ಸುಳ್ಯ:ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಸಚಿವರನ್ನು ಭೇಟಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ನೀಡಿದ್ದಾರೆ.ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು
ನಿವಾಸದ ಕಛೇರಿಯಲ್ಲಿ ಭೇಟಿಯಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಬರುವ ರಸ್ತೆಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮತ್ತು ಬಾಕಿ ಇರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.

ಸಣ್ಣ ನೀರಾವರಿ ಸಚಿವರಾದ ಬೊಸ್ ರಾಜು ಅವರನ್ನು ವಿಕಾಸ ಸೌಧದ ಕಛೇರಿಯಲ್ಲಿ ಭೇಟಿಯಾಗಿ ಮಳೆಯಿಂದ ಕ್ಷೇತ್ರದ ವಿವಿಧೆಡೆ ಹಾನಿಯಾಗಿರುವ ತಡೆ ಗೋಡೆಗಳಿಗೆ ಮತ್ತು ಹೊಸ ವೆಂಟೆಡ್ ಡ್ಯಾಮ್ಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ವಿನಂತಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಸಂತ ನಡುಬೈಲು ಉಪಸ್ಥಿತರಿದ್ದರು.