The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಂಕಣ:ಗಡಿನಾಡ ದಡದಿಂದ.. ಇದು ಚಾರ್ಲಿ 777 ನಿರ್ದೇಶಕ ಕಿರಣ್ ನಮ್ಮೂರಲ್ಲಿ ಅಪ್ಪಟ ರಾಜನಾದ ಕತೆ…!

by ದಿ ಸುಳ್ಯ ಮಿರರ್ ಸುದ್ದಿಜಾಲ September 11, 2022
by ದಿ ಸುಳ್ಯ ಮಿರರ್ ಸುದ್ದಿಜಾಲ September 11, 2022
Share this article

*ಎಂ.ನಾ.ಚಂಬಲ್ತಿಮಾರ್.
ಯಾವ ಊರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಮುಂಜಾನೆ ಮನೆಮನೆ ದಿನಪತ್ರಿಕೆ ಹಾಕುವ ಮೊದಲ ಉದ್ಯೋಗ ಮಾಡಿದನೋ….
ಯಾವ ಊರಲ್ಲಿ ಅತಿಯಾಸೆಯಿಂದ ತೀರ ಎಳವೆಯಲ್ಲೇ ಮೊದಲ ಬಾರಿ ವೇದಿಕೆಯೇರಿ ಏಕಪಾತ್ರಾಭಿನಯ ಮಾಡಿದನೋ…
ಯಾವ ಊರಲ್ಲಿ ಬಡತನ, ಹಸಿವಿನಿಂದ ಕಂಗೆಟ್ಟು ಗಂಜಿಯ ತೆಳಿಯಲ್ಲಿ ಅನ್ನದಗುಳು ಹುಡುಕಿದನೋ….
ಯಾವ ಊರಿನ ಬಸ್ಟೇಂಡಲ್ಲಿ ಹತಾಶೆಯಿಂದ ತಲೆತಗ್ಗಿಸಿ ಕಣ್ಣೀರಿಟ್ಟು ನಿರಾಶೆಯಿಂದ ಕುಸಿದು ಕುಳಿತನೋ……
ಅದೇ ಊರಲ್ಲೀಗ.. ಅದೇ ಹುಡುಗ ಅಕ್ಷರಶಃ ರಾಜನಂತೆ ಗೌರವಾದರದ ಮಾನ ಸನ್ಮಾನ ಪಡೆದಿದ್ದಾನೆ.!!!
ಅದೂ ಆತ ಓಡಾಡಿ ಅರಳಿದ ಅದೇ ಶಾಲೆಯಲ್ಲಿ.. ಮೊದಲಕ್ಷರ ಕಲಿಸಿದ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಅಧ್ಯಾಪಿಕೆ ಮತ್ತು ಅದೇ ಊರವರ ಮುಂದೆ!!!
ಇದಲ್ಲವೇ ಸಾಧನೆ….??
ಇದು ವ್ಯಕ್ತಿಯೊಬ್ಬನಿಗೆ ಸಂದ ಪದ್ಮಗೌರವದಷ್ಟೇ ತೂಕದ ಶ್ರೇಷ್ಠ ಅಂಗೀಕಾರದ ಮಾನ್ಯತೆ.
ಇಂಥದ್ದೊಂದು ಭಾವುಕ ಕ್ಷಣಗಳಿಗೆ ಮೊನ್ನೆ ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆ ವೇದಿಕೆಯಾಯಿತು.ಅದು ಕನ್ನಡ ಸಿನಿಮಕ್ಕೆ ಕೀರ್ತಿ ಕಿರೀಟ ತೊಡಿಸಿದ ಚಾರ್ಲಿ777 ಸಿನಿಮಾ ನಿರ್ದೇಶಕ, ನಮ್ಮ ಗಡಿನಾಡ ಹುಡುಗ ಕಿರಣ ನ ಜೊತೆ ಒಂದು ಸಂತಸದ ಸಂಜೆ ಕಳೆದ ಸಾರ್ಥಕ ಕಾರ್ಯಕ್ರಮ. ಆಯೋಜಿಸಿದವರು 38ವರ್ಷದ ಹಿರಿತನದ ಪಕ್ವತೆ ಉಳ್ಳ ಮಾನ್ಯದ ಮಾನ್ಯತೆಯ ಸಂಕೇತ ಎಂದೇ ಬಿಂಬಿತವಾದ ಸಾಮ್ರಾಟ್ (ರಿ) ಮಾನ್ಯ.
ಚಾರ್ಲಿ ಖ್ಯಾತಿಯ ಕಿರಣನ ಬಾಲ್ಯ ಅರಳಿದ್ದು ಇದೇ ಮಾನ್ಯದಲ್ಲಿ. ಆತ ಸಾಂಸ್ಕೃತಿಕ, ಸಾಮಾಜಿಕ ಬದುಕಿಗೆ ಕಾಲೂರಿದ್ದು ಕೂಡಾ ಇದೇ ಸಾಮ್ರಾಟಿನ ಮೂಲಕ.ಈ ಎಲ್ಲಾ ನೆನಪುಗಳನ್ನು ಮರು ಮೆಲುಕಿದ ಸಂತಸದ ಸಂಜೆ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮ. ಇದಕ್ಕೆ ಅಧ್ಯಕ್ಷ, ಗಣ್ಯ ಅತಿಥಿಗಳೆಂದಿಲ್ಲ. ಕ್ಲಬ್ಬಿನ ಸದಸ್ಯರು ಮತ್ತು ಕ್ಲಬ್ಬಿನೊಡನೆ ಆಪ್ತ ಸಂಬಂಧ ಹೊಂದಿದ ಆಪ್ತೇಷ್ಟರನ್ನಷ್ಟ್ಟೇ ಕರೆಯಲಾಗಿತ್ತು. ಅವರೆಲ್ಲ ಸುತ್ತ ಕುಳಿತರು. ಕಿರಣ ಅಮ್ಮ, ತಮ್ಮ, ಸೋದರಿಯೊಂದಿಗೆ ಬಂದಿದ್ದ.
ಬಾಲ್ಯದ ಬಡತನದಲ್ಲಿ ಆಸರೆಯಾದ ಊರವರ ಮುಂದೆ ಅದೇ ಮುಗ್ಧ ಹುಡುಗನಾಗಿ ವಿನಯದಿಂದ ನಿಂತಿದ್ದ!

