The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಪಟಪಟನೆ ಉದುರುತ್ತಿರುವ ಅಡಿಕೆ ನಳ್ಳಿ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ.. ಶೇ.30 ರಷ್ಟು ಅಡಿಕೆ ಫಸಲು ನಾಶ.!

by ದಿ ಸುಳ್ಯ ಮಿರರ್ ಸುದ್ದಿಜಾಲ May 31, 2022
by ದಿ ಸುಳ್ಯ ಮಿರರ್ ಸುದ್ದಿಜಾಲ May 31, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಡಿಕೆ ತೋಟಕ್ಕೆ ಹೋದರೆ ಪಟ ಪಟ ಶಬ್ದ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಇದೇನು ಮಳೆ ನಿಂತ ಮೇಲೆ ಮಳೆಯ ಹನಿ ಬೀಳುತ್ತಿದೆಯೇ ಎಂದು ಅಡಿಕೆ ಮರದ ಬುಡ ನೋಡಿದರೆ ಅಲ್ಲಿ ಹರಡಿದಂತೆ ಕಾಣುವ ಎಳೆಯ ಅಡಿಕೆಗಳ ರಾಶಿ. ಹೌದು ಸುಳ್ಯ ತಾಲೂಕಿನ ಬಹುತೇಕ ತೋಟಗಳಲ್ಲಿ ಈಗ ಅಡಿಕೆ ನಳ್ಳಿ ಉದುರುವ ಶಬ್ದಗಳೇ ಕಿವಿಗೆ ಅಪ್ಪಳಿಸುತ್ತದೆ. ತೋಟ ಪೂರ್ತಿ ಮಿಡಿ ಅಡಿಕೆಗಳು ಹರಡಿರುವುದೇ ಕಣ್ಣಿಗೆ ರಾಚುತ್ತದೆ. ನಳ್ಳಿ ಬೀಳುವ ಪಟ ಪಟ ಶಬ್ದ ಕೇಳುತ್ತಿದ್ದಂತೆ ಅಡಿಕೆ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಬೆಳೆಗಾರರ ಹೃದಯವೂ ಪಟ ಪಟ ಬಡಿಯುತ್ತದೆ. ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮಿಡಿ ಅಡಿಕೆ ವ್ಯಾಪಕವಾಗಿ ಉದುರುತ್ತಿದೆ. ತೋಳು ಬೆರಳಿನ ಗಾತ್ರಕ್ಕೆ ಬೆಳೆದ ಹಸಿ ಅಡಿಕೆಗಳು ಕೂಡ ಉದುರುತಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಬಿಟ್ಟ ಹಿಂಗಾರ ಅಡಿಕೆಯಾಗಿ ಚೆನ್ನಾಗಿ ಬೆಳೆತು ಬರುತ್ತಿತ್ತು. ಹೀಗೆ ಬೆಳೆದ ಅಡಿಕೆಗಳು ಉದುರಲು ಆರಂಭಿಸಿತ್ತು. ಸಣ್ಣ ಮಿಡಿ ಅಡಿಕೆ ಬೀಳಲು ಆರಂಭಿಸಿ ಅದು ತೀವ್ರಗೊಂಡು ಅಡಿಕೆ ಮರಗಳೇ ಬೋಳಾಗಿದೆ. ಅಡಿಕೆ ಮರಗಳಲ್ಲಿರುವ ಅಡಿಕೆ ನಳ್ಳಿ ಪೂರ್ತಿ ಉದುರಿ ಹೋಗಿದೆ. ಹಿಂಗಾರವೂ ಕಪ್ಪು ಒಣಗಿ ಬಣ್ಣಕ್ಕೆ ತಿರುಗಿದೆ.ಸುಮಾರು ಶೇ.30 ರಷ್ಟು ಅಡಿಕೆ ಮರಗಳಲ್ಲಿ ಪೂರ್ತಿಯಾಗಿ ನಳ್ಳಿ ಉದುರಿ ನಾಶವಾಗಿದೆ. ಈಗಲೂ ನಿರಂತರ ಉದುರುತ್ತಲೇ ಇದೆ ಎನ್ನುತ್ತಾರೆ ಕೃಷಿಕರು.
ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಆರಂಭದಲ್ಲಿಯೇ ಅಡಿಕೆಗೆ ದೊಡ್ಡ ಹೊಡೆತ ಬಿದ್ದಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ. ಹಳದಿ ರೋಗ ಬಾದೆಯಿಂದ ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಡಿಕೆ ಕೃಷಿ ನಾಶವಾಗಿದೆ. ಇದರ ಜೊತೆಗೆ ಇದ್ದ ಅಲ್ಪ ಸ್ವಲ್ಪ ಅಡಿಕೆಯೂ ನಳ್ಳಿ ಹಂತದಲ್ಲಿಯೇ ಧರಾಶಾಹಿಯಾಗುತಿರುವುದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಡಿಕೆ ತೋಟದಲ್ಲಿ ಉದುರಿರುವ ಎಳೆ ಅಡಿಕೆ

