ಸುಳ್ಯ:ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರದಿಂದ ಮತ್ತು ಎಲ್ಲರೂ ಕೈಜೋಡಿಸಿದ ಕಾರಣ ಇನ್ನಷ್ಟು ಶಕ್ತಿ ಮತ್ತು ವಿಜ್ರಂಭಣೆ ಬಂದಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ಗೌಡ ಹಾಗೂ ಮನೆಯವರಿಂದ ಸಮರ್ಪಣೆ ಮಾಡುವ ನೂತನ ಬ್ರಹ್ಮರಥದ ಸಮರ್ಪಣೆ, ಪುರಪ್ರವೇಶ ಮತ್ತು ಭೂಸ್ಪರ್ಶ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ
ವ್ಯವಸ್ಥೆ ಮಾಡಲಾಗಿದೆ. ಯಶಸ್ವಿಗೆ ಎಲ್ಲರ ಸಹಕಾರ ಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅವರು ಬಿಡುಗಡೆ ಮಾಡಿದರು.
ಬ್ರಹ್ಮರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ ಬ್ರಹ್ಮರಥ ಸಮರ್ಪಣೆಯನ್ನು ಯಶಸ್ವಿಯಾಗಿ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಜೀವನಮಾನದಲ್ಲಿ ಸಿಗುವ ಅಪೂರ್ವ ಅವಕಾಶ ಇದು ಎಂದು ಅವರು ಹೇಳಿದರು.
ಎಒಎಲ್ಇಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಾತನಾಡಿ ರಥ ಸಮರ್ಪಣೆಗೆ ಎಲ್ಲಾ ಸಿದ್ದತೆ ನಡೆಸಲಾಗಿದೆ ಎಂದು ತಿಳಿಸಿದರು. ರಥ ಆಗಮಿಸುವ ಮುನ್ನ ರಥಬೀದಿಯ ಅಭಿವೃದ್ಧಿ ಪೂರ್ತಿಗೊಳಿಸಲು ನಗರ ಪಂಚಾಯತ್ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಬ್ರಹ್ಮರಥ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ. ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಡಿ.23ರಂದು ಸಂಜೆ ಗಂಟೆ 7ಕ್ಕೆ ಬ್ರಹ್ಮರಥ ಶಿಲ್ಪಿ ರಾಜಗೋಪಾಲ ಆಚಾರ್ಯರ ಶಿಲ್ಪಕಲಾ ಶಾಲೆ ಕೋಟೇಶ್ವರದಲ್ಲಿ ರಥಪೂಜೆ. ಡಿ.24 ಪೂರ್ವಾಹ್ನ ಗಂಟೆ 8ಕ್ಕೆ
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರದಲ್ಲಿ ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿ ರಥ ಯಾತ್ರೆಯ ಆರಂಭ, ತದನಂತರ ಮಂಗಳೂರು, ಬಿ.ಸಿ. ರೋಡ್. ಮಾಣೆ ಹಾಗೂ ಪುತ್ತೂರಿನಲ್ಲಿ ವಿಶೇಷ ಸ್ವಾಗತ ಕೋರಿ ಪುತ್ತೂರಿನ ತೆಂಕಿಲದಲ್ಲಿ ತಂಗುವುದು. ಡಿ.25ರಂದು ಅಪರಾಹ್ನ 2 ಗಂಟೆಗೆ ಬ್ರಹ್ಮರಥವು ಕನಕಮಜಲಿನ ಆತ್ಮರಾಮ ಭಜನಾ ಮಂದಿರದಿಂದ ವಾಹನ ಮೆರವಣೆಗೆಯೊಂದಿಗೆ ಶಾಸ್ತ್ರಿ ವೃತ್ತಕ್ಕೆ ಆಗಮಿಸಲಿದೆ. ಅಪರಾಹ್ನ 3 ಗಂಟೆಗೆ ಬ್ರಹ್ಮರಥವನ್ನು ಬ್ಯಾಂಡ್, ವಾಲಗ, ವೇದ ಘೋಷ ಹಾಗೂ ಕುಣಿತ ಭಜನೆಯೊಂದಿಗೆ ವೈಭವದಿಂದ ದೇವಳದ ರಾಜಗೋಪುರದ ಬಳಿ ಸ್ವಾಗತಿಸಲಾಗುವುದು. ಡಿ.31ರಂದು

ಪೂ. ಗಂಟೆ 10ಕ್ಕೆ ಡಾ. ಕೆ. ವಿ. ಚಿದಾನಂದ ಹಾಗೂ ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ
ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಜ.1ರಂದು ರಾತ್ರಿ ಗಂಟೆ 7.00ರಿಂದ ಬ್ರಹ್ಮ ರಥದ ಆಲಯಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಡಿ.2 ರಂದು ಸಂಜೆ 7ರಿಂದ ಗಣಹೋಮ, ಕಲಶಾಭಿಷೇಕಗಳು ಹಾಗೂ ಪೂರ್ವಾಹ್ನ 9.15ರಿಂದ 9.35ರ ನಡುವಿನ ಮಕರ ಲಗ್ನದ ಸುಮೂರ್ಹತದಲ್ಲಿ ಬ್ರಹ್ಮರಥದ ಭೂ ಸ್ಪರ್ಶ, ಬ್ರಹ್ಮರಥ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಬ್ರಹ್ಮರಥ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್, ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಎನ್.ಎ.ರಾಮಚಂದ್ರ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್, ಚಂದ್ರಶೇಖರ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖರಾದ ಡಾ.ಎನ್.ಎ.ಜ್ಞಾನೇಶ್, ಎ.ವಿ.ತೀರ್ಥರಾಮ
ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್,ಪ್ರೊ. ದಾಮೋದರ ಗೌಡ, ಕೆ.ವಿ.ಹೇಮನಾಥ,ಜಗದೀಶ್ ಅಡ್ತಲೆ, ಶ್ರೀಕೃಷ್ಣ ಎಂ.ಎನ್, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಶೈಲೇಶ್ ಅಂಬೆಕಲ್ಲು, ಪಿ.ಕೆ.ಉಮೇಶ್, ಸಂತೋಷ್ ಕುತ್ತಮೊಟ್ಟೆ, ಡಿ.ಎಸ್.ಗಿರೀಶ್, ಪಿ.ಬಿ.ಸುಧಾಕರ ರೈ, ದೊಡ್ಡಣ್ಣ ಬರೆಮೇಲು, ಗಣೇಶ್ ಭಟ್, ಕೆ.ಆರ್.ಗೋಪಾಲಕೃಷ್ಣ, ಸೋಮಶೇಖರ ಪೈಕ, ಕೃಷ್ಣ ಬೆಟ್ಟ, ರಾಜೇಶ್ ಆಳ್ವ, ಜಿತೇಂದ್ರ ಎನ್.ಎ, ಕೇಶವ ಅಡ್ತಲೆ, ಸನತ್ ಪೆರಿಯಡ್ಕ, ಹರಿರಾಯ ಕಾಮತ್, ವಿನಯಕುಮಾರ್ ಕಂದಡ್ಕ, ಗೋಪಾಲಕೃಷ್ಣ ಕೆ.ಎಸ್, ಜಯಪ್ರಕಾಶ್ ಕುಂಚಡ್ಕ, ಪುರುಷೋತ್ತಮ ಕೆ.ಜಿ, ಗಿರೀಶ್, ಕಸ್ತೂರಿ ಶಂಕರ್, ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್, ದಯಾನಂದ ಕುರುಂಜಿ, ಬೇಬಿ ವಿದ್ಯಾ, ದಾಮೋದರ ಮಂಚಿ, ಜಿನ್ನಪ್ಪ ಪೂಜಾರಿ, ಡಾ.ಸಾಯಿಗೀತಾ ಜ್ಞಾನೇಶ್, ಶ್ರೀದೇವಿ ನಾಗರಾಜ ಭಟ್, ಹರೀಶ್ ಉಬರಡ್ಕ, ಶಿವರಾಮ ಕೇರ್ಪಳ, ಕಿರಣ್ ಕುರುಂಜಿ, ಸಂದೇಶ್ ಕುರುಂಜಿ, ವರ್ಷಿತ್ ಚೊಕ್ಕಾಡಿ, ಲತೀಶ್ ಗುಂಡ್ಯ, ಅವಿನಾಶ್ ಕುರುಂಜಿ, ರಜತ್ ಅಡ್ಕಾರ್, ಶಿಲ್ಪಾ ಸುದೇವ್, ಮಹೇಶ್ ಮೇರ್ಕಜೆ, ಸರೋಜಿನಿ ಪೆಲ್ತಡ್ಕ, ಸುಧಾಕರ ಕುರುಂಜಿಗುಡ್ಡೆ, ಪ್ರೀತಮ್ ಡಿ.ಕೆ, ಶ್ರೀದೇವಿ ನಾಗರಾಜ ಭಟ್, ಗಿರೀಶ್ ಕುಂಠಿನಿ,ಸತೀಶ್ ಕೆ.ಜಿ, ಭವಾನಿಶಂಕರ ಕಲ್ಮಡ್ಕ, ದಯಾನಂದ ಕೇರ್ಪಳ, ನವೀನ್ ಎಲಿಮಲೆ, ಪ್ರಕಾಶ್ ಯಾದವ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮರಥ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ.ಸ್ವಾಗತಿಸಿ, ಅಧ್ಯಕ್ಷ ನಾರಾಯಣ ಕೇಕಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಪಾಶಂಕರ ತುದಿಯಡ್ಕ ವಂದಿಸಿದರು. ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.