ಜೀವನ ಯಾನದ ನೆನಪುಗಳನ್ನು ರಂಗುರಂಗಿನ ಕಟ್ಟುಕತೆಯಾಗಿಸದೇ, ಅನುಭವಿಸಿದ ಬಡತನ ಮತ್ತು ಅದರ ಕುಲುಮೆಯಿಂದಲೇ ಸಾಧನೆಯ ಕಡೆಗೆ ಏಣಿಇಟ್ಟದ್ದನ್ನು ಹಸಿ ಹಸಿಯಾಗಿ ಹೇಳಿದ….!!
ಕೇಳಿದವರ ಮನಸಿನ ಜತೆ ಕಣ್ಣೂ ಕರಗಿತು. ಗಂಟಲೊಣಗಿತು. .
ಅಲ್ಲಿ ಸಾಸಿವೆ ಬಿದ್ದರೂ ಕೇಳುವಂತ ಮೌನ ಆವರಿಸಿತ್ತು..!
ಪ್ರೇರಣೆಯ ಸ್ಫೂರ್ತಿಯ ಮಾತುಗಳು ಮೊರೆಯುತಿತ್ತು!
ಕಿರಣನನ್ನ ನಡುವೆ ಕೂರಿಸಿ ಕಿರಣನನ್ನು ಬಲ್ಲವರು ಮಾತಾಡಿದರು. ಕೆಲವರು ಕಿರಣನ ಸಾಧನೆ, ಕನಸುಗಳ ಕುರಿತು ಪ್ರಶ್ನೆ ಕೇಳಿದರು. ಅನೇಕರು ಕಿರಣನ ಮಾತುಗಳಿಗೆ ಕಿವಿಯಾದರು…
ಇದು ಕಿರಣನ ಕತೆಯಷ್ಟೇ ಅಲ್ಲ ಕತ್ತಲಕೂಪದಲ್ಲಿರುವ ಅನೇಕರ ಬದುಕಿಗೆ ಕಿರಣ ಬೀರುವ ಕತೆಯೂ ಹೌದು.!
ಕಿರಣ ಕಾಸರಗೋಡಿನ ಮೊದಲ ಪರಿಪೂರ್ಣ ನಿರ್ದೇಶಕ. ಹಳ್ಳಿಯ ಗ್ರಾಮೀಣತೆಯ ನಡುವಿಂದ ಕನಸನೇರಿ ಹೊರಟವ. ಚಾರ್ಲಿಯಂತ ಸಿನಿಮಾ ಗೆಲುವು ಕಾಸರಗೋಡಿನ ಮತ್ಯಾರಿಗೂ ಒಲಿಯಲಿಲ್ಲ! ಉಳಿದ ಊರಲ್ಲೆಲ್ಲಾದರೂ
ಕಿರಣ ಇರುತ್ತಿದ್ದರೆ ಈ ಸಾಧನೆಗೆ ಆ ನಾಡಿಗೆ ನಾಡೇ ಸಂಭ್ರಮಿಸುತಿತ್ತು. ಅಭಿನಂಧನೆಯ ಉತ್ಸವ ಆಚರಿಸುತ್ತಿದ್ದರು..
ಕಾಸರಗೋಡು ಮಾತ್ರ ಮೌನದ ಛಾದರ ಹೊದ್ದಿದೆ!!
ಆದರೆ ಮಾನ್ಯದ ಮಾನ್ಯತೆಯ ಸಾಮ್ರಾಟ್ ಸದ್ದಿಲ್ಲದೇ ಗ್ರಾಮೀಣ ಶುದ್ದತೆಯ ಮಗುಮನಸ್ಸಿಂದ ಆಡಂಬರಗಳಿಲ್ಲದೇ ಕಿರಣನನ್ನು ಮರೆಯದೇ ಪ್ರೀತಿ ಉಣಿಸಿದ್ದಾರೆ..

