ನಿಡ್ವಾಳ:ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಮಹಾ ಸ್ವಾಮೀಜಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಶ್ರೀ ನಿಡ್ವಾಳ ಮಹಾವಿಷ್ಣು ದೇಗುಲಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವತಿಯಿಂದ ಪಾದ ಪೂಜೆ ಮಾಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ದೇಗುಲದ ಗೌರವ ಸಲಹೆ ಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ನಿಡ್ವಾಳ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರ ಚಂದ್ರ ಪ್ರಕಾಶ್ ಕಂಬಳ, ಶಿಲ್ಪಾ ಮಹೇಶ್ ಕರಿಕ್ಕಳ ಇದ್ಧರು.















