ನವದೆಹಲಿ: ನಿಗದಿಪಡಿಸಿದ ದಿನಕ್ಕಿಂತ ಒಂಬತ್ತು ದಿನಗಳ ಮುನ್ನವೇ ಮುಂಗಾರು ದೇಶಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2020ರ ಬಳಿಕ ಇದೇ ಮೊದಲ ಬಾರಿಗೆ ಮುಂಗಾರು ಬೇಗ ದೇಶದಾದ್ಯಂತ ಆವರಿಸಿದೆ.ದೆಹಲಿಗೆ ಜೂನ್ 27ರಂದು
ಮುಂಗಾರು ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಎರಡು ದಿನ ತಡವಾಗಿ ಜೂನ್ 29ರ ಭಾನುವಾರ ದೆಹಲಿಗೆ ಮುಂಗಾರು ಪ್ರವೇಶಿಸಿದೆ. ಸಾಮಾನ್ಯವಾಗಿ ಮುಂಗಾರು ಜೂನ್ 1ರಂದು ಕೇರಳ ಪ್ರವೇಶಿಸಿ, ಜುಲೈ 8ರ ವೇಳೆಗೆ ದೇಶದಾದ್ಯಂತ ವ್ಯಾಪಿಸುತ್ತದೆ. ಆದರೆ ಈ ಬಾರಿ ಮೇ 24ರಂದೇ ಕೇರಳವನ್ನು ಪ್ರವೇಶಿಸಿತ್ತು. ಹಾಗೂ 9 ದಿನ ಮೊದಲೇ ದೇಶದಾದ್ಯಂತ ವ್ಯಾಪಿಸಿದೆ.