ಆತ ಬೆಳೆದುಬಂದ ಕಾಲದ ಹೆಜ್ಜೆ ಗುರುತುಗಳಾದ ಚಿತ್ರ ಗಳ ಮಾಲೆ ಪೋಣಿಸಿದ ಅಭಿನಂಧನಾ ಪತ್ರ ಇತ್ತು ಆದರಿಸಿದ್ದಾರೆ. ಬೆಳೆದ ಕತೆಯನ್ನು ಸೂಕ್ಷ್ಮವಾಗಿ ಸಾರುವ ಡಾಕ್ಯುಫಿಷನ್ ಪ್ರದರ್ಶಿಸಿದ್ದಾರೆ…
ಇವ ನಮ್ಮವ ಇವ ನಮ್ಮವನೆಂದು ಕೊಂಗಾಟದಿಂದ ಕೊಂಡಾಡಿದ್ದಾರೆ..
ಇದೆಲ್ಲ ಕಂಡು ಕಿರಣನ ಕಣ್ಣೊದ್ದೆಯಾಗಿದೆ. ಭಾವೋತ್ಕರ್ಷವಾದರೂ ಅದುಮಿ ಹಿಡಿದು ಕೂತಿದ್ದಾನೆ..
ಕೊನೆಗೆ ಬಿದಿರೊಂದು ಎತ್ತರಕ್ಕೇರಬೇಕಾದರೆ ಸೂಕ್ತ ಮಣ್ಣುಸಿಗಬೇಕು. ಅದರೊಳಗೆ ಆಳಕ್ಕಿಳಿಯಬೇಕು. ನನ್ನ ಪಾಲಿಗೆ ಮಾನ್ಯದ ಮಣ್ಣು ಅಂಥದ್ದು. ಅದಕ್ಕೆ ನಾನು ತಲೆತಗ್ಗಿಸುವೆ.. ಎಂದೆಂದಿಗೂ ಈ ಊರಿಗೆ ಕೃತಜ್ಞನಾಗಿರುವೆ ಎಂದ. ಬದುಕಿನ ಪ್ರತಿಹೆಜ್ಜೆ, ಅಲ್ಲಿ ಸಿಕ್ಕಿದ ಪ್ರತಿಯೊಬ್ಬರನ್ನೂ ಮನದ ಕೋಶದೊಳಗೆ ಕಿರಣ ಬಂಧಿಸಿಟ್ಟಿದ್ದಾನೆ. ಅವರೆಲ್ಲರ ಹೆಸರು ಸಹಿತನೆನಪುಗಳು ಜೋಪಾನವಾಗಿವೆ. ಅದನ್ನು ದೃಶ್ಯದಂತೆ ಮಾತಿನಲ್ಲೂ ಕಟ್ಟಲಾತ ಪಳಗಿದ್ದಾನೆ..
ಗಡಿನಾಡ ಹುಡುಗನಿಗೆ ಉಜ್ವಲ ಭವಿಷ್ಯ ಹಾರೈಸುತ್ತ ಜೊತೆಗೆ ಉಂಡು ನಕ್ಕುನಲಿದ ಈ ಕಾರ್ಯಕ್ರಮ ಮಾನ್ಯಕ್ಕೆ ಭೂಷಣ.
ನಮ್ಮ ಮನಸ್ಸಲ್ಲಿ ಬಹುಕಾಲ ಉಳಿಯುವಂಥಾದ್ದು. ಅಂದ ಹಾಗೆ ಕಿರಣನ ಸಾಧನೆ ಸುಳ್ಯಕ್ಕೂ ಹೆಮ್ಮೆ.. ಕಿರಣನ ತಂದೆಯ ಊರು ಸುಳ್ಯ. ಕಾಸರಗೋಡಿನಂತೆ ಸುಳ್ಯದಲ್ಲಿಯೂ ಬಾಲ್ಯವನ್ನು ಕಳೆದ ಹುಡುಗ ಕಿರಣ ರಾಜ್..

