ಸುಳ್ಯ:ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಪೂರ್ಣ ಗೆಲುವು ಸಾಧ್ಯವಾಗಬೇಕು ಎಂದು ಜಯನಗರ ಕೊರಂಬಡ್ಕದ ಕೊರಗಜ್ಜ ಸನ್ನಿಧಿಯಲ್ಲಿ ಸಾಮೂಹಿಕ ಪೂಜೆ, ವಿಶೇಷ ಪ್ರಾರ್ಥನೆ ನಡೆಸಲಾಯಿತು. ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಗೆಲುವಾಗಬೇಕು, ಪಾಕ್ ಆಕ್ರಮಿತ ಕಾಶ್ಮೀರ ಭಾರತದ
ವಶವಾಗಬೇಕು ಭಯೋತ್ಪದನೆ ಸಂಪೂರ್ಣ ನಿಲ್ಲಬೇಲು ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಶಾಂತಿನಗರ, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೇಶವ ಮಾಸ್ಟರ್ ಹೊಸಗದ್ದೆ, ಶಿವನಾಥ್ ರಾವ್ ಜಯನಗರ, ನಗರ ಪಂಚಾಯತ್

ಉಪಾಧ್ಯಕ್ಷ ಬುದ್ಧ ನಾಯ್ಕ್, ಜಗನ್ನಾಥ ಜಯನಗರ,ಕುಸುಮಾಧಾರ ಅನುಗ್ರಹ ಕ್ಯಾಂಟೀನ್, ರಾಧಾಕೃಷ್ಣ ಜಯನಗರ, ರಮೇಶ್ ಇರಂತಮಜಲು, ನಗರ ಪಂಚಾಯತ್ ಸದಸ್ಯೆ ಪೂಜಿತಾ, ಬೂತ್ ಸಮಿತಿ ಅಧ್ಯಕ್ಷ ರಂಜಿತ್,ಮಿಲಿಟರಿ ಗ್ರೌಂಡ್ ಬೂತ್ ಸಮಿತಿ ಅಧ್ಯಕ್ಷೆ ವೀಣಾ ನಂಬಿಯಾರ್, ಸೋಮನಾಥ ಪೂಜಾರಿ ಕೆ, ಹಳೆಗೇಟ್ ಬೂತ್ ಸಮಿತಿ ಕಾರ್ಯದರ್ಶಿ ಚಿದಾನಂದ ವಿದ್ಯಾನಗರ ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.