ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು ಮಾ.27ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ,ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಎನ್.ಎ. ಜಿತೇಂದ್ರ ನಿಡ್ಯಮಲೆ, ತಕ್ಕ ಮುಖ್ಯಸ್ಥರು,ಆಡಳಿತ ಸಮಿತಿಯ ಸದಸ್ಯರು, ಭಕ್ತಭಿಮಾನಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಮಾ.26ರಂದು ಬೆಳಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ ನಡೆದು ಸಾಯಂಕಾಲ ಶ್ರೀ ಉಳ್ಳಾಗುಳ ಮಾಡದ
ಅರಮನೆಯಿಂದ ಭಂಡಾರ ತರಲಾಯಿತು. ರಾತ್ರಿ ಶ್ರೀ ದೇವರ ಶ್ರೀ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ ನಡೆಯಿತು.
ಇಂದು ರಾತ್ರಿ ಗಂಟೆ 8ರಿಂದ ತುಳು ಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ನಡೆಯಲಿದೆ. ಮಾ.28ರಂದು ಮಧ್ಯಾಹ್ನ 12ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ತುಳು ಕೋಲ 2ರ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ.
ಮಾ.29 ರಂದು ಮಧ್ಯಾಹ್ನ 12ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ 6.30ರಿಂದ ಪಳ್ಳಿಯರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2 ನಡೆಯಲಿದೆ.

ಮಾ.30ರಂದು ಬೆಳಿಗ್ಗೆ ಗಂಟೆ 10ರಿಂದ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ 8ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ,ತುಳು ಕೋಲಗಳ ತಿರುವಪ್ಪಗಳು 2 ನಡೆಯಲಿದೆ.
ಮಾ.31 ರಂದು ಬೆಳಿಗ್ಗೆ ಗಂಟೆ 8ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಮಧ್ಯಾಹ್ನ ಗಂಟೆ 12ರಿಂದ ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ 7.30ರಿಂದ ಭಗವತಿ ದೇವಿ ಸಮಾರಾಧನೆ, ರಾತ್ರಿ ಗಂಟೆ 8ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ 1, ತುಳು ಕೋಲಗಳು ಬೆಳ್ಳಾಟ 1, ಮಲೆಕಾರಿ ಬೆಳ್ಳಾಟ 1, ವಿಷ್ಣುಮೂರ್ತಿ ತೊಡಂಙಲು, ರಕ್ತೇಶ್ವರಿ ತೊಡಂಙಲು,ಪೊಟ್ಟನ್ ದೈವದ ತೊಡಂಙಲು, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ, ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ. ಎ.1ರಂದು ಅಪರಾಹ್ನ ಬೆಳಿಗ್ಗೆ 6ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರ್ ಕಾಳಿ, ಪುಲ್ಲೂರ್ ಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆಕರಿಮಗನ್ ದೈವ, ಮಧ್ಯಾಹ್ನ ಮಹಾಪೂಜೆ, ಸಂಜೆ 4ಕ್ಲೆ ಶ್ರೀ ಭಗವಯಿಯ ದೊಡ್ಡಮುಡಿ ನಡೆಯಲಿದೆ.
ಎ.10ರವರೆಗೆ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.