ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘ ‘ಜನತಾ ಬಜಾರ್’ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಪ್ರಸನ್ನ ಕೆ.ಎಣ್ಮೂರು ಆಯ್ಕೆಯಾಗಿದ್ದಾರೆ. ಅ.24ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಸನ್ನ ಎಣ್ಮೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಾದಲಾಕ್ಷಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜನತಾ ಬಜಾರ್ನ ಆಡಳಿತ ಮಂಡಳಿಗೆ ನಡೆದ
ಚುನಾವಣೆಯಲ್ಲಿ ಸಹಕಾರ ಭಾರತಿ 14 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿತ್ತು. 16 ನಿರ್ದೇಶಕರ ಸ್ಥಾನದಲ್ಲಿ 13 ಸ್ಥಾನದಲ್ಲಿ ಅವಿರೋಧವಾಗಿ ಮತ್ತು ಒಂದು ಸ್ಥಾನ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರು. ಸೂಕ್ತ ಅಭ್ಯರ್ಥಿಗಳು ಇಲ್ಲದ ಕಾರಣ ಎಡರು ಸ್ಥಾನಗಳು ಖಾಲಿ ಇದೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಶಾಸಕಿ ಭಾಗೀರಥಿ ಮುರುಳ್ಯ, ಪ್ರಸನ್ನ ಎಣ್ಮೂರು, ನವೀನ್ ಬಾಳುಗೋಡು ಹಾಗೂ ಉದಯ ಮಾದೋಡಿ ಆಯ್ಕೆಯಾಗಿದ್ದರು.

ಪ್ರಸನ್ನ ಎಣ್ಮೂರು ಅವರು ಮೂರನೇ ಬಾರಿಗೆ ಜನತಾ ಬಜಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2000 ದಿಂದ 2020ರವರೆಗೆ ಜನತಾ ಬಜಾರ್ ನಿರ್ದೆಶಕರಾಗಿದ್ದ ಅವರು 2005ರಿಂದ 2015ರ ತನಕ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.















