ಕೇರ್ಪಳ: ಶ್ರೀ ಭಗವತಿ ಯುವ ಸೇವಾ ಸಂಘ ಬೂಡು- ಕೇರ್ಪಳ-ಕುರುಂಜಿಗುಡ್ಡೆ ಇದರ ಮಹಾಸಭೆಯು ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುನಿಲ್ ಕೇರ್ಪಳ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬೂಡು ರಾಧಾಕೃಷ್ಣ ರೈ, ಕಾರ್ಯದರ್ಶಿಯಾಗಿ ರಾಜೇಶ್ ಕುರುಂಜಿಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ
ಪ್ರದೀಪ್ ರೈ ಬೂಡು, ಖಜಾಂಜಿಯಾಗಿ ಮಹಾಬಲ ರೈ, ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ ಕಾಳ್ಯಾಂಗಾಡ್, ಲಕ್ಷ್ಮಣ ಕೇರ್ಪಳ, ಜತೆಕಾರ್ಯದರ್ಶಿಗಳಾಗಿ ಕುಸುಮಾಧರ ರೈ ಬೂಡು, ವಿಜಯ್ ಕುಮಾರ್ ಕುರುಂಜಿಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಸೀತಾರಾಮ ಕುದ್ಪಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಶೆಟ್ಟಿ ಬೂಡು, ಗೌರವ ಸಲಹೆಗಾರರಾಗಿ ಶಿವರಾಮ ಕೇರ್ಪಳ (ಕೆ.ವಿ.ಜಿ.ಪಿ.), ಆನಂದ ಖಂಡಿಗೆ, ಗೋಪಾಲ ಎಸ್. ನಡುಬೈಲು, ಮೋನಪ್ಪ ಪೂಜಾರಿ, ವಿಠಲ ರೈ ಬೂಡು, ಬೀರಣ್ಣ ಗೌಡ ಆಯ್ಕೆಯಾದರು.

ಬೂಡು ರಾಧಾಕೃಷ್ಣ ರೈ

ಮಹಾಬಲ ರೈ
2024-25ನೇ ಸಾಲಿನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸುವುದಾಗಿ ತೀರ್ಮಾನಿಸಲಾಯಿತು. 2024-25ನೇ ವರ್ಷವು ಸಂಘದ ಬೆಳ್ಳಿ ಹಬ್ಬದ ವರ್ಷವಾಗಿದ್ದು ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ತಿರ್ಮಾನಿಸಲಾಯಿತು.
ಸಂಘದ ನಿರ್ಗಮಿತ ಕಾರ್ಯದರ್ಶಿ ವಾಸುದೇವ ನಾಯಕ್ ಸ್ವಾಗತಿಸಿದರು. ಸಂಘದ ನಿರ್ಗಮಿತ ಅಧ್ಯಕ್ಷ ಗೋಪಾಲ ಎಸ್.ನಡುಬೈಲು ಕಳೆದ ಅವಧಿಯ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಖಜಾಂಜಿ ಮಹಾಬಲ ರೈ ಬೂಡು ಇವರು ಲೆಕ್ಕಪತ್ರಗಳನ್ನು ಮಂಡಿಸಿದರು.ಕುಸುಮಾಧರ ರೈ ಬುಡು ವಂದಿಸಿದರು.