ಹವಾಮಾನ ವೈಪರೀತ್ಯದ ಹೊಡೆತ:
ಕೃಷಿಕರು ಹೇಳುವ ಪ್ರಕಾರ ಕಳೆದ ಮೇಯಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಏರಿದ ಉಷ್ಣಾಂಶ ಅಡಿಕೆ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಕಾಲಿಕ ಮಳೆ‌ ಮತ್ತು ಏರಿದ ಉಷ್ಣಾಂಶ ತಾಳಲಾರದೆ ಅಡಿಕೆ ನಳ್ಳಿ ಬೀಳಲು ಆರಂಭಿಸಿದೆ. ಚೆನ್ನಾಗಿ ಬೆಳೆದು ಬರುತ್ತಿದ್ದ ಹಸಿ ಅಡಿಕೆ ಮಿಡಿಗಳು ಕೂಡ ಹವಾಮಾನದ ವೈಫರೀತ್ಯಕ್ಕೆ ಸಿಲುಕಿ ಮರದ ಬುಡ ಸೇರಿದೆ. ಕೆಲವು ಕೀಟಗಳು ಮತ್ತು ಮಳೆ ಬರುವ ಸಂದರ್ಭದಲ್ಲಿ ದಾಳಿ ಮಾಡುವ ಫಂಗಸ್‌ಗಳು ಕೂಡ ಈ ರೀತಿ ಅಡಿಕೆ ನಳ್ಳಿ ವ್ಯಾಪಕವಾಗಿ ನಾಶವಾಗಲು ಕಾರಣವಾಗಿದೆ. ಫಂಗಸ್ ದಾಳಿಯಿಂದ ಮತ್ತು ಕೆಲವು ಕೀಟಗಳು ಅಡಿಕೆಯ ರಸವನ್ನು ಹೀರುವ ಕಾರಣದಿಂದ ಅಡಿಕೆ ನಳ್ಳಿ ಬಲ ಕಳೆದುಕೊಂಡು ಹಿಂಗಾರದಿಂದ ಕಳಚಿಕೊಳ್ಳುತ್ತದೆ. ಮಳೆ, ಉಷ್ಣಾಂಶದ ಏರಿಕೆಯಿಂದ ಪರಾಗಸ್ಪರ್ಶ ಪ್ರಕ್ರಿಯೆಗಳು ಸರಿಯಾಗಿ ನಡೆಯದ ಸ್ಥಿತಿ ಉಂಟಾಗಿ ಹೊಸ ಹಿಂಗಾರದಲ್ಲಿ ಅಡಿಕೆ ಮಿಡಿ ಬಿಡುವುದೂ ನಿಧಾನವಾಗಿದೆ ಎಂಬುದು ಕೃಷಿಕರ ಅಭಿಪ್ರಾಯ. ಏಪ್ರಿಲ್-ಮೇ ತಿಂಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಸರಾಸರಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಕೆಲವು ದಿನ 40 ಡಿಗ್ರಿವರೆಗೂ ಏರಿತ್ತು. ಅಲ್ಲದೆ ಮೇ ತಿಂಗಳಲ್ಲಿ ದಾಖಲೆಯ ಮಳೆಯೂ ಸುರಿಯಿತು. ನಿರಂತರ ಮೋಡ ಕವಿದು ಜಡಿ ಮಳೆಯ ವಾತಾವರಣ ಇತ್ತು. ಅಕಾಲಿಕವಾಗಿ ಮಳೆ ಸುರಿದ ಕಾರಣ ಔಷಧಿ ಸಿಂಪಡಿಸಲೂ ಸಾಧ್ಯವಾಗಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ.

