ಸುಳ್ಯ: ಸುಳ್ಯದ ಮಿನಿವಿಧಾನಸೌಧದ ಬಳಿ ಭಾರತದ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಸುಳ್ಯದ ಸಂವಿಧಾನ ಬದ್ಧ ಸಮಾನ ಮನಸ್ಕರ ಬಳಗದ ವತಿಯಿಂದ
ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ನಿಯೋಗದಲ್ಲಿ ಸಂವಿಧಾನ ಬದ್ಧ ಸಮಾನ ಮನಸ್ಕರ ಬಳಗದ ಸಂಚಾಲಕರಾದ ಎ.ಕೆ. ಇಬ್ರಾಹಿಂ, ಸದಸ್ಯರುಗಳಾದ ಕೆ.ಪಿ.ಜಾನಿ ಕಲ್ಲುಗುಂಡಿ, ಲಕ್ಷೀಶ ಗಬ್ಲಡ್ಕ ಹಾಗೂ ಮಹಮ್ಮದ್ ಕುಂಞಿ ಗೂನಡ್ಕ ಇದ್ದರು.