ಚಿತ್ರ:ದಯಾ ಕುಕ್ಕಾಜೆ.
ಮಂಗಳೂರು:ಭಾರತ ತಂಡದ ಕ್ರಿಕೆಟ್ ಆಟಗಾರ ಶಿವಂ ದುಬೆ ಅವರು ಮಂಗಳೂರಿನಲ್ಲಿ ಹುಲಿ ವೇಷ ಕುಣಿತವನ್ನು ವೀಕ್ಷಿಸಿದರು. ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ‘ನಮ್ಮ ಟಿವಿ’ ಸಹಯೋಗದಲ್ಲಿಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಪಿಲಿ ನಲಿಕೆ ಸ್ಪರ್ಧೆಯ ಒಂಬತ್ತನೇ ಆವೃತ್ತಿಯಲ್ಲಿ ಅತಿಥಿಯಾಗಿ ಭಾಗವಹಿಸಿದ ಅವರು
ಕೆಲ ಹೊತ್ತು ಹುಲಿ ಕುಣಿತವನ್ನು ನೋಡಿ ನಿಬ್ಬೆರಗಾದರು.
ಸಿನಿಮಾ ನಟ ರಾಜ್ ಬಿ.ಶೆಟ್ಟಿ ಭಾಗವಹಿಸಿದ್ದರು.
ಪಿಲಿನಲಿಕೆ ಒಂಬತ್ತನೇ ಋತುವಿನ ಸ್ಪರ್ಧೆಯನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಸಿನಿಮಾ ನಟರಾದ ಡಾಲಿ ಧನಂಜಯ, ಆಹನ್ ಶೆಟ್ಟಿ, ಮೇರ್ಸ್ಕ್ ಕಂಪನಿಯ ಸಿಇಓ ಗೌತಮ್ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಅದಾನಿ ಸಂಸ್ಥೆಯ ಅಧಿಕಾರಿ ಕಿಶೋರ್ ಆಳ್ವ, ಎಸಿಪಿ ಗೀತಾ ಕುಲಕರ್ಣಿ, ಧನ್ಯಾ ನಾಯಕ್, ಕಾಂಗ್ರೆಸ್ ಮುಖಂಡರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಸಿನಿಮಾ ನಟ ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್ ಮೊದಲಾದವರು ಭಾಗವಹಿಸಿದರು. ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಮಿಥುನ್ ರೈ ಹಾಗೂ ನಮ್ಮ ಟಿವಿ ಸಿಇಓ ಶಿವಚರಣ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವೆಂಕಟೇಶ್ ಭಟ್ ಪಾವಂಜೆ ಹಾಗೂ ಕೆ.ಕೆ. ಪೇಜಾವರ ಅವರು ತೀರ್ಪುಗಾರರಾಗಿದ್ದರು.
ಪಿಲಿ ನಲಿಕೆಯ 9ನೇ ಆವೃತ್ತಿಯಲ್ಲಿ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿತ್ತು.