ಪ್ರಯಾಗ್ರಾಜ್: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಬುಧವಾರ ಸಂಗಮದಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ
ಪವಿತ್ರ ಸ್ನಾನ ಮಾಡಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು.ಸಂಗಮದ ನೀರಿನಲ್ಲಿ ನಿಂತು ರುದ್ರಾಕ್ಷಿ ಹಿಡಿದು ಮೋದಿ ಜಪ ಮಾಡಿದರು. ಸಂಗಮದಲ್ಲಿ ಅರ್ಘ್ಯ ಅರ್ಪಿಸಿದರು.ಸಂಗಮದಲ್ಲಿ ಮುಳುಗೆದ್ದು ಪ್ರಧಾನಿ ಮೋದಿ ಪುಣ್ಯ ಸ್ನಾನ ಮಾಡಿಸಂಗಮದಲ್ಲಿ ಆರತಿ ಬೆಳಗಿ ಸಂಗಮಕ್ಕೆ ಪೂಜೆ ಸಲ್ಲಿಸಿದರು.ಮೋದಿ ಅವರ ಪುಣ್ಯ ಸ್ನಾನದ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ ಹಾಗೂ ಕುಂಭನಗರಿಯಲ್ಲಿ ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ತ್ರಿವೇಣಿ ಸಂಗಮದಲ್ಲಿ ಬೋಟ್ನಲ್ಲಿ ಆದಿತ್ಯನಾಥ್ ಅವರ ಜೊತೆ ಮೋದಿ ಅವರು ಕೆಲಕಾಲ ಸಂಚರಿಸಿದರು.