ಸುಳ್ಯ:ಭಾರತೀಯ ಸೈನಿಕರಿಗೆ ಎಲ್ಲಾ ರೀತಿಯ ಗೆಲುವು ಸಿಗುವಂತಾಗಲಿ ಎಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಸಲಾಯಿತು.
ಭಾರತೀಯ ಸೈನಿಕರ ಕ್ಷೇಮಾಭಿವೃದ್ಧಿ, ಸೇನೆಗೆ ಇನ್ನಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ, ಉಗ್ರರ ಧಮನವಾಗಲಿ ಎಂದು

ವಿಶೇಷ ಪೂಜೆ ನಡೆಯಿತು.ಸೈನಿಕರಿಗೆ ಎಲ್ಲಾ ರೀತಿಯ ಜಯ ಸಿಗಲಿ ಎಂದು ಪ್ರಾರ್ಥಿಸಲಾಯಿತು.ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಪ್ರಾರ್ಥನೆ ನೆರವೇರಿಸಿದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ನಿವೃತ್ತ ಸುಬೇಧಾರ್ ಮೇಜರ್ ವಾಸುದೇವ ಗೌಡ ಬಾನಡ್ಕ, ನಿವೃತ್ತ ಆರ್ಮಿ ರ್ಯಾಂಕ್ ಎನ್.ಕೆ.ಪದ್ಮನಾಭ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಗೌರವ ಸಲಹೆಗಾರರಾದ ಕಂಬಳ ಆನಂದ ಗೌಡ, ಪರಮೇಶ್ವರ ಬಿಳಿಮಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾರ್ ರೈ ಬಳ್ಪ, ಪವಿತ್ರಾ ಮಲ್ಲೇಟ್ಟಿ, ಧರ್ಮಪಾಲ ಗೌಡ ಕಾಚಿಲ ಕಲ್ಮಡ್ಕ, ಗಂಗಾಧರ ಶಾಸ್ತ್ರಿ ಪುತ್ಯ, ಸೀಮೆಯ ಭಕ್ತರು ಉಪಸ್ಥಿತರಿದ್ದರು.