ಸುಳ್ಯ:ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲದಲಿ ನಡೆದ ಪದವಿ ಪೂರ್ವ ವಿಭಾಗದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ
ಹುಡುಗರ ವಿಭಾಗದಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಹಾಗೂ ಹುಡುಗಿಯರ ವಿಭಾಗದಲ್ಲಿ ಶ್ರೀ ಶಾರದಾ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.
ಹುಡುಗರ ವಿಭಾಗದಲ್ಲಿ ಕೆ.ಎಸ್ ಗೌಡ ನಿಂತಿಕಲ್ಲು ದ್ವಿತೀಯ ಹಾಗೂ
ಹುಡುಗಿಯರ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸರ್ವಾಂಗೀಣ ಆಟಗಾರರಾಗಿ ಎನ್ನೆ oಪಿಯುಸಿ ಸುಳ್ಯದ ತುಕಾರಾಮ್ ಮಣಿಗೆನಪ್ಪ ಮೋಟೆ, ಮತ್ತು ಶಾರದಾ ಪಪೂ ಕಾಲೇಜಿನ ಕೃತಿ, ಉತ್ತಮ ದಾಳಿಗಾರರಾಗಿ ಸುಳ್ಯ ಎನ್ನೆoಪಿಯುಸಿಯ ಮಾದೇಶ್ ಬಿ.ಪಿ. ಹಾಗೂ ಶಾರದಾ ಪಪೂ ಕಾಲೇಜಿನ ರಶ್ಮಿ, ಉತ್ತಮ ಹಿಡಿತಗಾರರಾಗಿ ಕೆ ಎಸ್ ಗೌಡ ನಿಂತಿಕಲ್ಲು ಕಾಲೇಜಿನ ವಿಖ್ಯಾತ್, ಗುತ್ತಿಗಾರು ಸಪಪೂ ಕಾಲೇಜಿನ ಯಶಿಕ ವೈಯಕ್ತಿಕ ಬಹುಮಾನ ಪಡೆದುಕೊಂಡರು.

ಎನ್ಎಂಪಿಯುಸಿ ಸುಳ್ಯ
ಉದ್ಘಾಟನೆ:
ಎ ಓ ಎಲ್ ಇ ಸುಳ್ಯ ಇದರ ಕಾರ್ಯದರ್ಶಿ ಕೆ.ವಿ. ಪಂದ್ಯಾಟ ಉದ್ಘಾಟಿಸಿದರು. ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಉಪಸ್ಥಿತರಿದ್ದರು. ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರು, ಆರಂತೋಡು ಎನ್ನೆ oಪಿಯುಸಿಯ ದೈ ಶಿ ನಿರ್ದೇಶಕರಾದ ಶಾಂತಿ ಎ.ಕೆ, ಎನ್ನೆoಸಿ ಸುಳ್ಯ ಇಲ್ಲಿನ ಪ್ರಾಚಾರ್ಯರಾದ ಪ್ರೊ.ಎಂ ಎಂ ರುದ್ರ ಕುಮಾರ್, ಎನ್ನೆoಸಿಯ ದೈ ಶಿ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ ಡಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ದೈ ಶಿ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ವಿವಿಧ ಕಾಲೇಜುಗಳ ಉಪನ್ಯಾಸಕರು, ತಂಡದ ಮೇಲ್ವಿಚಾರಕರು,ದೈ ಶಿ ನಿರ್ದೇಶಕರು,ಸಂಸ್ಥೆಯ ಬೋಧಕ ಬೋಧಕೇತರ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಬಳಗದವರು ಪ್ರಾರ್ಥಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಸ್ವಾಗತಿಸಿ,ಉಪನ್ಯಾಸಕರಾದ ವಿನಯ್ ನಿಡ್ಯಮಲೆ ವಂದಿಸಿದರು.ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.

ಶಾರದಾ ಪಿಯು ಕಾಲೇಜು
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಎನ್ನೆoಸಿಯ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ, ಸುಳ್ಯ ಎನ್ನೆoಪಿಯುಸಿ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ, ಎನ್ನೆoಸಿಯ ದೈ ಶಿ ನಿರ್ದೇಶಕರಾದ ಲೆ. ಸೀತಾರಾಮ ಎಂ ಡಿ ,ವೈಟ್ ಲಿಫ್ಟಿಂಗ್ ಕೋಚ್ ರಮೇಶ್ ವಿ,ಕ್ಷೇಮಾಧಿಕಾರಿ ರೇಷ್ಮಾ, ಸಂಸ್ಥೆಯ ದೈ ಶಿ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ ಉಪಸ್ಥಿತರಿದ್ದರು.ಎನ್ನೆoಸಿ ಪ್ರಾಚಾರ್ಯರಾದ ಪ್ರೊ ಎಂ ಎಂ ರುದ್ರ ಕುಮಾರ್ ಅವರು ಬಹುಮಾನ ವಿತರಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ, ವಂದಿಸಿದರು.