ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಅತೀ ಹೆಚ್ಚಿನ ಮತಗಳ ಅಂತರವನ್ನು ಬೆಳ್ತಂಗಡಿ ಕ್ಷೇತ್ರದಿಂದ ನೀಡುವ ಸಂಕಲ್ಪವನ್ನು ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಅದಕ್ಕಿಂತಲೂ ಅಧಿಕ ಬಹುಮತವಬ್ನು ಸುಳ್ಯದಿಂದ ತೆಗೆಸಿಕೊಡುವ ಸಂಕಲ್ಪ ಸುಳ್ಯದ ಕಾರ್ಯಕರ್ತರು ಮಾಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕರೆ ನಿಡಿದ್ದಾರೆ.ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ
ಅವರು ಹಿಂದುತ್ವಕ್ಕೆ ಬದ್ಧತೆ ಮತ್ತು ಅಭಿವೃದ್ಧಿಗೆ ಆದ್ಯತೆ ಎಂಬ ಸಂಕಲ್ಪವನ್ನು ಬ್ರಿಜೇಶ್ ಚೌಟ ಈಗಾಗಲೇ ಮಾಡಿದ್ದಾರೆ. ಅದನ್ನು ಮತದಾರರಿಗೆ ಮುಟ್ಟಿಸಬೇಕು.
ಬಿಜೆಪಿಯ ನಿಲುವು ಯಾವಾಗಲೂ ಸ್ಪಷ್ಟ ಇದೆ ಎಂದ ಅವರು ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಮಾಡಿರುವ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಲುಪಿಸಬೇಕು ಎಂದು ಅವರು ಹೇಳಿದರು.
![](https://thesulliamirror.com/wp-content/uploads/2024/03/IMG_20240329_170656.jpg)
ರಾಷ್ಟ್ರಕ್ಕೆ ಮಾದರಿ ಸುಳ್ಯ-ಚೌಟ ಅಭಿಮತ:
ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ದೊಡ್ಡ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ. ಪಕ್ಷ, ಕಾರ್ಯಕರ್ತರು ಜನರು ನೀಡಿದ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜನರ, ಕಾರ್ಯಕರ್ತರ, ತುಳುನಾಡಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಅವರು
![](https://thesulliamirror.com/wp-content/uploads/2024/03/IMG_20240329_170704.jpg)
ಹೇಳಿದರು. ಮೊದಲ ಸ್ವಾತಂತ್ರ್ಯ ಹೋರಾಟ ನಡೆಯುವ ಎರಡು ದಶಕಗಳ ಮೊದಲೇ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ನೆಲ ಈ ಸುಳ್ಯ. ಪಕ್ಷ ಸಂಘಟನೆಗೆ ರಾಷ್ಟ್ರೀಯತೆಗೆ ದೇಶಕ್ಕೆ ಮಾದರಿ ಸುಳ್ಯ ಕ್ಷೇತ್ರ. ಇಲ್ಲಿಯ ಕಾರ್ಯಕರ್ತರು ಇತರರಿಗೆ ಮಾದರಿ. ಈ ಕ್ಷೇತ್ರದಿಂದ ಅತೀ ಹೆಚ್ಚು ಮತಗಳ ಅಂತರ ಗಳಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದರು.