ಪಂಜ:ಪಂಜ ಸೀಮೆ ಮಾಯಿಲಕೋಟೆ ದೈವಸ್ಥಾನದ ಜೀರ್ಣೋದ್ಧಾರದ ಉದ್ಘಾಟನಾ ಕಾರ್ಯಕ್ರಮ ಹಾಗೂ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪಂಜ ಸೀಮೆ ಮಾಯಲಕೋಟೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮನವಿ ಪತ್ರವನ್ನು

ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಮಾಯಲಕೋಟೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಆದ ಡಾ. ದೇವಿಪ್ರಸಾದ್ ಕಾನತ್ತೂರು, ಜೀರ್ಣದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಬಿಶ್ವಜಿತ್ ಪಳಂಗಯ, ಸಂಚಾಲಕ ಕುಮಾರ್ ಬಳ್ಳಕ್ಕ ಹಾಗೂ ಖಜಾಂಜಿ ಸುದರ್ಶನ್ ಪಟ್ಟಾಜೆ ಉಪಸ್ಥಿತರಿದ್ದರು. ಬಿಶ್ವಜಿತ್ ಪಳಂಗಾಯ ಸ್ವಾಗತಿಸಿ, ಸುದರ್ಶನ್ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿ ಸುಂದರ ಹೆಬ್ಬಾರಹಿತ್ಲು ವಂದಿಸಿದರು.

