ಸುಳ್ಯ:ಕಳೆದ ಮೂರು ದಿನಗಳಿಂದ ನಗರ ಪಂಚಾಯತ್ನ ನೀರಿನ ಸರಬರಾಜು ಸ್ಥಗಿತಗೊಂಡ ಕಾರಣ ಸುಳ್ಯ ನಗರದ ಹೃದಯಭಾಗ ರಥಬೀದಿ ಭಾಗದಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ರಥಬೀದಿ ಭಾಗದಲ್ಲಿರುವ ಹೋಟೆಲ್ಗಳು ನೀರಿಲ್ಲದ ಕಾರಣ ಇಂದು ಬಂದ್ ಆಗಿದೆ. ಮೂರು ದಿನಗಳಿಂದ ಈ ಭಾಗಕ್ಕೆ ನೀರಿನ
![](https://thesulliamirror.com/wp-content/uploads/2023/10/IMG_20231012_092844.jpg)
ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿದೆ. ಟ್ಯಾಂಕ್, ಸಂಪುಗಳಲ್ಲಿ ಶೇಖರಿಸಿಟ್ಟಿದ್ದ ನೀರನ್ನು ಎರಡು ದಿನಗಳಿಂದ ಬಳಸಲಾಗುತ್ತಿತ್ತು. ಇದೀಗ ನೀರು ಸಂಪೂರ್ಣ ಖಾಲಿಯಾಗಿದ್ದು ಹನಿ ನೀರಿಲ್ಲದೆ ಬವಣೆ ಪಡುವ ಸ್ಥಿತಿ ನಿರ್ಮಾಣ ಆಗಿದೆ. ಮನೆಗಳು ಹೋಟೆಲ್ಗಳು ಎಲ್ಲಡೆ ನೀರು ಸರಬರಾಜು ನಿಂತಿದೆ. ರಥಬೀದಿಯಲ್ಲಿರುವ ಹೋಟೆಲ್ ಶಾಂತಿಭವನ, ಸಾರಸ್ವತ ಕೆಫೆ ಸೇರಿ ಪ್ರಮುಖ ಹೋಟೆಲ್ಗಳು ಬಂದ್ ಆಗಿದ್ದು ಇದರಿಂದ
![](https://thesulliamirror.com/wp-content/uploads/2023/10/IMG_20231012_092819.jpg)
ಸಾರ್ವಜನಿಕರಿಗೆ ಅನ್ನ ಅಹಾರಕ್ಕೂ ತೊಂದರೆ ಆಗಿದೆ.ನಿರಂತರ ಮಳೆ ಸುರಿಯುತ್ತಿದ್ದರೂ ಕುಡಿಯಲು, ಇತರ ಅಗತ್ಯಕ್ಕೆ ನೀರಿಲ್ಲದೆ ಸಾರ್ವಜನಿಕರು ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣ ಆಗಿದೆ. ಪೈಪ್ಲೈನ್ ಸಮಸ್ಯೆಯಿಂದ ಈ ಭಾಗಕ್ಕೆ ನೀರಿನ ಸರಬರಾಜು ಸ್ಥಗಿತಗೊಂಡಿದೆ ಎಂದು ಹೇಳಲಾಗುತಿದೆ. ಸಮಸ್ಯೆ ಪರಿಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಹೆಚ್.ಎಂ.ಸುಧಾಕರ ತಿಳಿಸಿದ್ದಾರೆ.