ನವದೆಹಲಿ: ಈ ಬಾರಿ ನೈರುತ್ಯ ಮುಂಗಾರು ಕ್ಷೀಣಗೊಂಡಿದ್ದು ದೇಶದಾದ್ ಮಳೆ ಕೊರತೆ ಎದುರಾಗಿದೆ. ಜೂನ್ 4ರಿಂದ ಜೂನ್ 18ರವರೆಗೆ ದೇಶದಾದ್ಯಂತ ವಾಡಿಕೆಗಿಂತಲೂ ಶೇ 41ರಷ್ಟು ಕಡಿಮೆ ಮಳೆ ಆಗಿದೆ ಎಂದು
ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈ ಅವಧಿಯಲ್ಲಿ 72.2 ಮಿ.ಮೀಯಷ್ಟು ಮಳೆ ಸುರಿಯಬೇಕಿತ್ತು. ಆದರೆ, ಕೇವಲ 42.6 ಮಿ.ಮೀಯಷ್ಟು ಮಾತ್ರ ಮಳೆ ಲಭಿಸಿದೆ. ದೇಶದ ಪೂರ್ವ, ಮಧ್ಯ ಮತ್ತು ವಾಯವ್ಯ ಭಾಗಗಳಲ್ಲಿ ಮಳೆ ಕೊರತೆ ಎದುರಾಗಿದೆ. ನೈರುತ್ಯ ಮುಂಗಾರು ಮಾರುತ ಅರೇಬಿಯನ್ ಸಮುದ್ರದಲ್ಲಿ ದುರ್ಬಲಗೊಂಡಿದೆ. ಇದರಿಂದಾಗಿ ಭಾರತದ ಹಲವು ಭಾಗಗಳಲ್ಲಿ ಮುಂಗಾರು ಸ್ಥಗಿತಗೊಂಡಿದೆ







