ಕಡಬ: ಈ ಬಾರಿ ಜಾಗೃತ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಗೆಲ್ಲಿಸಲಿದ್ದಾರೆ, ದೇಶದಲ್ಲಿ ಕಾಂಗ್ರೇಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ರಾಜ್ಯ ಗೇರು ಅಭಿವೃಧಿ ನಿಗಮದ ಅಧ್ಯಕ್ಷೆ , ಸುಳ್ಯ ಕಾಂಗ್ರೆಸ್ ಉಸ್ತುವಾರಿ ಮಮತಾ ಗಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 33 ವರ್ಷದಲ್ಲಿ ಜಿಲ್ಲೆಯಲ್ಲಿ
ಬಿಜೆಪಿ ಸಂಸದರು ಗೆದ್ದು ಬಂದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಹಿಂದೆ ಜನಾರ್ಧನ ಪೂಜಾರಿ ಸೇರಿದಂತೆ ಕಾಂಗ್ರೆಸ್ ಸಂಸದರು ಇದ್ದಾಗ ಬಂದರು, ರೈಲ್ವೆಗಳ ಅಭಿವೃದ್ಧಿ, ವಿವಿಧ ಕಂಪೆನಿಗಳ ಅನುಷ್ಟಾನವಾಗಿದೆ, ಆದರೆ ಬಿಜೆಪಿ ಸಂಸದರ ಅವಧಿಯಲ್ಲಿ ಇದ್ಯಾವುದು ನಡೆದಿಲ್ಲ ಎಂದು ಆರೋಪಿಸಿದರು. ಈ ದೇಶದಲ್ಲಿ ಸಂವಿಧಾನ, ಜಾತ್ಯಾತೀತೆ ಉಳಿಯಬೇಕಾದರೆ, ದೇಶ ಉಳಿಯಬೇಕಾದರೆ ಸದೃಢ , ಸುಸ್ತಿರ ಸರಕಾರ ಬರಬೇಕಾದರೆ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ. ಬಿಜೆಪಿ ಸರಕಾರ ದೇಶದ ಬಡಜನರನ್ನು ಬಡವರನ್ನಾಗಿ ಮಾಡಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ, ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂಬಿತ್ಯಾದಿ ಭರವಸೆ ನೀಡಿ ಜನರನ್ನು ನಂಬಿಸಿ ಅಧಿಕಾರಕ್ಕೆ
![](https://thesulliamirror.com/wp-content/uploads/2024/04/IMG_20240418_174804.jpg)
ಬಂದ ಬಿಜೆಪಿ ದೇಶದಲ್ಲಿ ಬಡವರಿಗಾಗಿ, ನಿರುದ್ಯೋಗಿಗಳಗಾಗಿ ಏನನ್ನೂ ಮಾಡಿಲ್ಲ. ಗ್ಯಾಸ್ ಬೆಲೆ , ಆಹಾರ ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿ ಮತಗಿಟ್ಟಿಸಿದೆ. ಆಹಾರ ಧಾನ್ಯಗಳ ಬೆಲೆ, ಗ್ಯಾಸ್ ಬೆಲೆ ಗಗನಕ್ಕೆ ಏರಿಸಿದ್ದಾರೆ. ಜಿಎಸ್ಟಿ ಜಾರಿ ತಂದು ದೇಶದ ಜನರನ್ನು ಲೂಟಿ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ನೀಡುವ ಪಾಲು ಕೂಡ ನೀಡದೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ಈ ಎಲ್ಲಾ ಅಂಶಗಳನ್ನು ದೇಶದ ಜನ ಗಮನಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದೆ. ನರೇಗಾದಂತಹ ಯೋಜನೆಯನ್ನು ಜಾರಿಗೆ ತಂದ ಕಾಂಗ್ರೆಸ್ ಬಡವರ ಕೈಗೆ ಉದ್ಯೋಗ ನೀಡಿದೆ. ಇದೀಗ ಮತ್ತೆ ಗ್ಯಾರಂಟಿಯೊಂದಿಗೆ ಜನರ ಮುಂದೆ ಹೋಗುತ್ತಿದೇವೆ, ಇದರಿಂದ ಜನ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ, ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ವಿಚಾರದೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದ ಮಮತಾ ಗಟ್ಟಿ ದ.ಕ ಲೋಕಸಭಾ ಕ್ಷೇತ್ರದಲ್ಲಿನ ಪದ್ಮರಾಜ್ ಆರ್ ಪೂಜಾರಿ ಒಬ್ಬ ಸಮರ್ಥ ಅಭ್ಯರ್ಥಿಯಾಗಿದ್ದು ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಎಪ್ರಿಲ್ 19 ರಂದು ,ಅಭ್ಯರ್ಥಿ ಸಂಜೆ ಕಡಬದಲ್ಲಿ ಮತಯಾಚನೆ:
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಎಪ್ರಿಲ್ 19ರಂದು ಶುಕ್ರವಾರ ಸಂಜೆ ಮೂರು ಗಂಟೆಗೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ, ಸುಬ್ರಹ್ಮಣ್ಯ ಮಠಾದೀಶ ಶ್ರೀ ವಿದ್ಯಾಪ್ಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಬಳಿಕ ಸುಬ್ರಹ್ಮಣ್ಯ ಪೇಟೆಯಲ್ಲಿ ಮತಯಾಚನೆ ಮಡಲಿದ್ದಾರೆ. ಬಳಿಕ ಕಡಬ ಪೇಟೆಯಲ್ಲಿ ರೋಡ್ ಶೋ ಮಾಡಿ ಬಹಿರಂಗ ಸಭೆ ನಡೆಸಲಿದ್ದಾರೆ. . ಸಂಜೆ ಸವಣೂರು ಹಾಗೂ ಕಾಣಿಯೂರು ಪೇಟೆಯಲ್ಲಿ ಮತಯಾಚನೆ ಮಾಡಿ ಸವಣೂರಿನಲ್ಲಿ ಬಹಿರಂಗ ಸಭೆ ನಡೆಸಿಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿ ಬಾಲಕೃಷ್ಣ ಗೌಡ ಬಳ್ಳೇರಿ, ಸಂಯೋಜಕ ಪಿ.ಪಿ.ವರ್ಗೀಸ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸರ್ವೋತ್ತಮ ಗೌಡ, ಡಿ.ಸಿ.ಸಿ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಪ್ರಧಾನ ಕಾರ್ಯದರ್ಶಿ ಸೈಮನ್ ಸಿ.ಜೆ., ಕಡಬ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದಿನೇಶ್, ಮಾಜಿ ಅಧ್ಯಕ್ಷೆ ಉಷಾ ಅಂಚನ್, ಗೀತಾ ಉಪಸ್ಥಿತರಿದ್ಕರು.