ಸುಳ್ಯ: ಬಿಜೆಪಿ ಸುಳ್ಯ ಮಂಡಲದ ಕಾನೂನು ಪ್ರಕೋಷ್ಟದ ಸಂಚಾಲಕರಾಗಿ ಮಹೇಶ್ ಕೆ ಸವಣೂರು ಮತ್ತು ಸಹ ಸಂಚಾಲಕರಾಗಿ ಸಂದೀಪ್ ಮದುಗದ್ದೆ, ಸುಳ್ಯ ಪ್ರಭಾರಿಯಾಗಿ ಜಿಲ್ಲಾ ಕಾನೂನು ಪ್ರಕೋಷ್ಟದ ಸದಸ್ಯರಾದ ಸಂದೀಪ್ ವಳಲಂಬೆ, ಮಂಡಲ ಕಾನೂನು ಪ್ರಕೋಷ್ಟದ
ಸದಸ್ಯರಾಗಿ ಹರೀಶ್ ಬೂಡುಪನ್ನೆ, ಹರೀಶ್ ಕುಮಾರ್ ಬೂಡಿಯಾರು, ವಿನೋದ್ ಕುಮಾರ್ ನೆಲ್ಯಾಡಿ, ಹರ್ಷಿತ್ ಕಾರ್ಜ, ಕುಮಾರಿ ಶೈಲಿ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಶೆಟ್ಟಿ ಪುಳಿಂಚ, ಸಹಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಶೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಗಳಾದ ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ ಮೊದಲಾದವರು ಉಪಸ್ಥಿತರಿದ್ದರು.








