The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಕಲ್ತಪ್ಪಂ‌ ಸ್ಪೆಷಲ್ ಹೋಟೆಲ್.. ಸುಳ್ಯ ಪಂಜಿಗಾರಿನ ಈ ಹೋಟೆಲ್‌ನ ಕಲ್ತಪ್ಪಂನ ರುಚಿಯೇ ಭಿನ್ನ..

by ದಿ ಸುಳ್ಯ ಮಿರರ್ ಸುದ್ದಿಜಾಲ June 4, 2022
by ದಿ ಸುಳ್ಯ ಮಿರರ್ ಸುದ್ದಿಜಾಲ June 4, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಬಿಸಿ ಬಿಸಿ ಕಲ್ತಪ್ಪಂ ಮುರಿದು ತೆಂಗಿನ ಕಾಯಿ ಚಟ್ನಿ, ಚಿಕನ್‌ ಸಾರು, ಮೀನು ಸಾರು ಅಥವಾ ಸಾಂಬಾರಿಗೆ ಮುಳುಗಿಸಿ ತಿನ್ನಲು ಯಾರಿಗೆ ಇಷ್ಟ ಇಲ್ಲಾ ಹೇಳಿ.. ಈ ಕಲ್ತಪ್ಪಂನ ರುಚಿಯೇ ಹಾಗೇ.. ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಸ್ಥವಾಗಿರುತ್ತದೆ. ಈ ತಿಂಡಿಯ ಬಲು ಅಪರೂಪದ ರುಚಿಯನ್ನು ಅನುಭವಿಸಲು ನೀವು ಬೆಳ್ಳಾರೆ-ಪಂಜ ರಸ್ತೆಯಲ್ಲಿ ಬಾಳಿಲ ಸಮೀಪದ ಪಂಜಿಗಾರಿಗೆ ಬರಬೇಕು. ರಸ್ತೆಯಲ್ಲಿ ಸಾಗುವಾಗ ಪಂಜಿಗಾರಿನಲ್ಲಿ ಒಂದು ಬ್ರೇಕ್ ಹಾಕಿ ಶ್ರೀ ದುರ್ಗಾ ಎಂಬ ಚಿಕ್ಕ ಹೋಟೆಲ್‌ಗೆ ನುಗ್ಗಿ ಒಂದೆರಡು ತುಂಡು ಕಲ್ತಪ್ಪಂ ತಿನ್ನಬೇಕು.. ಕಲ್ತಪ್ಪಂಗೆ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಹೀಗೂ ರುಚಿ ಸಿಗುತ್ತದೆಯೇ ಎಂದು ಅನ್ನಿಸಿ ಬಿಡುವಷ್ಟು ಖುಷಿ ಕೊಡುತ್ತದೆ.. ಕಲ್ತಪ್ಪಂ ಎಲ್ಲಾ ಹೋಟೆಲ್‌ಗಳಲ್ಲಿ ಸರ್ವೇ ಸಾಮಾನ್ಯವಾದ ತಿಂಡಿಯಾದರೂ ಕಲ್ತಪ್ಪಂ ರುಚಿಯಿಂದಲೇ ‘ಫೇಮಸ್’ ಆದ ಹೋಟೆಲ್ ಕೊಡಿಯಾಲದ ಕೃಷ್ಣಪ್ಪ ಗೌಡರು ನಡೆಸುವ ಶ್ರೀ ದುರ್ಗಾ ಹೋಟೆಲ್. ಕಳೆದ 30 ವರ್ಷಗಳಿಂದ ಶ್ರೀ ದುರ್ಗಾ ಹೋಟೆಲ್ ಕಲ್ತಪ್ಪಂನ ಭಿನ್ನ ರುಚಿಯನ್ನು ಉಣ ಬಡಿಸುತ್ತಿದೆ. ಬೆಳಿಗ್ಗೆ 5.30 ಕ್ಕೆ ಆರಂಭಗೊಂಡು ರಾತ್ರಿ ತನಕ ಮಧ್ಯಾಹ್ನದ ಒಂದೆರಡು ಗಂಟೆ ಊಟದ ಸಮಯ ಬಿಟ್ಟು ಉಳಿದ ಸಮಯದಲ್ಲಿ ಇಲ್ಲಿ ಕಲ್ತಪ್ಪದ್ದೇ ಕಾರುಬಾರು. ಬಂದವರೆಲ್ಲಾ ಕೇಳುವುದು ಕಲ್ತಪ್ಪಂ ಉಂಡಾ.. ರಡ್ಡ್ ಪೀಸ್ ಕಲ್ತಪ್ಪಂ ಕೊರ್ಲೆ.. ನಾಲ್ ಪೀಸ್ ಕಲ್ತಪ್ಪಂ ಪಾರ್ಸೆಲ್ ಬೋಡು.. ಹೀಗೆ ಗಾತ್ರದಲ್ಲಿ ಚಿಕ್ಕದಾದ, ರುಚಿಯಲ್ಲಿ ದೊಡ್ಡದಾದ ಈ ಹೋಟೆಲ್ ಸದಾ ಕಲ್ತಪ್ಪಮಯಂ.. ರುಚಿಕರವಾದ ಕಲ್ತಪ್ಪಂ ತುಂಡು ಮತ್ತು ಅದಕ್ಕೆ ಸಾಥ್ ನೀಡುವ ಸಾರಿನೊಂದಿಗೆ ಸದಾ ಸಮಯ ಇಲ್ಲಿ ಬಿಸಿ ಬಿಸಿ ಕಲ್ತಪ್ಪಂ ರೆಡಿ ಇರುತ್ತದೆ. ಒಲೆಯ ಬಾಣಲೆಯಲ್ಲಿ ಕಲ್ತಪ್ಪಂ ಬೇಯುತ್ತಲೇ ಇರುತ್ತದೆ.. ಅದಕ್ಕಾಗಿಯೇ ಜನರು ಕ್ಯೂನಲ್ಲಿ ಇರುತ್ತಾರೆ. ಪ್ರತಿ ದಿನ ಸುಮಾರು 20 ಕೆಜಿ ಅಕ್ಕಿ ಹಿಟ್ಟಿನ ಕಲ್ತಪ್ಪ ಮಾರಾಟ ಆಗುತ್ತದೆ.

