ಪೆರಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲ್ಲೂಕು ಸಂಪಾಜೆ ವಲಯದ ಪೆರಾಜೆ ಅಂಜಿಕಾರು ಎಂಬಲ್ಲಿ ಧರ್ಮಸ್ಥಳ ಅನುದಾನದಲ್ಲಿ ನಿರ್ಮಾಣಗೊಂಡ ವಾತ್ಸಲ್ಯ ಮನೆ ಹಸ್ತಾಂತರ ಮತ್ತು ಸಹಾಯಧನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್ ಭಾಗವಹಿಸಿ ಮನೆಯ ಕೀ ಹಸ್ತಾಂತರ ಮಾಡಿದರು. ಇತ್ತೀಚೆಗೆ ಸಂಪಾಜೆಯಲ್ಲಿ ಉಂಟಾದ ಜಲ ಪ್ರವಾಹದಲ್ಲಿ ಬಹಳಷ್ಟು ಕುಟುಂಬಗಳಿಗೆ

ಆರ್ಥಿಕವಾಗಿ ನಷ್ಟ ಉಂಟಾಗಿದ್ದು ಇದರಲ್ಲಿ ವಿಪರೀತ ಹಾನಿಯಾದ 15 ಕುಟುಂಬಗಳಿಗೆ ಸಹಾಯಧನ ಪರಿಹಾರ ಮೊತ್ತವನ್ನು ವಿತರಣೆ ಮಾಡಿದರು. 2 ಸದಸ್ಯರಿಗೆ ಸಿಡ್ಬಿ ಸಾಲ ಯೋಜನೆಯಲ್ಲಿ ಆಟೋ ರಿಕ್ಷಾ ವಿತರಣೆ ಮಾಡಲಾಯಿತು. ಪ್ರಾಸ್ತವಿಕವಾಗಿ ಜ್ಞಾನವಿಕಾಸ ನಿರ್ದೇಶಕರಾದ ವಿಠ್ಠಲ್ ಪೂಜಾರಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪವತಿ ಕುಡೆಕಲ್ಲು ವಹಿಸಿದರು. ವೇದಿಕೆಯಲ್ಲಿ ದ. ಕ.2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್,ಒಕ್ಕೂಟದ ವಲಯಾಧ್ಯಕ್ಷ ಹೂವಯ್ಯ, ಜನಜಾಗೃತಿ ವೇದಿಕೆಯ ವಲಯಧ್ಯಕ್ಷ ಲೋಕನಾಥ್ ಅಮೆಚೂರು,ಅರಂಬೂರು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಮೃತ, ವಾತ್ಸಲ್ಯ ಮನೆಯ ಫಲಾನುಭವಿ ತಿಮ್ಮಪ್ಪ ಮಮತಾ ಉಪಸ್ಥಿತರಿದ್ದರು. ಶೌರ್ಯ ವಿಪತ್ತು ನಿರ್ವಹಣೆ ಘಟದ ಸ್ವಯಂಸೇವಕರು ಭಾಗವಹಿಸಿದ್ದರು.ಸುಳ್ಯ ಯೋಜನಾಧಿಕಾರಿ ನಾಗೇಶ್ ಸ್ವಾಗತಿಸಿ, ಸಂಪಾಜೆ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ವಂದಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.ಬೆಳಗ್ಗೆ ಗಣಹೋಮ, ನಂತರ ಶ್ರೀ ಮೂಕಾಂಬಿಕಾ ಭಜನೆ ಮಂಡಳಿ ಅರಂಬೂರು ಇವರಿಂದ ಭಜನಾ ಸೇವೆ ನಡೆಯಿತು.