ದುಬೈ: ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ್ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು.ಇನ್ನೂ 7.3 ಓವರ್ಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ವಿಜಯದ ನಗೆ ಬೀರಿತು.ಪಾಕ್ ನೀಡಿದ್ದ 241 ರನ್ಗಳ ಗುರಿಯನ್ನು ಬೆನ್ನತ್ತಿದ್ದ ರೋಹಿತ್ ಶರ್ಮಾ ಪಡೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 42.3 ಓವರ್ಗಳಲ್ಲಿ 244 ರನ್ ಬಾರಿಸಿ ಗೆಲುವಿನ ಗುರಿ ತಲುಪಿತು.ವಿರಾಟ್ ಕೊಹ್ಲಿ ಆಕರ್ಷಕ
ಸೆಂಚುರಿ ಬಾರಿಸುವ ಮೂಲಕ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 111 ಬಾಲ್ಗಳಲ್ಲಿ 7 ಬೌಂಡರಿ ಸಹೀತ 100 ರನ್ ಗಳಿಸುವ ಮೂಲಕ ಔಟಾಗದೇ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿ ಮಿಂಚಿನ ಸಂಚಾರ ಹರಿಸಿದರು. ಇದಕ್ಕೆ ಶ್ರೇಯಸ್ ಅಯ್ಯರ್ ಸಾಥ್ ಕೊಟ್ಟರು. ಅವರು 67 ಬಾಲ್ಗಳಿಂದ 5 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿದರು. ಶುಭ್ಮನ್ ಗಿಲ್ 52 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಭದ್ರ ಬುನಾದಿ

ಹಾಕಿದರು.ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಲು ಹೋಗಿ ಬೇಗ ನಿರ್ಗಮಿಸಿದರು. ಅವರು 15 ಬಾಲ್ಗಳಿಗೆ 20 ರನ್ ಬಾರಿಸಿ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯ 6 ಬಾಲ್ಗೆ 8 ರನ್ ಬಾರಿಸಿ ನಿರ್ಗಮಿಸಿದರು.
ಅಕ್ಷರ್ ಪಟೇಲ್ 3 ರನ್ಗಳ ಕೊಡುಗೆ ನೀಡಿದರು. ಪಾಕ್ ಪರ ಶಾಹೀನ್ ಆಫ್ರಿಧಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, 49.4 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 241 ರನ್ಗಳಿಸಿ, ಭಾರತಕ್ಕೆ 242 ರನ್ಗಳ ಗೆಲುವಿನ ಗುರಿ ನೀಡಿತ್ತು.
ಪಾಕಿಸ್ತಾನದ ಸೌದ್ ಶಕೀಲ್ 62, ಮೊಹಮ್ಮದ್ ರಿಜ್ವಾನ್ 46, ಖುಷ್ದಿಲ್ ಶಾ 38 ರನ್ ಗಳಿಸಿ ತಂಡಕ್ಕೆ ನೆರವಾದರು. ಉಳಿದಂತೆ ಯಾವ ಬ್ಯಾಟರ್ ಕೂಡ ಭಾರತೀಯ ಬೌಲರ್ಗಳ ಎದುರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲ್ಲಿಲ್ಲ.
ಪಾಕ್ ವಿರುದ್ಧ ಭಾರತದ ಬೌಲರ್ಗಳ ಉತ್ತಮ ದಾಳಿ ನಡೆಸಿದರು. ಕುಲದೀಪ್ ಯಾದವ್ 3, ಪಾಂಡ್ಯ 2, ಜಡೇಜ, ರಾಣ ಹಾಗೂ ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.