ಸುಳ್ಯ: ಗೋಕರ್ಣ ಶ್ರೀ ರಾಮಚಂದ್ರಪುರ ಮಠದ ಮಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಶನಿವಾರ ಸುಳ್ಯಕ್ಕೆ ಭೇಟಿ ನೀಡಿದರು.ಸುಳ್ಯದ ಶಿವಕೃಪಾ ಕಲಾಮಂದಿರಕ್ಕೆ ಆಗಮಿಸಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಶಿವಕೃಪಾ ಕಲಾಮಂದಿರದ ಮಾಲಕರಾದ ಹರೀಶ್ ದಂಪತಿಗಳು ಪಾದಪೂಜೆ ನಡೆಸಿ ಬರಮಾಡಿಕೊಂಡರು. ಪಾಲ್ಗೊಂಡಿದ್ದ ಭಕ್ತರು ಶ್ರೀಗಳಿಂದ ಆಶೀರ್ವಾದ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು. ರಾಘವೇಶ್ವರ ಭಾರತೀ ಸ್ವಾಮೀಜಿ ಅವರು
ಸರ್ವರನ್ನೂ ಆಶೀರ್ವದಿಸಿ, ಹರಸಿದರು.ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಮಂಡಲ ಗುರಿಕ್ಕಾರ ಸತ್ಯನಾರಾಯಣ ಮೊಗ್ರ, ವಿ.ವಿ.ವಿ. ಪ್ರಧಾನ ಕಾರ್ಯದರ್ಶಿ ಈಶ್ವರ ಕುಮಾರ್ ಭಟ್, ವಲಯ ಪದಾಧಿಕಾರಿಗಳು, ಪದ್ಮಶ್ರೀ ಪುರಸ್ಕೃತ ಗಿರೀಶ ಭಾರದ್ವಾಜ್, ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ, ಕಾರ್ಯದರ್ಶಿ ಕೃಷ್ಣರಾವ್ ನಾವೂರು, ಪಾಲಚಂದ್ರ ವೈ.ವಿ., ಪುರೋಹಿತ ನಾಗರಾಜ ಭಟ್, ಹೊಸನಗರ ಚಂದ್ರಮೌಳೇಶ್ವರ ದೇವಸ್ಥಾನದ ಪ್ರಕಲ್ಪ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪರಿಯಪ್ಪು, ಧರ್ಮಾರಣ್ಯ ಅಭಿವೃದ್ಧಿ ಸಮಿತಿ ಸದಸ್ಯರು, ಜೇಡ್ಲ ಗೋಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಡಾ.ಪ್ರಕಾಶ್ ರಾವ್ ಸೇರಿದಂತೆ ಪ್ರಮುಖರು, ಭಕ್ತರು, ಶಿಷ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.