ಸುಳ್ಯ:ಸುಳ್ಯ ವಲಯ ಎಸ್ಕೆಎಸ್ಎಸ್ಎಫ್ ವಿಖಾಯ ತಂಡದಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂದರ್ಭದಲ್ಲಿ ಸುಳ್ಯ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ.ಕೆ.ವಿ. ಆರೋಗ್ಯ ರಕ್ಷಾ ಸಮಿತಿಯ

ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕೂಟೀಲು ಇದ್ದರು. ಸ್ವಚ್ಛತೆಯಲ್ಲಿ ಸುಳ್ಯ ವಿಜಿಲೆಂಟ್ ವಿಖಾಯ ಹಾಗೂ ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ,ವಿಖಾಯ ಅಧ್ಯಕ್ಷ ಮಹಮ್ಮದ್ ಅಡ್ಕ, ಶರೀಫ್ ಸಿ. ಎ,ಉಮ್ಮರ್ ಬಿ.ಎಂ,
ಜಲಾಲ್ ಅಡ್ಕಾರ್,ಅಬ್ದುಲ್ ರವೂಫ್ ಎಸ್ ಎಂ,ನಾಸಿರ್ ಮಾಬ್ಲಿ,ನಿಸಾರ್ ಪಾಲಡ್ಕ,ತಾಜುದ್ದೀನ್ ಅರಂತೋಡು, ಅನ್ಸ್ಯಾಫ್ ನಾವೂರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.ಆಸ್ಪತ್ರೆ ಸುತ್ತಲೂ ಸ್ವಚ್ಛತೆಯನ್ನು ಮಾಡಿದ ತಂಡಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಣಾಕರ.ಕೆ.ವಿ. ಅಭಿನಂದನೆ ಸಲ್ಲಿಸಿ ಸ್ಮರಣಿಕೆ ನೀಡಿದರು.