ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಟಿ ಪೊರ್ಲು ಕಾರ್ಯಕ್ರಮ ಆ.15ರಂದು ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ
ಉಪನ್ಯಾಸಕ ಕಿಶೋರ್ ಕುಮಾರ್ ಕಿರ್ಲಾಯ ಆಟಿ ಆಚರಣೆಗಳ ಕುರಿತು ಉಪನ್ಯಾಸ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕೋಶಾಧಿಕಾರಿ ರಮೇಶ್ ಶೆಟ್ಟಿ,ಕಾರ್ಯಕ್ರಮ ಸಂಯೋಜಕರಾದ ಲೋಕೇಶ್ ಊರುಬೈಲು, ಜಯರಾಮ ದೇರಪ್ಪಜ್ಜನಮನೆ, ಲತಾ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಅಧ್ಯಕ್ಷ ರಾಮಕೃಷ್ಣ ರೈ ಸ್ವಾಗತಿಸಿ, ಲತಾ ಕುದ್ಪಾಜೆ ವಂದಿಸಿದರು. ರೂಪಕಲಾ ರೈ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಕಾರ್ಯಕ್ರಮವವನ್ನು ನಿವೃತ್ತ ಇಂಜಿನಿಯರ್ ಚಂದ್ರಶೇಖರ ಗೌಡ ಉದ್ಘಾಟಿಸಿದರು.

ಆಟಿ ಸಂಸ್ಕೃತಿಯನ್ನು ಬಿಂಬಿಸುವ ಆಟಿ ವೈವಿಧ್ಯ:
ಕಾರ್ಯಕ್ರಮದಲ್ಲ ವಿವಿಧ ಸ್ಪರ್ಧೆಗಳು ಮತ್ತು ಆಟಿ ಸಂಸ್ಕೃತಿಯ ಅನಾವರಣ, ಮನರಂಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಉಪನ್ಯಾಸದ ಜೊತೆಗೆ ವೈವಿಧ್ಯಮಯ ಖಾದ್ಯಗಳೊಂದಿಗೆ ಆಟಿ ಭೋಜನ ನಡೆಯಿತು.ಚೆನ್ನಮಣೆ ಸ್ಪರ್ಧೆ, ಸೋಬಾನೆ ಸ್ಪರ್ಧೆ, ಸ್ಥಳದಲ್ಲೇ ಅರೆಭಾಷೆ ಕವನ ರಚನೆ ಸ್ಪರ್ಧೆ, ದಂಪತಿ ಸ್ಪರ್ಧೆ ಮತ್ತಿತರ ಸ್ಪರ್ಧೆಗಳು, ಆಟಿ ಕಳಂಜ, ತೆಂಗಿನಕಾಯಿ ಕುಟ್ಟುವುದು,ನೃತ್ಯ ಹಾಗೂ ಅರೆಭಾಷೆ ಸೋಬಾನೆ ಹಾಡು ನಡೆಯಿತು.

ಆಟಿ ಖಾದ್ಯಗಳ ಊಟೋಪಚಾರ ವಿಶೇಷತೆಯಾಗಿತ್ತು.
ಹಲಸಿನ ಹಣ್ಣಿನ ಮುಳ್ಳ, ಹಲಸಿನ ಹಪ್ಪಳ, ಕಷಾಯ
ಮಸಾಲ ಗೋಡಂಬಿ, ಆಟಿ ಪಾಯಸ, ಪತ್ರೊಡೆ ಮೂಡೆ ಹಿಟ್ಟು, ತೆಂಗಿನ ಕಾಯಿ ಚಟ್ನಿ, ತುಪ್ಪ ಪುಂಡಿ, ಅವರೆ ಬಟಾಟೆ ಗೋಡಂಬಿ ಗಸಿ, ಪೊರ್ಕ್ ಡ್ರೈ, ಚಿಕನ್ ಪುಳಿಮುಂಚಿ, ಅನ್ನ, ಮಿಕ್ಸ್ ಸಾಂಬಾರ್, ಇಟ್ಟಿ ಚಟ್ನಿ, ಚಿಬಿರೆ-ಬಳ್ಳಿಕಾರ್ ಗಸಿ ಕಣಿಲೆ-ಹೆಸರುಕಾಳು ಗಸಿ, ತಿಮರೆ ಚಟ್ನಿ, ಪಾಯಸ, ತುಪ್ಪ ಬಾಳೆಹಣ್ಣು ಹೀಗೆ ವೈವಿಧ್ಯಮಯ ಆಟಿ ಖಾದ್ಯಗಳನ್ನು ಬಡಿಸಲಾಯಿತು.