ಸುಳ್ಯ: ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನ.2ರಂದು ಚುನಾವಣೆ ನಿಗದಿಯಾಗಿದ್ದು 13 ಸ್ಥಾನಗಳಿಗೆ ಒಟ್ಟು 20 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎರಡು ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ
ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಪ್ರವರ್ಗ ಎ ಸ್ಥಾನದಿಂದ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಸ್ಥಾನದಿಂದ ಜಾರ್ಜ್ ಡಿಸೋಜ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಸಾಮಾನ್ಯ ಕ್ಷೇತ್ರದ 9 ಸ್ಥಾನಗಳಿಗೆ 14 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿಗೆ 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಮಹಮ್ಮದ್ ಇಕ್ಬಾಲ್ ಎಲಿಮಲೆ,ಜಾರ್ಜ್ ಡಿಸೋಜ
ಸಾಮಾನ್ಯ ಕ್ಷೇತ್ರದಿಂದ ಮಹಮ್ಮದ್ ರಿಯಾಝ್ ಕೆ.ಯು, ಎಸ್.ಎಂ.ಬಾಪೂಸಾಹೇಬ್, ಅಬ್ದುಲ್ ರಹಿಮಾನ್ ಮೇನಾಲ ಈಶ್ವರ ಮಂಗಲ, ಹಸೈನಾರ್ ಎ.ಕೆ.ಕಲ್ಲುಗುಂಡಿ, ಮಹಮ್ಮದ್ ರಫೀಕ್ ಸಿ.ಎಂ.ಐವತ್ತೊಕ್ಲು, ಕೆ.ಬಿ.ಇಬ್ರಾಹಿಂ ಮಂಡೆಕೋಲು, ಮುಹಿಯುದ್ದೀನ್ ಹಾಜಿ ಕೆ.ಎಂ, ಉಮ್ಮರ್. ಬಿ.(ಕೆ.ಎಸ್.ಉಮ್ಮರ್), ಮಹಮ್ಮದ್ ಅನ್ಸಾರ್ ಬೆಳ್ಳಾರೆ, ಅಬೂಬಕ್ಕರ್ ಸಿದ್ದಿಕ್ ಜೀರ್ಮುಖಿ, ಮಹಮ್ಮದ್ ಫೈಸಲ್ ಜೀರ್ಮುಖಿ, ಎಸ್.ಸಂಶುದ್ದೀನ್, ಮಹಮ್ಮದ್ ಶರೀಫ್ ಎಂ.ಕೆ (ಶರೀಫ್ ಕಂಠಿ), ಮಹಮ್ಮದ್ ಹನೀಫ ಎಸ್.ಕೆ. ಸಂಪಾಜೆ ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ಆಮಿನಾ ಎಸ್, ಸಾಜಿದಾ ಜಿ.ಎ, ಅಫೋಲಿನ್ ಡಿಸೋಜಾ, ಜೂಲಿಯಾನ ಕ್ರಾಸ್ತಾ ನಾಮಪತ್ರ ಸಲ್ಲಿಸಿದ್ದಾರೆ. ಪ.ಜಾತಿ, ಪ.ಪಂಗಡ ಸ್ಥಾನದಿಂದ ಯಾರೂ ನಾಮಪತ್ರ ಸಲ್ಲಿಸಿಲ್ಲ.ನಾಮಪತ್ರ ಸಲ್ಲಿಸಲು ಅ.25 ಕೊನೆಯ ದಿನವಾಗಿದ್ದು ನಾಮಪತ್ರ ಪರಿಶೀಲನೆ ಇಂದು ನಡೆದಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ತಿಳಿದು ಬಂದಿದೆ.















