ಮಂಗಳೂರು: ನವದುರ್ಗೆಯರ ವೈಭವದ ಮೆರವಣಿಗೆಯೊಂದಿಗೆ
ಮಂಗಳೂರು ದಸರಾ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಗೊಂಡ ಶ್ರೀಶಾರದಾ ದೇವಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆಯನ್ನು ಲಕ್ಷಾಂತರ ಮಂದಿ
![](https://thesulliamirror.com/wp-content/uploads/2023/10/IMG_20231025_093056.jpg)
ಚಿತ್ರ:ದಯಾ ಕುಕ್ಕಾಜೆ.
ಕಣ್ತುಂಬಿಕೊಂಡರು.ಶ್ರೀಶಾರದೆ, ದೇವಿಯ ವಿವಿಧ ಅವತಾರಗಳನ್ನು ಬಿಂಬಿಸುವ ಮೂರ್ತಿಗಳು, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾಗಣಪತಿ ಮೂರ್ತಿ ವಿದ್ಯುದ್ದೀಪಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಒಂದರ ಹಿಂದೆ ಒಂದರಂತೆ ಸಾಗಿ ಬರುತ್ತಿದ್ದಂತೆಯೇ ಬೆಳಕಿನ ಅದ್ಭುತ ಲೋಕವೇ ಸೃಷ್ಟಿಯಾಗಿತ್ತು.ಈ ಮನಮೋಹಕ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.
![](https://thesulliamirror.com/wp-content/uploads/2023/10/IMG_20231025_093130.jpg)
ಚಿತ್ರ: ಅಪುಲ್ ಇರಾ.
ಶೋಭಾಯಾತ್ರೆಯಲ್ಲಿ ರಂಗು ರಂಗಿನ ಸ್ತಬ್ಧಚಿತ್ರಗಳು ಹಾಗೂ ಹುಲಿವೇಷ ತಂಡಗಳು ಪ್ರಮುಖ ಆಕರ್ಷಣೆಯಾಗಿದ್ದವು. ಚೆಂಡೆ ವಾದನ, ಡೊಳ್ಳು ಕುಣಿತ, ವೀರಗಾಸೆ, ಬ್ಯಾಂಡ್ ವಾದನ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.ಲಕ್ಷಾಂತರ ಮಂದಿ ಉತ್ಸವದಲ್ಲಿ ಭಾಗಿಯಾದರು. ವಿದ್ಯುದ್ದೀಪಗಳಿಂದ ನಗರ ಝಗಮಗಿಸಿತ್ತು. ವೈಭವದ ದಸರಾ ಮೆರವಣಿಗೆಯ ಆಸ್ವಾದಿಸಲು ಜನರು ಕಿಕ್ಕಿರಿದು ಸೇರಿದ್ದರು.