ಕೃಷ್ಣಪ್ಪ ಗೌಡರು ತಮ್ಮ ಹೋಟೆಲ್‌ನಲ್ಲಿ

ಚೆನ್ನಾಗಿ ನೆನೆದ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣಮೆಣಸಿನ ಕಾಯಿ, ಬೇವಿನೆಲೆ, ಸಾಸಿವೆಗಳನ್ನು ಹಾಕಿ ಒಗ್ಗರಣೆ ರೆಡಿಮಾಡಿ. ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಬೇಯಲು ಬಿಡಲಾಗುತ್ತದೆ. ಚೆನ್ನಾಗಿ ಬೆಂದು ಕರಿದು ಕಂದು ಬಣ್ಣಕ್ಕೆ ತಿರುಗುವ ಕಲ್ತಪ್ಪಂ ಬೆಳಗ್ಗಿನಿಂದ ರಾತ್ರಿ ತನಕ ಯಾವ ಹೊತ್ತಿಗೂ ಬಲು ರುಚಿಯಾದ ತಿಂಡಿ. ಆದುದರಿಂದಲೇ ಶ್ರೀ ದುರ್ಗಾ ಹೋಟೆಲ್‌ನ ಕಲ್ತಪ್ಪಂಗೆ ಬೇಡಿಕೆ ಹೆಚ್ಚು. ಕಲ್ತಪ್ಪಂ ಮಾತ್ರ ಅಲ್ಲಾ ಇಲ್ಲಿನ ಊಟದ ರುಚಿಯೂ ಫೇಮಸ್ಸೇ.. ಮಧ್ಯಾಹ್ನದ ಹೊತ್ತಿಗೆ ಇಲ್ಲಿ ಊಟಕ್ಕೂ ಜನ ಕ್ಯೂ ನಿಂತಿರುತ್ತಾರೆ. ಇಲ್ಲಿನ ಮನೆ ಊಟದ ರುಚಿ ನೀಡುವ ಅನ್ನ, ಗಂಜಿ, ಆಮ್ಲೇಟ್, ಕಬಾಬ್, ಮೀನು ಪ್ರೈ, ಮೀನು ಸಾರು, ಚಿಕನ್ ಸಾರು ಅರಸಿ ದೂರದ ಪ್ತದೇಶಗಳಿಂದಲೂ ಜನ ಬರುತ್ತಾರೆ.

