪೋಷಕಾಂಶ ಫಲವತ್ತತೆಗಳ ಕಳೆದುಕೊಂಡರೆ ಮಣ್ಣನ್ನು ಹದಗೊಳಿಸುವ ಎರೆಹುಳು ಮತ್ತೊಂದೋ ಮಾಯವಾಗಿದ್ದು, ಬೋರ್ಡೋ ಜೊತೆಗೆ ಕೆಲವು ರೈತರು ಬೆರೆಸುವ ತೀಕ್ಷ್ಣ ತರಹದ ಕೀಟನಾಶಕಗಳಿಂದ ಜೇನುನೊಣ ಸೇರಿದಂತೆ ಇತರ ಕ್ರಿಮಿಕೀಟಗಳು ತೋಟ ಪರಿಸರದಲ್ಲಿ ಕಾಣದಾಗುತ್ತಿವೆ. ಇದು ಮಾತ್ರವಲ್ಲ ತೋಟದ ಹತ್ತಿರದಲ್ಲಿ ನದಿ ತೋಡುಗಳಿದ್ದರೆ ಸಿಂಪರಣೆಯ ಹೊತ್ತಲ್ಲಿ ಅದರ ತುಂತುರು ಹನಿಗಳು ನೀರಿಗೆ ಹಾರಿ ಉದ್ದಕ್ಕೂ ಜಲಜೀವಿಗಳು ಸತ್ತು ಹೋಗುವ ಘಟನೆಗಳು ನಡೆಯುತ್ತಿರುತ್ತವೆ. ಪರಿಣಾಮ ಜೈವಿಕ ನಿಯಂತ್ರಣ ವ್ಯವಸ್ಥೆಯೊಂದು ತಪ್ಪಿ ಹೋಗಿರಬೇಕು.

ಹಳದಿ ರೋಗದಿಂದಾಗಿ ನಮ್ಮ ಎಲ್ಲಾ ತೋಟಗಳು ಇಲ್ಲವಾಗುತ್ತಿರುವ ಈ ಹೊತ್ತಲ್ಲಿ ನಡೆಯುತ್ತಿರುವ ಸಂಶೋಧನೆಗಳ ಫಲಿತಾಂಶ ಮಾತ್ರ ಶೂನ್ಯ. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತಷ್ಟು ರಾಸಾಯನಿಕಗಳನ್ನು ಶಿಫಾರಸು ಮಾಡಲಾಗುತ್ತಿದ್ದು ಇದರಿಂದಾಗಿ ತೋಟಗಳ ಪರಿಸ್ಥಿತಿ ಇನ್ನಷ್ಟು ಹದಗಡಲಿದೆ. ಪರಿಸರಕ್ಕೆ ತೀವ್ರವಾಗಿ ಹಾನಿ ಎಸುಗುವ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ, ಸಿಲಿಂದ್ರ ನಾಶಕಗಳನ್ನು ರೈತರು ಮಿತಿಗೆ ಒಳಪಡಿಸದಿದ್ದರೆ ಅಥವಾ ಪೂರ್ಣ ಪ್ರಮಾಣದಲ್ಲಿ ತೊರೆಯದಿದ್ದರೆ ಮುಂದೊಂದು ದಿನ ಈ ಭಾಗದ ಕೃಷಿ ಭೂಮಿಯೇ ಬರಡು ನೆಲವಾಗಲಿದೆ.
ಕ್ಷಮಿಸಿ,
ಮುಂದಿನ ತಲೆಮಾರು ನಮ್ಮನ್ನು ಶಪಿಸದಿರಲಿ…

ಗೋಪಾಲ್ ಪೆರಾಜೆ

(ಗೋಪಾಲ್ ಪೆರಾಜೆ ಅವರು ಪ್ತಗತಿಪರ ಕೃಷಿಕರು ಹಾಗು ಲೇಖಕರು)

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಇಂದು ವಿಶ್ವ ಫೋಟೋಗ್ರಾಫಿ ದಿನ.. ಫೋಟೊ ಎಂಬ ಬೆಳಕಿನಾಟದ ಕುರಿತು…
next post
ಸುಳ್ಯದ ಕಸ ವಿಲೇವಾರಿಗೆ ಅಳವಡಿಸಿದ ಬರ್ನಿಂಗ್ ಮೆಷಿನ್ ಕೊನೆಗೂ ಚಾಲೂ: ಪ್ರತಿ ದಿನ 500 ಕೆಜಿ ಕಸ ಬರ್ನಿಂಗ್..!

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸುಳ್ಯದ ಸ್ವಾತಿ ನರ್ಸರಿಯಲ್ಲಿ ಗುಣಮಟ್ಟದ ಅಡಿಕೆ ಗಿಡಗಳು ಮಾರಾಟಕ್ಕೆ

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಅನುಷ್ಠಾನ ಹೇಗೆ.? ಷರತ್ತುಗಳು ಏನು..?...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