ನಳ್ಳಿ ಉದುರಿ ಬೋಳಾಗಿರುವ ಅಡಿಕೆ ಮರ


ಅಡಿಕೆಗೆ ಉತ್ತಮ ಧಾರಣೆ ಇರುವ ಕಾರಣ ಹಾಗು ಇಲ್ಲಿನ ಕೃಷಿಕರಿಗೆ ಅಡಿಕೆಯೇ ಜೀವನಾಧಾರ ಆಗಿರುವ ಕಾರಣ ಎಲ್ಲರೂ ಅಡಿಕೆ ತೋಟಕ್ಕೆ ಸಾಕಷ್ಟು ಖರ್ಚು ಮಾಡಿ ಅಡಿಕೆ ತೋಟವನ್ನು ಹಾರೈಕೆ ಮಾಡುತ್ತಾರೆ. ಇದರಿಂದ ಉತ್ಪಾದನಾ ವೆಚ್ಚವೂ ಏರುತಿದೆ. ಆದರೆ ಹವಾಮಾನ ವೈಪರೀತ್ಯ ಪ್ರತಿ ಬಾರಿಯೂ ಮಾರಕವಾಗಿ ಪರಿಣಮಿಸುತಿದೆ. ಕಳೆದ ವರ್ಷ ಡಿಸೆಂಬರ್‌ವರೆಗೂ ಮುಂದುವರಿದ ಮಳೆಯಿಂದ ಅಡಿಕೆ‌ ಒಣಗಿಸಲಾಗದೆ ಕರಗಿತ್ತು. ಕೆಲವು ಲಕ್ಷ ಖರ್ಚು ಮಾಡಿ ಅಡಿಕೆ ಒಣಗಿಸುವ ಗೂಡು ನಿರ್ಮಿಸಬೇಕಾಗಿ ಬಂದಿತ್ತು. ಇದೀಗ ಈ ವರ್ಷ ವಿಪರೀತ ಉಷ್ಣಾಂಶ ಮತ್ತು ಅಕಾಲಿಕ ಮಳೆ ಮಾರಕವಾಗಿ ಪರಿಣಮಿಸಿದೆ. ಹವಾಮಾನ ವೈಪರೀತ್ಯ, ಫಂಗಸ್ ಮತ್ತು ಕೀಟಗಳ ಬಾದೆಯಿಂದ ನಳ್ಳಿ ಉದುರುವುದು ಕಂಡು ಬರುತ್ತದೆ. ನಿಯಮಿತವಾಗಿ ಔಷಧಿ ಸಿಂಪಡಣೆ ಮಾಡಿದರೆ ಅಡಿಕೆ ಉದುರುವುದರಿಂದ ಮತ್ತು ಕೊಳೆ ರೋಗ ಬಾರದಂತೆ ತಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

“ಕಳೆದ ಒಂದು ತಿಂಗಳಿನಿಂದ ನಮ್ಮ ತೋಟದಲ್ಲಿ ವ್ಯಾಪಕವಾಗಿ ಅಡಿಕೆ ಉದುರುತಿದೆ. ತೋಟ ಪೂರ್ತಿ ಮಿಡಿ ಅಡಿಕೆಗಳೇ ಹರಡಿಕೊಂಡಿದೆ. ಬಹುತೇಕ ಅಡಿಕೆ ಮರಗಳು ಖಾಲಿಯಾಗಿದೆ. ಶೇ.30ರಷ್ಟು ಅಡಿಕೆ ಫಸಲು ನಳ್ಳಿ ರೂಪದಲ್ಲಿ ಉದುರಿ ಬಿದ್ದಿದೆ”
-ಜಯಪ್ರಕಾಶ್.ಕೆ.
ಕೃಷಿಕರು.ಪೇರಾಲು

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಶಾಲಾ ಆವರಣ ಗೋಡೆಯಲ್ಲಿ ಅರಳಿದ ಅಮರ ಸುಳ್ಯ ಕ್ರಾಂತಿಯ ಇತಿಹಾಸ..:ಅಮೈ ಮಡಿಯಾರು ಶಾಲೆಯ ಆವರಣ ಗೋಡೆಯಲ್ಲಿ ಚಾರಿತ್ರಿಕ ಉಬ್ಬು ಶಿಲ್ಪಗಳು.
next post
ಕಲ್ತಪ್ಪಂ‌ ಸ್ಪೆಷಲ್ ಹೋಟೆಲ್.. ಸುಳ್ಯ ಪಂಜಿಗಾರಿನ ಈ ಹೋಟೆಲ್‌ನ ಕಲ್ತಪ್ಪಂನ ರುಚಿಯೇ ಭಿನ್ನ..

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ ಸಾಧ್ಯತೆ:...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಬೃಹತ್ ಮೊತ್ತದತ್ತ ಆಸ್ಟ್ರೇಲಿಯ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