ಅಜ್ಜಾವರ: ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಮನೆಯ ಅಂಗಳಕ್ಕೆ ರಾತ್ರಿ ಬಂದ ಚಿರತೆಯೊಂದು ನಾಯಿಯ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಚಿರತೆ ಬಂದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಡ್ಡಂಬೈಲಿನ
ಶಂಕರ ಪಾಟಾಳಿ ಎಂಬವರ ಮನೆಯ ಅಂಗಳದಲ್ಲಿ
ಫೆ.4ರಂದು ರಾತ್ರಿ ಚಿರತೆ ಬಂದು ನಾಯಿ ಮೇಲೆ ದಾಳಿ ಮಾಡಿ ಅಂಗಳದಲ್ಲೇ ಕೊಂದು ತಿಂದಿದೆ. ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ ನಂತರ
ಮನೆಯಂಗಳಕ್ಕೆ ಬಂದ ಚಿರತೆಯ ದೃಶ್ಯ
ಬೆಳಗ್ಗಿನ ಜಾವ ಮತ್ತೆ ಬಂದ ಚಿರತೆ ಎರಡನೇ ನಾಯಿಯನ್ನು ಆಕ್ರಮಿಸಿ ಕೊಂದು ಹಾಕಿದೆ. ಆ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಲೈಟ್ ಹಾಕಿದ ಕಾರಣ ಪರಾರಿಯಾಗಿದೆ. ಒಂದೇ ದಿನ ರಾತ್ರಿ ಎರಡು ಬಾರಿ ಅಂಗಳಕ್ಕೆ ಬಂದ ಚಿರತೆಯ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.