ಕಿರಣ್‌ರಾಜ್ ಜೊತೆ ಎಂ.ನಾ.

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಯುವ ಕಲಾವಿದೆ, ರೂಪದರ್ಶಿ ಸುಳ್ಯದ ಶ್ವೇತಾ ಎಂ ನಾಯಕ್ ನಿರ್ದೇಶಿಸಿರುವ ಓಣಂ ಹಬ್ಬದ ವೈಶಿಷ್ಠ್ಯ ಸಾರುವ ‘ಕುಞುವಾವೆಂಡೆ ಮಾವೇಲಿ’ ಕಿರುಚಿತ್ರ ಬಿಡುಗಡೆ
next post
ಆಹ್ಲಾದಕರ ಸ್ನಾನಕ್ಕಾಗಿ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಹೊರ ತಂದಿದೆ ‘ಮೈ ಸ್ನಾನ’ ಸೋಪ್: ಮೂರು ದಶಕಗಳಿಂದ‌ ಮನೆ‌ ಮಾತಾಗಿದೆ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಉತ್ಪನ್ನಗಳು..!

You may also like

ಸ್ಪೀಕರ್ ಯು.ಟಿ.ಖಾದರ್ ಅವರಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ

June 8, 2023

ಕೇರಳಕ್ಕೆ ಮುಂಗಾರು ಪ್ರವೇಶ: ವಾಡಿಕೆಗಿಂತ ಎಂಟು ದಿನ ತಡವಾಗಿ ಮಾನ್ಸೂನ್...

June 8, 2023

ಗ್ಯಾರಂಟಿ ಯೋಜನೆಗಳಅರ್ಜಿ ಸಲ್ಲಿಕೆ, ಅನುಮೋದನೆ ಪ್ರಕ್ರಿಯೆ ಸರಳವಾಗಿರಲಿ; ಅಧಿಕಾರಿಗಳಿಗೆ ಸಿಎಂ...

June 8, 2023

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸ್ಪೀಕರ್ ಯು.ಟಿ.ಖಾದರ್ ಅವರಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
  • 11ರಿಂದ ಜಿಲ್ಲೆಯಾದ್ಯಂತ ಜಾನುವಾರುಗಳ ಚರ್ಮ ಗಂಟು ರೋಗದ ವಿರುಧ್ಧ ಉಚಿತ ಲಸಿಕಾ ಅಭಿಯಾನ
  • ಕೇರಳಕ್ಕೆ ಮುಂಗಾರು ಪ್ರವೇಶ: ವಾಡಿಕೆಗಿಂತ ಎಂಟು ದಿನ ತಡವಾಗಿ ಮಾನ್ಸೂನ್ ಆಗಮನ: ಕೇರಳದಲ್ಲಿ 4 ದಿನ ಮಳೆಯ ಮುನ್ಸೂಚನೆ
  • ಗ್ಯಾರಂಟಿ ಯೋಜನೆಗಳಅರ್ಜಿ ಸಲ್ಲಿಕೆ, ಅನುಮೋದನೆ ಪ್ರಕ್ರಿಯೆ ಸರಳವಾಗಿರಲಿ; ಅಧಿಕಾರಿಗಳಿಗೆ ಸಿಎಂ ಸೂಚನೆ: ಆಗಸ್ಟ್‌ನಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಚಾಲನೆ
  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