ಬೆಂಗಳೂರು: ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದ ನಿಯೋಗ ಬೆಂಗಳೂರಿನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಛೇರಿಗೆ ಭೇಟಿ ನೀಡಿ ವ್ಯವಸ್ಥಾಪಕ ನಿರ್ದೇಶಕರಾದ ರಾಧಾ ದೇವಿ ಎ ಅವರೊಂದಿಗೆ ಮಾತುಕತೆ ನಡೆಸಿದರು.ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ
01.08.2021ರ ಔದ್ಯಮಿಕ ಒಪ್ಪಂದ ತೀರ್ಮಾನದಂತೆ 2021, 2022 ಮತ್ತು 2023ರ ಸಾಲಿನ ವ್ಯತ್ಯಾಸದ ಹೆಚ್ಚುವರಿ ತುಟ್ಟಿಭತ್ಯೆಯನ್ನು ನೀಡದಿರುವ ಬಗ್ಗೆ ಚರ್ಚಿಸಿದರು. ಕಾರ್ಮಿಕರಿಗೆ ನೀಡಬೇಕಾದ ವ್ಯತ್ಯಾಸದ ಹೆಚ್ಚುವರಿ ತುಟ್ಟಿಭತ್ಯೆ ನೀಡಬೇಕು ಎಂದು ಶಾಸಕರು ಹೇಳಿದರು. ಇದಕ್ಕೆ ಸ್ಪಂದಿಸಿ ಕಾರ್ಮಿಕರ ಸಮಸ್ಯೆಗಳ ವಿವರಗಳನ್ನು ಪಡೆದುಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಂ ಡಿ ತಿಳಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ಕಾರ್ಮಿಕರ ಮುಖಂಡರಾದ ಸುಬ್ಬಯ್ಯ ಬೆಂಗಮಲೆ , ಶಂಕರ್ ಲಿಂಗಂ ಕೆ ತೊಡಿಕಾನ, ಷಣ್ಮುಗಂ ಕಲ್ಲುಗುಂಡಿ, ಮಹೇಶ್ವರ ಸೊಣಂಗೇರಿ, ವಾಸು ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.