ಸಂಪಾಜೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಲ್ಲಿ ಸಂಪಾಜೆ ಗ್ರಾಮದ ಚಟ್ಟೆಕಲ್ಲು ಮುಂಡಡ್ಕ ದಂಡೆಕಜೆ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಶಿಲಾನ್ಯಾಸ ನೆರವೇರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನದಲ್ಲಿ
ಒಂದು ಕೋಟಿ ರೂಪಾಯಿ ಅನುದಾನ ನೀಡಿದ್ದು, ಈ ಭಾಗದ 3 ರಸ್ತೆಗಳಿಗೆ 35 ಲಕ್ಷ ಅನುದಾನ ಮೀಸಲಿರಿಸಿದ್ದೇವೆ, ಅಲ್ಲದೆ ಈ ಭಾಗದ ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿಗೆ 20 ಲಕ್ಷ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಯಡಿ ಮಂಜೂರಾಗಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್. ಕೆ.ಹನೀಫ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಜಿ.ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಲಿಸ್ಸಿ ಮೊನಾಲಿಸಾ, ರಜನಿ ಶರತ್, ವಿಮಲಾ ಪ್ರಸಾದ್,ಅನುಪಮ, ವಿಜಯ ಕುಮಾರ್,ಸೊಸೈಟಿ ಉಪಾಧ್ಯಕ್ಷರಾದ ಬಿ. ಎಸ್. ಯಮುನಾ, ನಿರ್ದೇಶಕರಾದ ಗಣಪತಿ ಭಟ್, ಮಾಜಿ ಪಂಚಾಯತ್ ಸದಸ್ಯರಾದ ಜಿ ರಾಮಚಂದ್ರ. ನಾಗೇಶ ಪಿ. ಆರ್. ತಾಜ್ ಮಹಮ್ಮದ್ ಸಂಪಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಜಿಲ್ಲಾ ಪಂಚಾಯತ್ ಇಂಜಿನಿಯರ್ ಫಯಾಜ್ ಹಾಗೂ ಸಹಾಯಕ ಇಂಜಿನಿಯರ್ ಮಣಿಕಂಠ, ಗುತ್ತಿಗೆದಾರರಾದ ವಿ ವಿ. ಬಾಲನ್, ಪ್ರಮುಖರಾದ ಎಸ್ ಪಿ. ಲೋಕನಾಥ್, ಶ್ರೀಧರ್, ರಾಜಗೋಪಾಲ್, ವಾಸುದೇವ ಕಟ್ಟಮನೆ,ಸುಬ್ರಮಣ್ಯ, ಕೆ. ಎಂ. ಅಶ್ರಫ್, ಅಬ್ದುಲ್ ರಹಿಮಾನ್. ಸಂತೋಷ್ ಕ್ರಾಸ್ತಾ, ಮಹಮ್ಮದ್ ಕುಂಞಿ, ಸಲೀಂ ಪೆರುಂಗೊಡಿ, ಲೋಕೇಶ್ ಬಾಚಿಗದ್ದೆ, ಕಾಂತಿ ಬಿ ಎಸ್, ಹರ್ಷಿತಾ ಕುಮಾರಿ, ಸಂಜೀವ ಪೂಜಾರಿ ಭೋಜ. ಪುಟ್ಟಣ್ಣ, ಸುರೇಶ್ ಕದಿಕಡ್ಕ, ಮಾಧವ ಗೌಡ, ಪ್ರಶಾಂತ್ ವಿ .ವಿ. ರಜಾಕ್ ಕೆ. ಎ . ಹಸೈನಾರ್ ಚಟ್ಟೆಕಲ್ಲು, ಇರ್ಷಾದ್. ಕಲ್ಲುಗುಂಡಿ, ಹನೀಫ್ ಚಟ್ಟೆಕಲ್ಲು, ರತ್ನಾವತಿ, ವಾಣಿ, ರಫೀಕ್ ಕರಾವಳಿ. ಅಬೂಬಕ್ಕರ್, ಅಶ್ರಫ್ ಹಾಜಿ, ಅಬ್ಬಾಸ್ ಕೆ. ಕೆ. ಭಾಗವಹಿಸಿದ್ದರು
ಜಿ.ಕೆ.ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಕೆ ಹನೀಫ್ ಸಂಪಾಜೆ ವಂದಿಸಿದರು.















