ಕೊಲಂಬೊ: ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಕುಸಿದ ಶ್ರೀಲಂಕಾ ಏಷ್ಯಾಕಪ್ ಫೈನಲ್ನಲ್ಲಿ 15.2 ಓವರ್ಗಳಲ್ಲಿ 50 ರನ್ನಗೆ ಆಲ್ ಔಟ್ ಆಗಿದೆ. ಈ ಮೂಲಕ ಏಷ್ಯಾ ಕಪ್ ಗೆಲ್ಲಲು ಭಾರತಕ್ಕೆ 51 ರನ್ ಗುರಿ ನೀಡಿದೆ. ಮಹಮ್ಮದ್ ಸಿರಾಜ್ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ 2.3
ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದರೆ ಜಸ್ಪೀತ್ ಬುಮ್ರಾ 5 ಓವರ್ನಲ್ಲ 23 ರನ್ ನೀಡಿ 1 ವಿಕೆಟ್ ಪಡೆದರು. ಶ್ರೀಲಂಕಾ ಪರ ಕುಶಲ್ ಮೆಂಡಿಸ್ 17, ಹೇಮಂತ್ 13 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲಿ ಮೊದಲ ವಿಕೆಟ್ ಪಡೆದರು.
ಸಿರಾಜ್ ತನ್ನ ಎರಡನೇ ಓವರ್ನಲ್ಲಿ 4 ವಿಕೆಟ್ ಉರುಳಿಸಿ ಶ್ರೀಲಂಕಾ ಪತನಕ್ಕೆ ಕಾರಣರಾದರು. ನಿಸ್ಸಾಂಕ, ಸಮರವಿಕ್ರಮ, ಅಸಲಂಕಾ ಮತ್ತು ಧನಂಜಯ ಅವರಿಗೆ ಸಿರಾಜ್ ಪೆವಿಲಿಯನ್ ದಾರಿ ತೋರಿಸಿದರು. ಸಿರಾಜ್ 6 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ50 ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.