ಸುಳ್ಯ: ತಾಲೂಕು ಆಡಳಿತ ಸುಳ್ಯ, ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಅಂಚೆ ಇಲಾಖೆ ಸುಳ್ಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು, ಯುವಜನ ಸಂಯುಕ್ತ ಮಂಡಳಿ ಸುಳ್ಯ, ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸುಳ್ಯ ಇದರ ಸಹಯೋಗದೊಂದಿಗೆ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಸುಳ್ಯದಲ್ಲಿ
ನಡೆಯಿತು. ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆಯ ಮೆರವಣಿಗೆ ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ತಾಲೂಕು ಪಂಚಾಯತ್ ತನಕ ನಡೆಯಿತು. ಮೆರವಣಿಗೆಯಲ್ಲಿ ಅಗಮಿಸಿದವರು ತಾಲೂಕು ಪಂಚಾಯತ್ ಬಳಿಯಲ್ಲಿ ಸೇರಿದರು. ತಾಲೂಕಿನ 25 ಗ್ರಾಮ ಪಂಚಾಯತ್ಗಳಿಂದ ಸಂಗ್ರಹಿಸಲಾಗಿದ ಮಣ್ಣು ತುಂಬಿದ ಕಲಶವನ್ನು ಮೆರವಣಿಗೆಯಲ್ಲಿ ತರಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು ತಾಲೂಕಿನ 25 ಗ್ರಾಮ ಪಂಚಾಯತ್ಳಿಂದ ಸಂಗ್ರಹಿಸಲಾಗಿದ್ದ ಮಣ್ಣು ತುಂಬಿದ ಕಲಶವನ್ನು ಸುಳ್ಯದಿಂದ ದೆಹಲಿಗೆ ತೆರಳಲಿರುವ ಶ್ರವಣ್ ಅವರಿಗೆ ಹಸ್ತಾಂತರ ಮಾಡಿ, ಶುಭ ಹಾರೈಸಿದರು.ನಗರ ನಗರ ಪಂಚಾಯತ್ ಮುಖ್ಯಾಧಿಕಾರಿ ಹೆಚ್.ಎಂ..ಸುಧಾಕರ್ ಪ್ರತಿಜ್ಞೆ ಬೋಧಿಸಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಹಶೀಲ್ದಾರ್ ಮಂಜುನಾಥ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ, ಸಿಡಿಪಿಒ ಶೈಲಜಾ ದಿನೇಶ್, ವೀಣಾ ಎಂ.ಟಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ವೀರಪ್ಪ ಗೌಡ ಕಣ್ಕಲ್, ದೊಡ್ಡಣ್ಣ ಬರೆಮೇಲು, ಕಿರಣ್ ನೀರ್ಪಾಡಿ, ಆನಂದ ಖಂಡಿಗ, ಗಿರೀಶ್ ನಾರ್ಕೋಡು, ಪ್ರವೀಣ್ ಕುಮಾರ್, ಗುರುರಾಜ್ ಅಜ್ಜಾವರ, ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.