ಸುಳ್ಯ:ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ನಲ್ಲಿ ಗ್ರಾಹಕರಿಗೆ ಉಚಿತವಾಗಿ ಚಿನ್ನದ ರಿಪೇರಿ ಮೇಳ ಆ. 10 ರಿಂದ ಆರಂಭಗೊಳ್ಳಲಿದೆ.ಸ್ವರ್ಣಂ ಜ್ಯುವೆಲ್ಸ್ ಮಳಿಗೆಯು ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ಉಚಿತ ಚಿನ್ನದ ರಿಪೇರಿ ಮೇಳ ಎಂಬ
ಹೊಸತನವನ್ನು ಸ್ವರ್ಣಂ ಜ್ಯುವೆಲ್ಸ್ ಆಯೋಜನೆಗಳಿಸಿದೆ. ಅಲ್ಲದೆ ನಿಮ್ಮ ಯಾವುದೇ ಹಳೆ ಆಭರಣಗಳು ಮುರಿದಿದ್ದರೂ ಅನುಭವಿ ಕರಕುಶಲಗಾರರ ಮೂಲಕ ಜೋಡಣೆ ಮತ್ತು ಪಾಲಿಶ್ ಹಾಗೂ ಉಚಿತ ಚಿನ್ನದ ಟೆಸ್ಟಿoಗ್ ಉಚಿತವಾಗಿ ಮಾಡಿಕೊಡಲಾಗುವುದು . ಹಾಗೂ ಈ ಉಚಿತ ಚಿನ್ನ ರಿಪೇರಿ ಮೇಳವು ಆಗಸ್ಟ್ 10 ರಿಂದ ಪ್ರಾರಂಭವಾಗಿ ಆಗಸ್ಟ್ 16 ರವರೆಗೆ ನಡೆಯಲಿದೆ.ಅಲ್ಲದೇ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ

ಪ್ರತೀ ಚಿನ್ನಾಭರಣಗಳ ಪ್ರತೀ ಪವನಿಗೆ 3000 ಕಡಿತ ಹಾಗೂ ಗ್ರಾಂ ಗೆ 300 ಕಡಿತದೊಂದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷ ಆಕರ್ಷಣೆ ವಿವಿಎಸ್ ಗುಣಮಟ್ಟದ ಡೈಮಂಡ್ ಆಭರಣಗಳು ಹಾಗೂ ಮನಕ್ಕೊಪ್ಪುವ 250 ಅಧಿಕ ವಿವಿಧ ವಿನ್ಯಾಸಗಳ ಕರಿಮಣಿ ಹಾಗೂ 500 ಕ್ಕೂ ಅಧಿಕ ವಿನ್ಯಾಸದ ಡೈಮಂಡ್ ಆಭರಣಗಳು ಲಭ್ಯವಿದೆ. ಅಲ್ಲದೇ ಹಳೆಯ ಕರಿಮಣಿಯನ್ನು ಹೊಸ 916ಗೆ ಎಕ್ಸ್ಚೇಂಜ್ ಮಾಡಲು ಉತ್ತಮ ಅವಕಾಶ ಸ್ವರ್ಣಂ ಜ್ಯುವೆಲ್ಸ್ ಗ್ರಾಹಕರಿಗೆ ನೀಡಿದೆ . ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.