ಪಾರ್ಸೆಲ್‌ಗೂ ಸೈ:
ಸ್ಥಳೀಯರು, ವಾಹ‌ನದಲ್ಲಿ ಪ್ರಯಾಣಿಸುವವರು ಸೇರಿ ಪ್ರತಿ ನಿತ್ಯ ನೂರಾರು ಮಂದಿ ಶ್ರೀದುರ್ಗಾ ಹೋಟೆಲ್‌ನ ಕಲ್ತಪ್ಪಂ ತಿನ್ನಲು ಬರುತ್ತಾರೆ. ಜೊತೆಗೆ ಹಲವಾರು ಮಂದಿ ಕಲ್ತಪ್ಪಂ ಪಾರ್ಸೆಲ್ ಪಡೆದುಕೊಂಡು ಹೋಗುತ್ತಾರೆ. ತಾಲೂಕಿನ ವಿವಿಧ ಭಾಗಗಳಿಗೆ ಹೋಗುವ ಬಸ್‌ನ ಸಿಬ್ಬಂದಿಗಳು ಇಲ್ಲಿ ಬಸ್ ನಿಲ್ಲಿಸಿ ಪಾರ್ಸೆಲ್ ಪಡೆದುಕೊಳ್ಳುತ್ತಾರೆ.

ಕೃಷ್ಣಪ್ಪ ಗೌಡರು

ಕಳೆದ ಮೂರು ದಶಕಗಳಿಂದ ರುಚಿಕರವಾದ ಆಹಾರ ಬಡಿಸುವ ‘ಕಲ್ತಪ್ಪಂ ಸ್ಪೆಷಲ್’ ಹೋಟೆಲ್ ಹಿತ ಮಿತವಾದ ದರದಲ್ಲಿ ಆಹಾರ ನೀಡುತ್ತಾರೆ. ಕೃಷ್ಣಪ್ಪ ಗೌಡರ ಜೊತೆ ಪತ್ನಿ ಲೀಲಾವತಿ, ಅಣ್ಣನ ಮಕ್ಕಳಾದ ಬಾಲಕೃಷ್ಣ, ಶರತ್ ಹೋಟೆಲ್ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಕೃಷ್ಣಪ್ಪ ಕುಲಾಲ್ ಮಸಾಲೆ ರೆಡಿ ಮಾಡಲು ಮತ್ತಿತರ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಈಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹೋಟೆಲ್ ಉದ್ಯಮ ಲಾಭದಾಯಕವಾಗಿಲ್ಲ ಎನ್ನುತ್ತಾರೆ ಕೃಷ್ಣಪ್ಪ ಗೌಡರು. ಆದರೂ ತಮ್ಮ ಹೋಟೆಲ್‌ನ ರುಚಿ ಮತ್ತು ಗುಣಮಟ್ಟದಲ್ಲಿ ಕಡಿಮೆ ಮಾಡಲು ಆಗುವುದಿಲ್ಲಾ ಎನ್ನುತ್ತಾರವರು.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಪಟಪಟನೆ ಉದುರುತ್ತಿರುವ ಅಡಿಕೆ ನಳ್ಳಿ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ.. ಶೇ.30 ರಷ್ಟು ಅಡಿಕೆ ಫಸಲು ನಾಶ.!
next post
ರಾಜಾಸೀಟ್ ನೆನಪಿಸುತಿದೆ ಕುರುಂಜಿಗುಡ್ಡೆ ಪಾರ್ಕ್…ಸುಳ್ಯ ನಗರಕ್ಕೆ ಮುಕುಟ ಮಣಿಯಾಗಿ ರೂಪುಗೊಂಡಿದೆ ಸುಂದರ ಉದ್ಯಾನ.

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಕಲ್ಲುಗುಂಡಿ: ಬರೆಯುವ ಪುಸ್ತಕ ವಿತರಣೆ, ಸನ್ಮಾನ

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

ಜೂ.10ರಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮಾಜಿ ಸಚಿವ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