ಸುಳ್ಯ:ಮಕ್ಕಳಲ್ಲಿ ವಾಲಿಬಾಲ್ ಕ್ರೀಡೆಯ ಆಸಕ್ತಿ ಬೆಳೆಸಬೇಕು. ವಾಲಿಬಾಲ್ ಆಟಗಾರರ ಯುವ ತಂಡವನ್ನು ಕಟ್ಟಬೇಕು ಎಂಬ ನೆಲೆಯಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಯುವ ಸಬಲೀಕರಣ ಇಲಾಖೆ ಮಂಗಳೂರು ಮತ್ತು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಸಹಯೋಗದೊಂದಿಗೆ ಸುಳ್ಯದಲ್ಲಿ ವಾಲಿಬಾಲ್ ತರಬೇತಿ ಶಿಬಿರ ಆರಂಭಗೊಂಡಿದೆ. ಸುಳ್ಯ ಹಾಗೂ ಕಡಬ ತಾಲೂಕಿನ
![](https://thesulliamirror.com/wp-content/uploads/2023/04/IMG-20230421-WA0013.jpg)
18 ವರ್ಷಕ್ಕಿಂತ ಕೆಳಗಿನ ಬಾಲಕ ಹಾಗು ಬಾಲಕಿಯರಿಗಾಗಿ ಸುಳ್ಯದ ಯುವಜನಾ ಸಂಯುಕ್ತ ಮಂಡಳಿ ಭವನದ ಬಳಿಯ ಕ್ರೀಡಾಂಗಣದಲ್ಲಿ ನಡೆಯುವ ಉಚಿತ ವಾಲಿಬಾಲ್ ತರಬೇತಿ ಶಿಬಿರದಲ್ಲಿ 130 ಮಕ್ಕಳು ಭಾಗವಹಿಸುತ್ತಿದ್ದಾರೆ. ಬೆಳಿಗ್ಗೆ ಹಾಗು ಸಂಜೆ ಹೀಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ.
ಬೆಳಿಗ್ಗೆ 6.30ರಿಂದ 9.00 ಮತ್ತು ಸಂಜೆ 4:30 ರಿಂದ 6:45 ತನಕ ತರಬೇತಿ ನಡೆಯುತಿದೆ. ಎನ್ಐಎಸ್ ತರಬೇತಿದಾರರಾದ ಮನೊಜ್ ಅಡ್ಕಾರ್ ಅವರು ವಾಲಿಬಾಲ್ ಕೋಚಿಂಗ್ ನೀಡುತ್ತಾರೆ.
ಜಯಪ್ರಕಾಶ್ ಕುಡೆಕಲ್ಲು, ನಿತಿನ್ ಗೂನಡ್ಕ, ಇರ್ಪಾನ್ ಜನತಾ, ಸುದರ್ಶನ್, ರಾಜೀವಿ ಲಾವಂತಡ್ಕ ಅವರು ಕೂಡ ತರಬೇತುದಾರರಾಗಿ ಸಹಕರಿಸಿತ್ತಿದ್ದಾರೆ. 12 ದಿನಗಳ ಶಿಬಿರ ಏ.19ರಿಂದ ಆರಂಭಗೊಂಡ ಶಿಬಿರ ಏ.30ರ ತನಕ ನಡೆಯಲಿದೆ.103 ಬಾಲಕ ಹಾಗೂ 27 ಬಾಲಕಿಯರು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಸಂಜೆ ಉಚಿತ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತಿದೆ.
![](https://thesulliamirror.com/wp-content/uploads/2023/04/IMG-20230421-WA0012.jpg)
ಶಿಬಿರದ ಉದ್ಘಾಟನೆ:
ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ. ಮುಖ್ಯ ಅತಿಥಿಗಳಾಗಿ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ, ಎನ್.ಎ ರಾಮಚಂದ್ರ, ಪ್ರೊಫೆಸರ್ ಎಂ. ಬಾಲಚಂದ್ರ ಗೌಡ ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್.ಸಂಶುದ್ದೀನ್, ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಟಿ ವಿಶ್ವನಾಥ ,
![](https://thesulliamirror.com/wp-content/uploads/2023/04/IMG_20230421_003445.jpg)
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಕೆ.ಎಂ. ಮುಸ್ತಫಾ, ಎಸಿ ವಸಂತ , ಹರಿಪ್ರಕಾಶ್ ಅಡ್ಕಾರ್ ,ಮುಖ್ಯ ತರಬೇತುದಾರ ಮನೋಜ್ ಅಡ್ಕಾರ್ , ಇರ್ಫಾನ್ ಸುಳ್ಯ, ಸುದರ್ಶನ್ ಸುಳ್ಯ, ಇಬ್ರಾಹಿಂ ಸುಳ್ಯ, ರಜಾಕ್(ರಜ್ಜು) ಕೆ.ಗೋಕುಲ್ದಾಸ್, ರಾಜೀವಿ ಲಾವಂತ್ತಡ್ಕ, ನಿತಿನ್ ಗೂನಡ್ಕ, ವಿಶ್ವನಾಥ್ ಬೆಳ್ಳಾರೆ ಶಹೀದ್ ಪಾರೆ ಮುಂತಾದವರು ಉಪಸ್ಥಿತರಿದ್ದರು. ಕೊರಗಪ್ಪ ಬೆಳ್ಳಾರೆ ಸ್ವಾಗತಿಸಿದರು. ದೊಡ್ಡಣ್ಣ ಬರಮೇಲು ಪ್ರಾಸ್ಥವಿಕವಾಗಿ ಮಾತನಾಡಿದರು. ಎನ್ ಜಯಪ್ರಕಾಶ್ ರೈ , ಪ್ರೊ.ಎಂ. ಬಾಲಚಂದ್ರ ಗೌಡ, ಎನ್.ಎ ರಾಮಚಂದ್ರ ಶುಭ ಹಾರೈಸಿದರು. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ವಂದಿಸಿದರು.