ಸುಳ್ಯ:ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಕರ್ಷಕ ಪಥ ಸಂಚಲನ ಅ.29 ರಂದು ಸುಳ್ಯದಲ್ಲಿ ನಡೆಯಿತು. ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡಿತು. ಘೋಷ್ ಸಹೀತವಾಗಿ ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದ ಪಥ ಸಂಚಲನ ಶ್ರೀ ಚೆನ್ನಕೇಶವ ದೇವಸ್ಥಾನದ
![](https://thesulliamirror.com/wp-content/uploads/2023/10/IMG_20231029_151834.jpg)
ಮುಂಭಾಗದಲ್ಲಿ ಸಮಾಪನಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ಪಥ ಸಂಚಲನಕ್ಕೆ ಪುಷ್ಪಾರ್ಚನೆ ಮಾಡಿದರು.
ಆರ್ಎಸ್ಎಸ್ ಸಂಘಚಾಲಕ ಚಂದ್ರಶೇಖರ ತಳೂರು,
ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಮುಖಂಡರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್ ಸೇರಿದಂತೆ ಪ್ರಮುಖರು ಗಣ ವೇಷಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಆರ್ಎಸ್ಎಸ್ ವಿಭಾಗ ಸಹಕಾರ್ಯವಾಹರಾದ ಶುಭಾಶ್ಚಂದ್ರ ಕಳಂಜ, ಪ್ರಮುಖರಾದ ಡಾ.ಮನೋಜ್ ಅಡ್ಡಂತ್ತಡ್ಕ, ಹೇಮಚಂದ್ರ ದೊಡ್ಡತೋಟ, ಶರವಣ, ತಾಲೂಕು ಕಾರ್ಯವಾಹ ಕಿಶನ್ ಮತ್ತಿತರರು ನೇತೃತ್ವ ವಹಿಸಿದ್ದರು .
![](https://thesulliamirror.com/wp-content/uploads/2023/10/IMG_20231029_151802.jpg)