The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಪತ್ರಿಕಾ ದಿನಾಚರಣೆಯ ವಿಶೇಷ: ‘ನವಭಾರತ’ದ ನೆನಪು ಮತ್ತು ಆ ಹಳೇಯ ಬೋರ್ಡ್..!

by ದಿ ಸುಳ್ಯ ಮಿರರ್ ಸುದ್ದಿಜಾಲ July 1, 2022
by ದಿ ಸುಳ್ಯ ಮಿರರ್ ಸುದ್ದಿಜಾಲ July 1, 2022
Share this article

*ಶಿವಸುಬ್ರಹ್ಮಣ್ಯ ಕಲ್ಮಡ್ಕ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮಾತಾಗಿದ್ದ ‘ನವಭಾರತ ‘ ದ ಜಾಹೀರಾತು ಫಲಕ ಇದು.ಈ ಪತ್ರಿಕೆ ಮುಚ್ಚಿ ಮೂರು ದಶಕಗಳಿಗೂ ಹೆಚ್ಚು ವರ್ಷಗಳು ಸಂದರೂ ಸುಳ್ಯ ತಾಲೂಕಿನ ಬೆಳ್ಳಾರೆ ಟೌನ್ ರಸ್ತೆಯ ಹಳೆಯ ಕಟ್ಟಡದ ಗೋಡೆಯಲ್ಲಿ ಚೌಕಟ್ಟಿನಲ್ಲಿ ನವಭಾರತ ಪತ್ರಿಕೆಯ ಹೆಸರಿನ ಫಲಕ ಥಟ್ಟನೆ ಕಣ್ಣು ಸೆಳೆಯುತ್ತದೆ. ಸ್ಥಳೀಯರಾದ ದಿವಂಗತ ಶ್ಯಾಮ ಜೋಶಿ ಅವರು ಅಂದು ಪತ್ರಿಕಾ ಏಜೆನ್ಸಿ ನಡೆಸುತ್ತಿದ್ದರು. ತಂದೆಯವರ ನಂತರ ಪುತ್ರ ಸುಬ್ರಹ್ಮಣ್ಯ ಜೋಶಿ ಈ ಏಜೆನ್ಸಿ ನಡೆಸಿದರು. ಆದರೆ ನವಭಾರತ ಆಗಲೇ ಹಳೆಯದಾಗಿ ಮುಚ್ಚಿದ್ದರಿಂದ ನವಭಾರತವನ್ನು ಓದುಗರಿಗೆ ಕೊಡುವ ಅವಕಾಶ ಸುಬ್ರಹ್ಮಣ್ಯ ಜೋಶಿಯವರಿಗೆ ಸಿಗಲಿಲ್ಲ. ಆಗ ಮಾರುಕಟ್ಟೆಯಲ್ಲಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಬೆಳ್ಳಾರೆ ಪೇಟೆಯ ಕಟ್ಟಡದಲ್ಲಿರುವ ನವಭಾರತ ಪತ್ರಿಕೆಯ ಬೋರ್ಡ್

