ಐವರ್ನಾಡು:ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ನಡೆದ ಆಹ್ವಾನಿತ ತಂಡಗಳ ಅಂತಾ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಬ್ಯಾಂಕ್ ಆಫ್ ಬರೋಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎಸ್ಡಿಎಂ ಉಜಿರೆ ರನ್ನರ್ಸ್ ಅಪ್ ಆಗಿದೆ.ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ
ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡ ತಂಡ ಎಸ್ಡಿಎಂ ತಂಡವನ್ನು 33-28 ಅಂಕಗಳ ಅಂತರದಲ್ಲಿ ಸೋಲಿಸಿ ಕಫ್ ಎತ್ತಿತು. ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ,
ಚತುರ್ಥ ಸ್ಥಾನವನ್ನು ಎನ್.ಎಂ.ಸಿ.ಸುಳ್ಯ ಪಡೆದುಕೊಂಡಿತು. ಸೆಮಿಫೈನಲ್ ನಲ್ಲಿ ಎನ್ಎಂಸಿ ತಂಡವನ್ನು ಮಣಿಸಿ ಎಸ್ಡಿಎಂ ಉಜಿರೆ(30-19) ಮತ್ತು

ಆಳ್ವಾಸ್ ಮೂಡಬಿದ್ರೆ ತಂಡವನ್ನು ಮಣಿಸಿ ಬ್ಯಾಂಕ್ ಆಫ್ ಬರೋಡ(39-22) ಫೈನಲ್ ಪ್ರವೇಶಿಸಿತ್ತು. ಉತ್ತಮ ದಾಳಿಗಾರನಾಗಿ ಎನ್.ಎಂ.ಸಿ.ತಂಡದ ಮಹೇಶ್, ಉತ್ತಮ ಹಿಡಿತಗಾರ ಆಗಿ ಎಸ್.ಡಿ.ಎಂ. ನ ಕಾರ್ತಿಕ್, ಉತ್ತಮ ಸರ್ವಾಂಗೀಣ ಆಟಗಾರನಾಗಿ ಬ್ಯಾಂಕ್ ಆಫ್ ಬರೊಡದ ಸಾಯಿಪ್ರಸಾದ್ ಅಯ್ಕೆಯಾದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.

ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಮಾಧವ, ಜ್ಯೋತ್ದ್ನಾ ಪಾಲೆಪ್ಪಾಡಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಅಶ್ವಿನಿ ಕೊಪ್ಪತ್ತಡ್ಕ, ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಅರ್ಥ್ ಮೂವರ್ಸ್ ಮಾಲಕ ಪದ್ಮನಾಭ ಬೀಡು,ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಕಣಿಪಿಲ,ಪ್ರೌಢ ಶಾಲಾ ಹಿರಿಯ ಅಧ್ಯಾಪಕ ಸೂಫಿ ಪೆರಾಜೆ, ಕೃಷಿಕರಾದ

ದಾಮೋದರ ಜಬಳೆ, ಹಿರಿಯರಾದ ಮಾಧವ ಭಟ್ ಶೃಂಗೇರಿ,ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ದೊಡ್ಡಣ್ಣ ಬರೆಮೇಲು,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೆ.ಟಿ.ವೆಂಕಪ್ಪ ಗೌಡ ಜಬಳೆ,ಗೆಳೆಯರ ಬಳಗದ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ವಂದಿಸಿದರು.
ತೀರ್ಪುಗಾರರಾದ ಶಿವರಾಮ ಏನೆಕಲ್ ವಿಜೇತರ ಪಟ್ಟಿ ವಾಚಿಸಿದರು.