ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 53ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23 ವರೆಗೆ ಕುಕ್ಕೆಸುಬ್ರಹ್ಮಣ್ಯದ ಉತ್ತರಾದಿ ಮಠದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.ಅಲ್ಲದೆ ಸಾಂಸ್ಕೃತಿಕ ಮನೋರಂಜನೆಗಳು ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ಜರುಗಲಿದೆ.ಈ ಬಾರಿ ಪ್ರಪ್ರಥಮವಾಗಿ ಸೆ.23ರಂದು ನಡೆಯುವ ಗಣಪತಿ
ಶೋಭಾಯಾತ್ರೆಗೆ ಸ್ತಬ್ಧಚಿತ್ರ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ತಬ್ದಚಿತ್ರವನ್ನು ಆಯೋಜಿಸಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿ ಸಹಕರಿಸಬೇಕು ಎಂದು ಸಮಿತಿಯ ಅಧ್ಯಕ್ಷ ದಿನೇಶ್ ಸಂಪ್ಯಾಡಿ ವಿನಂತಿಸಿದ್ದಾರೆ.
ಸೆ.19ರಂದು ಮಂಗಳವಾರ ಬೆಳಗ್ಗೆ 9.00ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ, ನಂತರ 108 ತೆಂಗಿನಕಾಯಿ ಗಣಪತಿ ಹೋಮ.ಅಲ್ಲದೆ ಪ್ರತಿದಿನ ಗಣಪತಿಹೋಮ ನೆರವೇರಲಿದೆ. ಬಳಿಕ ಮಹಾಪೂಜೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು, ಸಂಜೆ ಭಜನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.20 ಹಾಗೂ 21ರಂದು ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.22ರಂದು ಶುಕ್ರವಾರ ಸಂಜೆ 4ಗಂಟೆಯಿದ ಧಾರ್ಮಿಕ ಸಭೆ ನಡೆಯಲಿದೆ. ಸೆ.23ರಂದು
ಸಂಜೆ ಮೂರು ಗಂಟೆಗೆ ಸಪ್ತಾಶ್ವದ ಬೆಳ್ಳಿರಥದಲ್ಲಿ ಗಣಪತಿ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭ ಪ್ರಪ್ರಥಮ ಬಾರಿಗೆ ಸ್ತಬ್ದಚಿತ್ರ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.