ಪ್ರಬಲವಾಗಿದ್ದ ಜಿಲ್ಲೆಯ ಪ್ರಮುಖ ಪತ್ರಿಕೆಗಳಾದ ಮುಂಗಾರು ಮತ್ತು ಉದಯವಾಣಿ ಪತ್ರಿಕೆಗಳು ಹಾಗು ಇತರ ಮಾಸಿಕಗಳ ಮಾರಾಟ ಮಾಡುವ ಅವಕಾಶ ಸುಬ್ರಹ್ಮಣ್ಯ ಜೋಶಿ ಅವರಿಗೆ ಸಿಕ್ಕಿತು. 60-70ರ ದಶಕಗಳಲ್ಲಿ ಅಪ್ಪನ ಕೆಲಸದ ಬದ್ಧತೆಯನ್ನು ಪುತ್ರ ಸುಬ್ರಹ್ಮಣ್ಯ ಹೀಗೆ ನೆನಪಿಸುತ್ತಾರೆ.
-‘ಕೃಷಿಕರಾಗಿದ್ದ ನನ್ನ ಅಪ್ಪನವರು, ವೈದ್ಯ ಡಾ. ಮಹಾಲಿಂಗ ಭಟ್ಟರ ಕ್ಲಿನಿಕ್ ನಲ್ಲಿ ಕಂಪೌಂಡರ್ ಕೆಲಸವನ್ನೂ ಮಾಡುತ್ತಿದ್ದರು. ಅಡಿಕೆ ಬೆಳೆಗಾರರಿಗೆ ಮಾರಾಟಕ್ಕೆ ಅನುಕೂಲವಾಗಲು ಅಡಿಕೆ ವ್ಯಾಪಾರ ಕೂಡಾ ಮಾಡುತ್ತಿದ್ದರು. ಸ್ಥಳೀಯರಿಗೆ ಓದುವ ಸಂಸ್ಕೃತಿ ಹೆಚ್ಚಿಸಬೇಕೆಂಬ ಉದ್ದೇಶದಿಂದ ಪೇಪರ್ ಏಜೆನ್ಸಿ ಆರಂಭಿಸಿದರು. ಈ ಏಜೆನ್ಸಿಯಿಂದ ಬರುವ ಕಮಿಷನ್ ಅತ್ಯಲ್ಪವಾದರೂ, ಅವರಿಗೆ ಕೆಲಸದಲ್ಲಿ ಬದ್ಧತೆ ಇತ್ತು. ಅಂದಿನ ಕಾಲದಲ್ಲಿ ಅಪ್ಪನವರು ಹತ್ತಿರದ ಕಲ್ಮಡ್ಕ, ಚೊಕ್ಕಾಡಿ, ಬಾಳಿಲ, ಮುಂಡುಗಾರುವರೆಗೆ ಪತ್ರಿಕೆ ತಲುಪಿಸುತ್ತಿದ್ದರು. ಕುಕ್ಕೆ ಸುಬ್ರಹ್ಮಣ್ಯದವರೆಗೂ ಸೈಕಲ್ ತುಳಿದೇ ಹೋಗಿ ಪತ್ರಿಕೆ ವಿತರಿಸಿದ ಕಾಲವೂ ಆಗಿನದು. ಪತ್ರಿಕೆ ಆ ಭಾಗದ ಬುದ್ಧಿವಂತ ಜನರಿಗೆ ತಲುಪಿದರೆ , ಓದುವ ಆಸಕ್ತಿ‌ ವೃದ್ಧಿಯಾಗುತ್ತದೆ ಎಂಬುದೊಂದೇ ಅಪ್ಪನ ಆಶಯವಾಗಿತ್ತು. ನಾನು ಏಜೆನ್ಸಿ ತೆಗೆದುಕೊಳ್ಳುವಾಗ ಕಾಲ ಬದಲಾಗಿತ್ತು. ಊರುಗಳಿಗೆ ಬಸ್ ವ್ಯವಸ್ಥೆ ಹಾಗೂ ಖುದ್ದಾಗಿ ಬಂದು ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು. ಅಪ್ಪನ ವಿಶೇಷ ಆಸಕ್ತಿಯಿಂದಲೇ ಆ ಜಾಹೀರಾತು ಫಲಕ ಕಟ್ಟಡದ ಗೋಡೆಯಲ್ಲಿ 40-45 ವರ್ಷಗಳ ಹಿಂದೆಯೇ ಹಾಕಲಾಗಿತ್ತು. ಕಾಕತಾಳೀಯ ಎಂಬಂತೆ ನಾವು ಸಹೋದರರು ಆ ಕಟ್ಟಡದಲ್ಲಿದ್ದ ಜವಳಿ ಮಾರಾಟ ಮಳಿಗೆಯನ್ನು ಬೇರೆಡೆಗೆ ಸ್ಥಳಾಂತರಿಸಿದರೂ ಫಲಕ ಮಾತ್ರ ಅಲ್ಲೇ ಇದೆ. ಪತ್ರಿಕೆಗಳ ಮಾರಾಟ ಮಳಿಗೆಯೂ ಹಳೇ ಕಟ್ಟಡದಲ್ಲಿ ನಿಂತಿತು. ಆದರೆ, ನವಭಾರತದ ನೆನಪೂ ಇನ್ನು ಹಸಿರಾಗಿಯೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಆ ಜಾಹೀರಾತು ಬೋರ್ಡ್ ಕೂಡಾ‌ ಕಟ್ಟಡದ ಗೋಡೆಯಲ್ಲಿ ಇದೆ’. ಪತ್ರಿಕೆಯ ನೆನಪು…..

ಅಂದಹಾಗೆ, ನವಭಾರತ ಜಾಹೀರಾತು ಫಲಕದ ಬಗ್ಗೆ ಹೇಳಿದ ಮೇಲೆ ಪತ್ರಿಕೆ ಬಗ್ಗೆ ನಾಲ್ಕು ಮಾತು ಹೇಳದಿದ್ದರೆ ತಪ್ಪಾದೀತು. ಹಿರಿಯ ಪತ್ರಕರ್ತ, ಮನೋಹರ ಪ್ರಸಾದ್ ನವಭಾರತದ ಬಗ್ಗೆ ಹೀಗೆ ನೆನಪಿಸುತ್ತಾರೆ.
”ರಟ್ಟಿನಲ್ಲೇ ಬರೆದಿದ್ದ ಜಾಹೀರಾತು ಫಲಕ ಕ್ರಮೇಣ ಮರದ ಚೌಕಟ್ಟು, ಕಬ್ಬಿಣದ ಚೌಕಟ್ಟು ಆಯಿತು. ಪತ್ರಿಕೆ ಇಲ್ಲಿ ಲಭ್ಯವಿದೆ ಎಂಬ ಜಾಹೀರಾತು ಬೋರ್ಡ್ ಅಳವಡಿಸುತ್ತಿದ್ದರು. ನವಭಾರತ ಸಿಪಿಸಿ ಬಸ್ ಸರ್ವೀಸ್ ಮೂಲಕ ಪತ್ರಿಕೆ ಸರಬರಾಜು ಮಾಡುತ್ತಿದ್ದುದರಿಂದ ಪ್ರಸಾರ ಸಂಖ್ಯೆ 60-70 ರ ದಶಕದಲ್ಲಿ 30,000 ದಾಟಿದ್ದು ಸಾಧನೆಯೇ. ಎಸ್.ವಿ.ಕುಡ್ವ ಅವರಿಂದ ಸ್ಥಾಪನೆಯಾದ ನವಭಾರತ ವಿ.ಸಂಜೀವ ಕುಡ್ವ ಅವರವರೆಗೆ ನಡೆಯಿತು.

