ಸುಳ್ಯ:ಮೊಗರ್ಪಣೆ ಮಖಾಂ ಉರೂಸ್ ಧಾರ್ಮಿಕ ಸಭಾ ಕಾರ್ಯಕ್ರಮದ ಎರಡನೇ ದಿನವಾದ ಜ 13 ರಂದು ಸಾಮೂಹಿಕ ದುವಾ ಪ್ರಾರ್ಥನೆಗೆ ಖ್ಯಾತ ಧಾರ್ಮಿಕ ಪಂಡಿತ ಅಸ್ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಅವರು ಭಾಗವಹಿಸಿ ಪ್ರಾರ್ಥನೆ ನೆರವೇರಿಸಿದರು. ಈ ಸಂಧರ್ಭ ಆಶೀರ್ವಚನ ನೀಡಿದ ಅವರು ‘ನಾವುಗಳು ಸಾಮಾನ್ಯ ಮನುಷ್ಯರುಗಳು ಮಾತ್ರ. ನಮ್ಮ ಜೀವನ ಮತ್ತು ಮರಣ ಪಾವನವಾಗ ಬೇಕಾದರೆ ಅಲ್ಲಾಹನ ಹಾಗೂ ಪೈಗಂಬರ್ ರವರ ಮೇಲೆ ನಮ್ಮಲ್ಲಿ ಅಘಾದವಾದ ಪ್ರೀತಿಯನ್ನು
ಬೆಳಿಸಿದಿದ್ದಲ್ಲಿ ಮಾತ್ರ ಸಾಧ್ಯ ಎಂದರು.
ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಹಿರಿಯ ವಾಗ್ಮಿ ಮುಸ್ತಫಾ ಸಖಾಫಿ ತೆನ್ನಲಾ ಅವರು ಮಹಾನ್ ವಲಿಯವರು ಅಲ್ಲಾಹುವಿನ ಆಜ್ಞೆಗಳನ್ನು ಅನುಸರಿಸಿ ಜೀವಿಸಿದವರು.ಅವರ ರಕ್ಷಣೆ, ಅನುಗ್ರಹ ನಮ್ಮ ಮೇಲೆ ಸದಾ ಇರುತ್ತದೆ. ಆದ್ದರಿಂದ ಅವರ ಮೇಲಿನ ನಮ್ಮ ಅಚಲ ವಿಶ್ವಾಸ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಜಿ.ಇಬ್ರಾಹಿಂ ಹಾಜಿ ಸೀಫುಡ್, ಕನ್ವೀನರ್ ಹಾಜಿ ಅಬ್ದುಲ್ ರಜ್ಜಾಕ್ ಶೀತಲ್, ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ಜಯನಗರ, ಉರೂಸ್ ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ರಝಾಕ್ ಹಾಜಿ ಶೀತಲ್, ಹೆಚ್ಐಜೆ ಕಮಿಟಿ ಉಪಾಧ್ಯಕ್ಷ ಸಿ. ಎಂ.ಉಸ್ಮಾನ್, ಪೈಚಾರು ಬಿ ಜೆ ಎಂ ಖತೀಬರಾದ ಶಮೀರ್ ನಈಮಿ, ಹೆಚ್ಐಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್.ಯು.ಇಬ್ರಾಹಿಂ,
ನಿರ್ದೇಶಕರಾದ ಅಬ್ದುಲ್ ಸಮದ್ ಹಾಜಿ, ಮಾಜಿ ಅಧ್ಯಕ್ಷರುಗಳಾದ ಹಸ್ಸನ್ ಹಾಜಿ, ಹಾಜಿ ಪಳ್ಳಿ ಕುಂಞಿ, ಸದಸ್ಯರುಗಳಾದ ಉಮ್ಮರ್ ಹಾಜಿ ಎಚ್.ಎ, ಅಬ್ದುಲ್ ರಝಾಕ್ ಜಿ.ಕೆ, ಅಬ್ದುಲ್ ಖಾದರ್, ಮಂಗಳೂರು ಪಿ ಎ ಕಾಲೇಜು ಪ್ರೊಪೆಸ್ಸರ್ ಶಾಫಿ ಇಸ್ಮಾಹಿಲ್,ಎನ್ ಐ ಎಂ ಮದ್ರಸ ಅಧ್ಯಾಪಕರುಗಳಾದ ಮೂಸಾ ಮುಸ್ಲಿಯಾರ್, ಅಬ್ದುಲ್ ರಶೀದ್ ಝೖನಿ ಯೂಸುಫ್ ನಿಝಮಿ , ಹಂಝ ಸಖಾಫಿ,ಅಬೂಬಕ್ಕರ್ ಸಿದ್ದಿಕ್ ಸಅದಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯನಗರ ಮದ್ರಸ ಸದರ್ ಮುಅಲ್ಲಿಂ ಶಫೀಕ್ ನಈಮಿ ಸ್ವಾಗತಿಸಿ, ಸದರ್ ಮುಅಲ್ಲಿಮ್ ಮುಅಲ್ಲೀಂ ಅಬ್ದುಲ್ ಕರೀಂ ಸಖಾಫಿ ವಂದಿಸಿದರು.