ಶಿಂಗಣ್ಣನವರ ಕಾರ್ಟೂನ್‌ಗಳು, ಎಂ.ವಿ.ಹೆಗ್ಡೆಯವರ ಅರ್ಥಗರ್ಭಿತ ವಾರ್ತೆಗಳು ಎಂಬ ಕಾಲಂ ಓದುಗರನ್ನು ಅತಿ ಹೆಚ್ಚು ಸೆಳೆದಿತ್ತು.. ನವಭಾರತ ಪತ್ರಿಕೆ ಇದ್ದ ಸ್ಥಳದಲ್ಲಿ ಈ ಓಷನ್ ಪರ್ಲ್ ಹೋಟೆಲ್ ಇದೆ. ಮುದ್ರಣವಾಗುತ್ತಿದ್ದ ಸ್ಥಳ ಈಗ ಫ್ಲಾಟ್ ಆಗಿದೆ. ಹಳೆಯ ಸಂಚಿಕೆ ಇಟ್ಟುಕೊಂಡವರಿಗಷ್ಟೇ ನವಭಾರತದ ನೆನಪು ಹಸಿರಾಗಿ ಇರಬಹುದು.1970ರ ನಂತರ ನವಭಾರತ ಪತ್ರಿಕೆ ಹೊರ ಬಂದದ್ದೇ ಒಂದು ಪವಾಡ. ಹೊಸ ಪತ್ರಿಕೆಗಳು ಮಾರುಕಟ್ಟೆಗೆ ಬಂದಾಗ ಪೈಪೋಟಿ ನೀಡಲು ನವಭಾರತಕ್ಕೆ ಸಾಧ್ಯವಾಗದೆ ಹಳತಾಯಿತು. ಪ್ರಸಾರ ಸಂಖ್ಯೆ ಅತಿ ಕಡಿಮೆಗೆ ಇಳಿದು, ನಿಂತೇ ಹೋಯಿತು. ಕಾಲೇಜು ವಿದ್ಯಾರ್ಥಿ ಅಗಿದ್ದಾಗಲೇ ನನ್ನ ಕಥೆ ‘ಬಾಡಿದ ಬಳ್ಳಿ’ ನವಭಾರತ ಪುರವಣಿಯಲ್ಲಿ ಪ್ರಕಟವಾಗಿತ್ತು ಎಂದು ಹೇಳಲು ಹೆಮ್ಮೆ’.
ಎಂದು ನೆನಪಿಸುತ್ತಾರವರು.

ಶಿವಸುಬ್ರಹ್ಮಣ್ಯ ಕಲ್ಮಡ್ಕ

(ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಹಿರಿಯ ಪತ್ರಕರ್ತರು. ನಾಡಿನ ಪ್ರಮುಖ ಕನ್ನಡ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ಪರಿಸರ ವನ್ಯಜೀವಿ ಛಾಯಾಚಿತ್ರಗ್ರಾಹಕರು)

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ರಾಜಾಸೀಟ್ ನೆನಪಿಸುತಿದೆ ಕುರುಂಜಿಗುಡ್ಡೆ ಪಾರ್ಕ್…ಸುಳ್ಯ ನಗರಕ್ಕೆ ಮುಕುಟ ಮಣಿಯಾಗಿ ರೂಪುಗೊಂಡಿದೆ ಸುಂದರ ಉದ್ಯಾನ.
next post
ಸುಳ್ಯಕ್ಕೆ 110 ಕೆವಿ ವಿದ್ಯುತ್ ಲೈನ್ ಅರಣ್ಯದ‌ ಮೂಲಕ ಎಳೆಯಲು ಪರಿಸರ ಇಲಾಖೆಯ ಅನುಮತಿ: ಸದ್ಯದಲ್ಲಿಯೇ 110 ಸಬ್ ಸ್ಟೇಷನ್ ಕಾಮಗಾರಿ ಆರಂಭ: ಸಚಿವ ಅಂಗಾರ

You may also like

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ...

June 8, 2023

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